Home / ಕವನ / ಕವಿತೆ / ರಸವಂತಿ

ರಸವಂತಿ

ಇವಳು ಬರುತ್ತಾಳೆ, ಬೆಳಕಿನ ತಂಬಿಗೆ ತುಂಬಿ ತರುತ್ತಾಳೆ,
ಹನಿಹನಿ ಹನಿಸಿ ಹಳ್ಳಹರಿಸಿ ನನ್ನ ಕುದಿಮನವನದರಲ್ಲಿ ತೇಲಿಸುತ್ತಾಳೆ
ಎಳೆಹುಲ್ಲ ಮೆತ್ತೆ ತೊಡೆಯ ಮೇಲೆ ಹೂಗೈಯಿಂದ ತಟ್ಟಿ
ತೊಟ್ಟಿಲ ತೂಗಿ ನನ್ನ ತಲೆಯ ಚಕ್ರಭ್ರಮಣವ ನಿಲ್ಲಿಸುತ್ತಾಳೆ,
ಮಬ್ಬುಗತ್ತಲಲ್ಲಿ ಬೆಂಕಿ ಹೊತ್ತಿಸಿ ಮೈಬೆಚ್ಚಗಿಡುತ್ತಾಳೆ
ನೆಲವನೆಲ್ಲ ನೀಲಿನೀರಲದ್ದಿ ಎರಕಹೊಯ್ದು
ತೊಲೆಕಂಬವಿಲ್ಲದ ಗೋಡೆಬೇಲಿಯಿಲ್ಲದ ಮನೆಯಲ್ಲಿ
ಹೂಹರವಿ ಸಿಂಗರಿಸುತ್ತಾಳೆ
ಕಾಯಕಾಯ ಬೆಸೆದು ಹಣ್ಣಾಗಿಸಿ ರಸವೀಂಟಿಸುತ್ತಾಳೆ
ನಾಡಿ ನಾಡಿಯಲ್ಲಿ ಜೇನ ತೊರೆ ಹರಿಸಿ
ಕಾಯಕಲ್ಪ ತೊಡಿಸುತ್ತಾಳೆ.
ತಾಯಿಯೋ ಪ್ರೇಯಸಿಯೋ ಎಂಬ ಭ್ರಮೆ ಬರಿಸುತ್ತಾಳೆ
ಬೇರಿಂದ ಚಿಗುರಿನವರೆಗೆ ಗೆಜ್ಜೆ ಪೋಣಿಸಿ
ಮೈಯರಳಿಸಿ ರವಷ್ಟೂ ರೋಮವೂ ಮಲಗಗೊಡದೆ
ಹೊಸನಾದ ಗೂಢಗಳಿಗೆ ಕಿವಿದೆರೆಸುತ್ತಾಳೆ
ಕೆಂಡ ಕೆದರಿ ಹೊವರಳಿಸುತ್ತಾಳೆ
ಬೂದಿಯಲ್ಲಿ ಬಂಡಾಯವ ಬಡಿದೆಬ್ಬಿಸಿ
ಜೀವವೂದಿ ಕಾವೇರಿಸುತ್ತಾಳೆ
ಇವಳು ಬರುವುದು ಸುಳುವು ಹತ್ತದೇ ಗೊತ್ತಾಗುತ್ತದೆ
ಇವಳ ಬರುವು ಉಳಿದು ಚಿರವಾಗದೆ
ಮತ್ತೆ ಹೊತ್ತು ಹೋಗುತ್ತದೆ ಹೇಗೋ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...