Home / ಕವನ / ಕವಿತೆ / ರೊಕ್ಕದ ರೇಸು

ರೊಕ್ಕದ ರೇಸು

ರೊಕ್ಕದ ರೇಸು ಹೊಂಟೈತೆ ತಗೊ
ಸಿಕ್ಕಿದ ದಾರಿಯೆ ಹಿಡಿದೈತೆ

ನನಗೇ ತನಗೇ ಎನ್ನುತ ನುಗ್ಗಿದೆ
ಬಾಚುತ ದೋಚುತ ಗಳಿಸುತ ಬಲಿಯುತ
ಓಡಲಾಗದೇ ಕಂಗೆಟ್ಟವರನು
ತೊತ್ತಳ ತುಳಿಯುತ ಸಾಗೈತೆ

ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ
ಗೂಡು ಇಲ್ಲದೆ ಪಾಡು ಇಲ್ಲದೆ
ನರಳುವ ಮಂದಿ ಹೊರಳಾಡೈತೆ
ತುಳಿಯುವ ಕಾಲಾಗೆ ಬಿದ್ದೈತೆ

ರೊಕ್ಕದ ದಾರ್ಯಾಗೆ ಕರುಣೆಯು ಬತ್ತೈತೆ
ಹೃದಯವು ಕೊರಡೇ ಆಗೈತೆ
ಮಾನವೀಯತೆಯು ಕೊಳಚೆಯ ಸೇರಿದೆ
ಸವಕಲು ನಾಣ್ಯ ಆಗೈತೆ

ನ್ಯಾಯ ನೀತಿಗಳು ಪ್ರೀತಿ ಮಮತೆಗಳು
ಭಾವುಕ ಭ್ರಮೆಗಳ ಗೊಣಗಾಟ
ದೇಶ ಭಕ್ತಿಯೋ ಕವಿಗಳ ರೋಗ
ರೊಕ್ಕದ ಮುಂದೇ ಹುಡುಗಾಟ

ತಾಯಿಯೆ ಆಗಲಿ ತಂದೆಯೆ ಆಗಲಿ
ರೊಕ್ಕದ ಮುಂದೇ ಮುದಿಹದ್ದು
ಅಣ್ಣ ತಮ್ಮಂದಿರು ಅಕ್ಕ ತಂಗಿಯರು
ಮಾತಾಡಿಸಿದರೆ ವಿಷಮದ್ದು

ಸುತ್ತಲ ಜಗತ್ತು ಕಾಣದ ಹಾಂಗೆ
ಕುರುಡನ ಮಾಡುವುದೀ ರೊಕ್ಕ
ದೀನ ವಾಣಿಗಳು ಕೇಳಿಸದ್ಹಾಂಗೆ
ಕಿವುಡನ ಮಾಡುವುದೀ ರೊಕ್ಕ

ಕೋಮಲ ಭಾವನೆ ಮುಟ್ಟದ ಹಾಂಗೆ
ಕೊರಡುಗಟ್ಟಸುವುದೀ ರೂಕ್ಕ
ಎಲ್ಲರ ಸೌಖ್ಯದ ಆದರ್ಶಗಳನು
ತರಗೆಲೆ ಮಾಡುವುದೀ ರೊಕ್ಕ

ನೆಲೆಯೇ ಇಲ್ಲದವರೆಷ್ಟೇ ಇರಲಿ
ನನ್ನ ಸೈಟುಗಳೂರೂರಲ್ಲಿ
ಕಾಲಲ್ಲಿ ನಡೆವರ ಖರ್ಮಗಳಿರಲಿ
ಹಾರುವೆ ನಾ ಕಾರುಗಳಲ್ಲಿ

ಕಾಸಿಗು ಗತಿಯಿಲ್ಲದ ಕೋಟಿ ಜನ
ಕೋಟಿ ಕೋಟಿಗಳು ನನಗಿರಲಿ
ಚಳಿ ಬಿಸಿಲುಗಳಲ್ಲಿ ಒದ್ದಾಡುವ ಜನ
ಏರ್ ಕಂಡಿಷನ್ನು ಮನೆಯಿರಲಿ

ನೌಕರಿಗಾಗಿ ಲಕ್ಷ ಲಕ್ಷಗಳು
ಕೊಡುವೆನು ನನಗೇನಿಲ್ಲ ಭಯ
ವರದಕ್ಷಣೆಗೋ ಎಷ್ಟು ಲಕ್ಷಗಳು
ಕೇಳಲು ನಾಚಿಕೆ ಏಕಯ್ಯ

ಹರಕು ಬಟ್ಟೆಗಳ ಮಕ್ಕಳ ಮುಂದೆ
ನನ್ನ ಮಗಳ ಬರ್ಥ್‌ಡೇ ಪಾರ್ಟಿ
ವಿಧವಿಧ ತಿಂಡಿ ಷೋಕೀ ಮಂದೀ
ಕಣ್ಣುಕುಕ್ಕುಬೇಕು ಈಪಾಟಿ

ಊರಿಗೇ ಊರೇ ನಿಂತು ನೋಡುವುದು
ರೊಕ್ಕುಳ್ಳ ನಮ್ಮ ಮದುವೆಗಳ
ಸಾವಿರಗಟ್ಟಲೆ ತಿಂದೆಂಜಲದೆಲೆ
ಮುತ್ತಬೇಕು ತಿರುಕರ ಜಗಳ

ರೊಕ್ಕ ಮಾಡುವುದು ಒಂದೇ ಮಂತ್ರ
ರೊಕ್ಕ ಗಳಿಸುವುದೆ ನಮ ತಂತ್ರ
ರೊಕ್ಕವಿದ್ದವನೆ ಮನುಷ್ಯ ಲೋಕದಿ
ಇಲ್ಲದವನೆ ಹೆಣ ಅತಂತ್ರ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...