Home / ಕವನ / ಕವಿತೆ / ದೀಪದ ಬೆಳಕು…

ದೀಪದ ಬೆಳಕು…

ಪಣತಿಯಿದೆ

ಎಣ್ಣೆಯಿದೆ
ಬತ್ತಿಯಿದೆ
ಕಡ್ಡಿಯಿದೆ!
ದೀಪ ಹಚ್ಚುತ್ತಿಲ್ಲ ನಾ…
ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ??
ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ,
ಜಗಮಗಿಸುವ ಚಿನಕುರುಳಿ,
ದಾರಿದೀಪಗಳಿವೆಯೆಂದೇ??
ಎಲ್ಲ ಇದ್ದು,
ಇಲ್ಲದವನಂತೆ,
ಎದ್ದು ದೀಪ ಮುಡಿಸುತ್ತಿಲ್ಲ ನಾ…
ಇಲ್ಲಿದ್ದು ಎದೆಗೊದೆಯಲಾರದೆ,
ವಿಲಿ ವಿಲಿ ಒದ್ದಾಡಿ… ಒದ್ದಾಡಿ…
ಯುಗ ಯುಗಗಳೇ ಉರುಳಿದವು!
ಇದೇ ಹೊಲೆಗೇರಿಲಿ ನನ್ನಪ್ಪ, ತಾತ, ಮುತ್ತಾತರೂ…
ತರತರಗುಟ್ಟಿ,
ಕತ್ತಲ ಕೂಪದಲಿ,
ಕಡು ತಾಪದಲಿ,
ಹಪಹಪಿಸಿ,
ಶತಶತಮಾನಗಳ ನೂಕಿದರು!!!
ಅಪಮಾನಗಳ ಅಳೆ ಅಳೆದು,
ಅಜ್ಞಾನವದ್ದು,
ಕಜ್ಜಿ ನಾಯಿ, ಹಂದಿ, ಇಲಿ, ಹೆಗ್ಗಣ,
ತಿಗಣೆ, ಸುಕ್ಕಾಡಿ, ನೊಣಗಳ ಜತೆ ಜತೆಲಿ,
ಬಿದ್ದ ಪಕ್ಕೇಲಿ, ಬಿದ್ದ ಪರಿಗೇ…
ಬೆಚ್ಚಿ ಬಿದ್ದೆ!
ಗಡ್ಡಕ್ಕೆ ಕಡ್ಡಿ ಕೊರೆದೆ…
ಹಚ್ಚಿದೆ ಹೊಲಗೇರಿಲಿ ದೀಪ
ಪಾಪ! ದೀಪಕ್ಕೇನು ಗೊತ್ತು?
ಪಣತಿ ಕುಂಬಾರಣ್ಣನದು…
ಎಣ್ಣೆ ಗಾಣಿಗರನೆಂದು…
ಬತ್ತಿ ವಕ್ಕಲಿಗನೆಂದು…
ಕಡ್ಡಿ ವೈಶ್ಯನದೆಂದು…
ಅಳುಕೆ??…
ಸೂರ್‍ಯಸ್ತಮಾನದ ಬೆಳಕೇ…
ವಿಶ್ವ ಬೆಳಗಬಲ್ಲೆಯಾ??
ಕಿಡಿ ಕಿಡಿಯಿಂದಲ್ಲವೇ?
ವಿಶ್ವ ಸುಟ್ಟು, ಸುರ್‍ಮಾಂಡ್ಲವಾಗಿದ್ದು, ಮರೆತ್ತಿಲ್ಲ ಸಾಕು!
ಕಡ್ಡಿ, ಗುಡ್ಡನಾ ಸುಡುವಾಗ-
ದೀಪ ಜಗವ ಬೆಳಗುವುದು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...