Home / ಕವನ / ಕವಿತೆ / ದೀಪಾವಳಿ ದಿನ

ದೀಪಾವಳಿ ದಿನ

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ
ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ!
ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?!
ಆದಿಶೇಷನ ತೆರದಿ ಭುಸುಗುಟ್ಟುವೆ!
ಕಣ್ಣು ಗುಡ್ಡೆ… ನಿಗಿ, ನಿಗಿ… ಉರಿವ ಕುಡಿಕೆ, ಬಾಣ!
ಕೈ, ಕಾಲು, ತಲೆ, ಭೂ ಚಕ್ರ…


ಇಲ್ಲ: ಮೊದಲಿಗರು: ಆದಿಗರು: ಮಹಾಧೀರರು:
ಈ ಮಾದಿಗರೇ…
ಈಗ ಇವರು ಕೊಳಗೇರಿಗರು
ಇವರೀಗ-ತಮ್ಮ ತ್ಯಾಗ, ಬಲಿದಾನಕ್ಕೆ, ಬೇಸತ್ತು ಕಣ್ಣೀರಿಡುತ್ತಾ,
ದೀಪಾವಳಿ ಸೂತಕದ ದಿನವಾಗಿದೆ!
ಹೆತ್ತಮ್ಮನ ಭೂಮಿಗೆಪ್ಪು ಕೊಟ್ಟು
ಬಲಿ ಚಿಕ್ರವರ್ತಿನ ಬಲಿಗೊಟ್ಟು
ಹುಟ್ಟು ಹುಟ್ಟಿಸಿದ ತಪ್ಪಿಗೆ,
ಹಟ್ಟಿಲಿರುವ ಪ್ರಾರಬ್ಧ ಕರ್ಮ ನಮ್ಮದು!


ರಾಜ್ಯ ಕಳಕೊಂಡು,
ಬಲಿನ ಮುಂದಿಟ್ಟುಕೊಂಡು,
ತಿರುಬೋಕಿಯಾಗಿ, ದೀಪಾವಳಿ ಹೇಗೆ ಆಚರಿಸುವುದು!?
ಕೊಟ್ಟ ಮಾತಿಗೆ ಕಟ್ಟು ಬಿದ್ದು,
ಪಾತಾಳ ಕಾಣುವುದು ಬಲಿಗೆ ಬೇಕಿತ್ತೇ?
ಬಲಿನ ಕಳಕೊಂಡ ದಿನ,
ನಲಿ ನಲಿದು, ಊರುಕೇರಿ ಕೊಳ್ಳೆ ಹೊಡೆದು,
ಪಟಾಕಿ ಸುಡುವುದು ಯಾರಿಗಾಗಿ?!


ಶಿವದಾರ, ಜನಿವಾರ, ಉಡುದಾರವ
ಹೆಣ್ಣೂ, ಹೊನ್ನು, ಮಣ್ಣು, ಕಣ್ಣು, ಕದ್ದ ಕತೆ ತಿಳೀದೇ?
ಬ್ರಿಟಿಶರ ತಲೆ ಹಿಡಿದು, ತಲೆ ಒಡೆದು, ಗದ್ದುಗೆ ಏರಿದವರೇ,
ಹಳೆದ್ದನ್ನೆಲ್ಲ ತಿರುಚಿ, ಹೊಸದನ್ನು ಗಿಳಿ ಪಾಠವಾಗಿಸಿ,
ವಿಧಾನಸೌಧ, ಪರ್ಲಿಮೆಂಟಲಿ ಕುಂತು,
ಕಣ್ಣೊರೆಸಲು ಮೀಸಲಾತಿ ತಂದವರೇ,
ಜಾತಿ ಜಾತಿಗೆ ಹಿಂದುಳಿಯಲು ಪೈಪೋಟಿ ಮಾಡಿದವರೇ,
ಮಗಳನ್ನಿತ್ತು, ಮಣೆಯನ್ನಿತ್ತರೂ ಮಾದಿಗರಾಗಿ ಉಳಿದದ್ದು ತಿಳಿಯದೇ?!
ಕಾಮಧೇನು ಕೊಟ್ಟು, ನಗಚಕ್ರವಿತ್ತು,
ಸತ್ತ ದನವ ತಿನ್ನುವುದು, ಗೊತ್ತಿಲ್ಲವೇನು??
ಇರುವುದೆಲ್ಲ ನಿಮಗೆ ಕೊಟ್ಟು, ಜೀತಕ್ಕಿರುವುದು ಸುಳ್ಳೇನು?


ನಮ್ಮೆಲ್ಲ ನೋವು, ಆ ಅಲ್ಲನೊಬ್ಬನೇ ಬಲ್ಲ
ಬೆಲ್ಲದಾ ಮಾತುಗಳಿಗೆಲ್ಲ ಹಲ್ಲು ಕಳ್ಕೊಂಬರಿಲ್ಲ!
ಹರ… ಹರಾಽ.. ಬೆಳೆಯಿತಲ್ಲಾ ಹುಲ್ಲು, ಈ ನಿಮ್ಮ ನಾಲಿಗೆ ಮೇಲೆಲ್ಲ…
ತಲೆ ತುಂಬಾ ಜಾತಿ, ಮತದಾ ಭೀತಿ! ಕೋತಿ ನಿಮ್ಮ ಬುದ್ಧಿ…
ಮೈತುಂಬಾ ವಿಭೂತಿ ಪಟ್ಟೆ ಖ್ಯಾತಿ,
ಅಣ್ಣ ಬಸವಣ್ಣನ ಹೆಸರು ಮುಂದಿಟ್ಟುಕೊಂಡು,
ಖಾದಿ, ಖಾಕಿ, ಖಾವಿ ತೊಟ್ಟುಕೊಂಡು,
ದನ, ಜನರ ಕತ್ತು ಕೊಯ್ಯುವಾ ಕಸರತ್ತು ನಿಂತಿಲ್ಲವೇಕೇ?
ಇರುಳು ಕಂಡ ಬಾವಿಗೆ, ಹಗಲು ಬೀಳಿಸಿದ ಕೀರ್ತಿ, ನಿಮ್ಮದಲ್ಲವೇ?!


ಬದುಕ ಕಲಿಸಿದ, ಗುರು ಜಾಂಬವಗೆ, ಕೇರೀಲಿ ಬಿಟ್ಟ ಗುಟ್ಟೇನು?
ಕೆಂಡು ಉಂಡು, ಕೆಂಡ ಉಗುಳುವ ನಮಗೆ, ಭಸ್ಮಾದುಂಡೆ ಯಾಕೇ?
ಶಕ್ತಿವಂತರು ಮೋಸ್ದಾಟಲಿ, ಬಲಿ ತೆಗೆದ ದಿನವೇ, ದೀಪಾವಳಿಯೇಕೇ?
ಮೈಚರ್ಮ ಸುಲಿಸಿಕೊಂಡು, ಮೈಲಾರ ಸೇರಿಕೊಂಡು,
ಮೆಟ್ಟು ತುಳಿದ ತಪ್ಪಿಗೆ, ಕರೆಬಾನಿಲಿ ಬಿದ್ದದ್ದು, ಮರೆತ್ತಿರೇನು?
ಏಳುಕೋಟಿ ನುಂಗಿ, ಏಳು ಬೆಟ್ಟದಲಿ, ಅಡಗಿದ್ದೇ ಪವಾಡವೇನು?
ಸೃಷ್ಠಿಕರ್ತನ ಸೃಷ್ಠಿಸಿ, ಕೇರೀಲುಳಿದವರ ಗೋಳು, ಕೇಳದೇನು?
ಈ ನೆಲ, ಜಲ, ಜನ, ಮನೆ, ಮಠ, ಯುಕ್ತಿ, ಶಕ್ತಿ ಜಾಂಬುವನದಲ್ಲವೇ?
ಶಿವಗೆ ಮದುವೆ ಮಾಡಿ, ಶವ ಹೊತ್ತು, ತಿರುಗಿದ ಕತೆ, ನೆಪ್ಪಿಲ್ಲವೇ?
ಏನೆಲ್ಲ ತಿದ್ದಿ, ಕೋಟೆ, ಮಠ, ಮಾನ್ಯಗಳ ಕೆಡಿವಿ…
ಅಟ್ಟ ಹಾಸದಿ, ಮೆಟ್ಟಿ ಮೆರೆದ ತಪ್ಪಿಗೆ, ಬಲಿಗೆ ಬಲಿ ಸಿದ್ಧ…
ಜೋಕಾಲೀಲಿ, ಇನ್ನೆಶ್ಟು ದಿನವಿಲ್ಲಿ, ಜೀಕುವಿರಿ?!
ಗಡಿಗೆ ಬಾಣದಿ, ಸಿಡಿವ ದಿನವಿಲ್ಲಿ, ದೀಪಾವಳಿ.


ವಾಮನ ರೂಪದಿ, ತುಳಿದ ಕಾಲ ಕೋಪದಿ ಹುಡುಕುವೆ,
ಕರಾ ಕರಾ ರಂಪಿಗೆ ಕೈಯೊಳ್ ಈಗೋ ಕುಳಿತ್ತಿರುವೆ,
ಪಾಲೀಶ್ ಮಾಡುತಾ, ಕಾಲನು ಕೊಯ್ದೆ ಇಕ್ಕುವೆ!
ಕಟುಕನು ನಾ! ಪ್ರಾಣಿಗಳ ತಲೆಗಳ ತರಿವೆ ದಿನ ನಾ
ತುಳಿದ ಕಾಲ ತರಿವೆ ಸುಲಭದೀ ಬಿಡೆ ನಾ!
ದರ್ಜಿಯಾಗಿ ಗರ್ಜಿಸುವೆ! ನವರಂಧ್ರಗಳ ಹೊಲಿವೆ
ಬಲಿ ತುಳಿದ ಕಾಲನು! ಬಿಡದೆ ಕತ್ತರಿಸುವೆ!
ಗಂಟೆ, ಜಾಗಟೆ, ವಾಲಗ, ಆರತಿ, ತೀರ್ಥಪ್ರಸಾದಗಳೇಕೆ?
ತ್ರಿಶೂಲದಿ ಬಲಿಯ ತುಳಿದ ಕಾಲ ಇರಿವೆ!
ಗಡ್ಡ, ಮೀಸೆ, ತಲೆಗಳಾ, ಬೋಳಿಸಿ, ಬೋಳಿಸಿ,
ಬಲಿ ತುಳಿದಾ…
ಪಾದ ಹುಡುಕಿ ತೆಗೆವೆ, ರುಂಡ ಮುಂಡವಾ ಕರಕರನೇ…
ನೇಗಿಲಯೋಗಿ, ಬಲಿಯ ತುಳಿದವನ ಹುಡುಕಿ, ಮಾಡುವೆ…
ನೇಗಿಲ ಕುಳಕೇ ಬಲಿ!
ಬಟ್ಟೆ ಒಗೆವೆ ಬಲಿ ತುಳಿದ ಪಾದವ
ಸಿಕ್ಕರೆ ಬಟ್ಟೆ ತೆರದಿ ಒಗೆವೆ ಕಾಲಿಡಿದು!
ಅಡಿಗೆ ಭಟ್ಟನು ಹುಡುಕುತಲಿರುವೆ… ತುಳಿದ ಕಾಲ,
ಸಿಕ್ಕರೆ ಹಚ್ಚುವೆ ತರಕಾರಿಯಂದದಿ!
ಬೇಯಿಸಿ ಬಿಡುವೆ ಪಾಯಸದಿ!
ವೈದ್ಯನಾಗಿ ಮೃತ್ಯುರೂಪವ ತಾಳುವೆನೀಗಲೇ…
ಶಿಕ್ಷಕನಾಗಿ ಹುಡುಕುವೆ ಕಾಲ!
ದಶಾವತಾರವೇ ನಾಡಿಗೆ, ಸಿಡಿಮದ್ದೀಗ
ವರ್ಷ ವರ್ಷದಿ, ಚರಮಗೀತೆ ಹಾಡಿರಿ ನೀವೆಲ್ಲ
ಬಲಿಗೆ ಬಲಿ, ಆದ ದಿನವೇ, ದೀಪಾವಳಿ ನಮಗೆಲ್ಲ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...