Home / ಲೇಖನ / ಇತರೆ / ಮಾತಾಡಿ ಬಿಡಬಾರದೇ ?

ಮಾತಾಡಿ ಬಿಡಬಾರದೇ ?

ಚಿತ್ರ: ತುಮಿಸು
ಚಿತ್ರ: ತುಮಿಸು

ಪ್ರಿಯ ಸಖಿ,

ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬಾಯಿಂದ ಜಾರಿ ಅನಾಹುತವನ್ನೋ ವಿಷಮ ಸ್ಥಿತಿಯನ್ನೋ ತಂದೊಡ್ಡುವ ಮಾತಿಗಳಿರುವಂತೆಯೇ ವ್ಯಕ್ತಿಗೆ ತಕ್ಕಂತೆ ಕೆಲವೊಮ್ಮೆ ಆಡಬೇಕಾಗಿದ್ದ ಮಾತುಗಳು ಹೊರಬರದೇ ಸಂಬಂಧಗಳು ಹರಿದು ಹೋಗಿ ಮತ್ತೆಂದೂ ಮನಸ್ಸುಗಳು ಒಂದಾಗದ ಹಂತವನ್ನು ತಲುಪಿಬಿಡುವ ಸಾಧ್ಯತೆಯೂ ಉಂಟು.

ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ನೋಡಿದಾಗಲೆಲ್ಲಾ ಅವರ ಬಗೆಗೆ ಮೂಡುತ್ತಿದ್ದ ಭಾವನೆಗಳನ್ನು ಅವರಿಗೆ ಹೇಳಲಾಗದೇ ಅವರು ಸತ್ತ ನಂತರ ಪರಿತಪಿಸುವಂತಾಗುವುದು. ಕಿತ್ತುಹೋಗುತ್ತಿರುವ ಸಂಬಂಧದ – ಕೊಂಡಿಯೊಂದು ಸಣ್ಣದೊಂದು ಸಂತೈಸುವಿಕೆ, ಕ್ಷಮಿಸುವಿಕೆಯಿಂದ, ಮಾತಿನಿಂದ ಗಟ್ಟಿಗೊಳ್ಳುವುದಾದಲ್ಲಿ ಆ ಮಾತನಾಡದೇ ಸಂಬಂಧ ಕಿತ್ತು ಹೋದ ನಂತರ ವ್ಯಥೆಪಡುವುದು. ಅವರು ಹೊರಟು ಹೋದರೆ ಮತ್ತೆ ಎಂದೆಂದಿಗೂ ಬರುವುದೇ ಇಲ್ಲ. ಹೋಗಬೇಡಿ ಎಂದು ಬಾಯಿ ತುದಿವರೆಗೆ ಬಂದ ಮಾತನ್ನು ಆಡಲಾರದಂತೆ ತಡೆಯುವುದು ಯಾವುದು ಎಂದು ಯೋಚಿಸಿದರೆ, ಹೆಚ್ಚಿನ ಬಾರಿ ಅಹಂಕಾರವೇ ಕಾರಣವಾಗಿರುತ್ತದೆ. ತನ್ನ ನೈಜ ಭಾವನೆಗಳನ್ನು ಅವರ ಮುಂದೆ ಅರುಹಿ ಬಿಟ್ಟರೆ ತಾನು ಚಿಕ್ಕವನಾಗಿಬಿಡುತ್ತೇನೆ. ಹೀಗಾಗಿ ಏನೂ ಹೇಳುವುದೇ ಬೇಡ ಎಂದು ತೀರ್ಮಾನಿಸಿ ತಾನೇ ದೊಡ್ಡವನು, ಮಹಾನ್ ಎಂಬ ಅಹಮ್ಮಿನ ಮುಖವಾಡವನ್ನು ತೊಟ್ಟುಕೊಂಡು ತನಗೆ ತಾನೇ ದೊಡ್ಡವನಾಗಿ ಬಿಟ್ಟೆ ಎಂದು ಭ್ರಮಿಸಿಕೊಳ್ಳುತ್ತಾನೆ ವ್ಯಕ್ತಿ.

ಸಖಿ, ಆದರೆ ಒಳಿತನ್ನು ಒಳಿತೆಂದು, ಹಿರಿಯದನ್ನು ಹಿರಿದೆಂದು ಸಂಬಂಧಗಳ ಕೊಂಡಿಯನ್ನು ಭದ್ರಪಡಿಸಲು ಕೆಲವೊಮ್ಮೆ ಆಡಲೇಬೇಕಿರುವ ಮಾತನ್ನು ಕಾಲ ಮೀರಿ ಹೋಗುವ ಮೊದಲು ಆಡಿಬಿಟ್ಟರೆ ನಾವು ಕಳೆದುಕೊಳ್ಳುವುದೇನು? ನಂತರ ಮತ್ತೆಂದೂ ಅಂತಹ ಅವಕಾಶ ಸಿಕ್ಕದೇ ಹೋಗಿಬಿಡಬಹುದು. ಆಗ ಪಶ್ಚಾತ್ತಾಪವೂ ಬೆಲೆಯಿಲ್ಲದ್ದಾಗಿ ಬಿಡುತ್ತದೆ. ಸಖಿ, ಆಡಬೇಕೆಂದಿರುವ ಮಾತುಗಳನ್ನು, ಅದರಿಂದ ಮತ್ತಷ್ಟು ಒಳಿತೇ ಆಗುವುದಾದರೆ, ಸಮಯ ಮೀರುವ ಮುನ್ನ ಆಡಿಬಿಡೋಣ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...