Home / ಲೇಖನ / ಇತರೆ / ಜೀವಕ್ಕೆ ಬೆಲೆ ಇದೆಯೆ ?

ಜೀವಕ್ಕೆ ಬೆಲೆ ಇದೆಯೆ ?

ಪ್ರಿಯ ಸಖಿ,
ದೂರದರ್ಶನವೆಂಬ ಮೂರ್ಖರ ಪೆಟ್ಟಿಗೆ ಮನೆಗಳಿಗೆ ಧಾಳಿಯಿಟ್ಟಾಗಿನಿಂದ ಮನೆಮಂದಿಯ ಊಟ, ತಿಂಡಿ ಎಲ್ಲ ಅದರ ಮುಂದೆಯೇ! ಹಲವಾರು ಕಾರಣಗಳಿಗೆ ಅದು ಮೂರ್ಖರ ಪೆಟ್ಟಿಗೆಯೇ ಆದರೂ ಎಲ್ಲೋ ನಡೆದ ಘೋರವನ್ನು, ದುರಂತವನ್ನು ಇದ್ದದ್ದು ಇದ್ದಂತೆ ನಮ್ಮ ಕಣ್ಣ ಮುಂದೆ ಚಿತ್ರಿಸುವ ಅದರ ಹಿರಿಮೆಯನ್ನು ಮೆಚ್ಚಿಕೊಳ್ಳಲೇಬೇಕು. ಮೊನ್ನೆ, ದೂರದ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ಗಳಿಗೆ ವಿಮಾನ ಢಿಕ್ಕಿ ಹೊಡೆದು ಆ ಬೃಹತ್ ಕಟ್ಟಡಗಳು ಹಂತ ಹಂತವಾಗಿ ನೆಲಕಚ್ಚುವುದನ್ನು ಕಂಡು ಬೆದರಿರುವ ಜನ, ಕಟ್ಟಡದೊಳಗಿನಿಂದ ಸಹಾಯಕ್ಕಾಗಿ ಯಾಚಿಸುತ್ತಾ ಕೈಚಾಚಿ ಗಾಬರಿಯಿಂದ ಕಿರುಚಿತ್ತಿರುವ ಮಂದಿ, ಕ್ಷಣಾರ್ಧದಲ್ಲಿ ತಮ್ಮ ತಪ್ಪಿಲ್ಲದೆಯೂ ರುಂಡ, ಮುಂಡ, ಕೈಕಾಲು ಬೇರ್ಪಟ್ಟು ರಕ್ತಸಿಕ್ತ ದೇಹದಲ್ಲಿ ಮುದ್ದೆಯಾಗಿ ಬಿದ್ದ ಪ್ರಾಣವಿರುವ, ಪ್ರಾಣಹೋದ, ಕುಟುಕು ಪ್ರಾಣದ ಸಾವಿರಾರು ದೇಹಗಳನ್ನು ಟಿ.ವಿ. ಪರದೆಯ ಮೇಲೆ ಕಂಡಾಗ ಹೃದಯ ದ್ರವಿಸಿ ಹೊಟ್ಟೆ ಕಿವುಚಿದಂತಾಗಿ ಕಂಗಳಲ್ಲಿ ನೀರು ತಂದುಕೊಂಡವರದೆಷ್ಟೋ ಮಂದಿ ಕೈಯಲ್ಲಿರುವ ತುತ್ತು ಬಾಯಿಗೆ ಹೋಗದೇ ಮುಷ್ಕರ ಹೂಡುತ್ತದೆ. ಏನೋ ತಳಮಳ, ಸಂಕಟ, ಪ್ರಶ್ನೆಗಳ ಸರಮಾಲೆ ಅಯ್ಯೋ ಇದೆಲ್ಲಾ ಏನಾಗುತ್ತಿದೆ? ಅಮೆರಿಕದ ಅಡಳಿತ ನಡೆಸುತ್ತಿರುವ ಕೆಲವೇ ಕೆಲವು ತಲೆಗಳು ತಮ್ಮ ಅಸ್ತಿತ್ವ ಎಲ್ಲೆಡೆ ಸ್ಥಾಪಿಸಿ ಪ್ರತಿಷ್ಠೆ ಮೆರೆಯಲು ಸಲ್ಲದ ಯೋಜನೆಯನ್ನು ಹೂಡಿ ತಪ್ಪು ಹೆಜ್ಜೆ ಇಟ್ಟಿರಬಹುದು. ಅದಕ್ಕೆಂದೇ ಈ ಹಕ್ಕು ಆ ರಾಕ್ಷಸರಿಗೆ ಯಾರು ಕೊಟ್ಟರು ? ಕ್ಷುಲ್ಲಕ ಕಾರಣಗಳಿಗಾಗಿ ಜೀವ ಬಸಿಯುವಷ್ಟು ಮಾನವತ್ವ ತುಂಬಿದವರಾರು ? ಇತ್ಯಾದಿ.

ಕಾಶ್ಮೀರ ಕಣಿವೆಯಲ್ಲಿ ನಿತ್ಯವೂ ನಡೆಯತ್ತಿರುವ ನರಮೇಧ, ಜಮ್ಮು ಕಾಶ್ಮೀರದ ವಿಧಾನ ಸೌಧದ ಬಳಿ ಮೊನ್ನೆಯಷ್ಟೇ ನಡೆದ ಹತ್ಯಾಕಾಂಡ, ಬಾಂಬ್ ಧಾಳಿಗಳಿಂದ ನಿರಂತರ ಸಾವು ನೋವಿಗೀಡಾಗುತ್ತಿರುವ ಮುಗ್ಧ ಜನರು ಪ್ರತಿಷ್ಠೆ ಮೆರೆಯಲು ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಅಸಂಖ್ಯಾತ ಸಾವು, ನಮ್ಮ ಸುತ್ತಮುತ್ತಲೂ ನಿತ್ಯವೂ ನಡೆಯುತ್ತಿರುವ ಕೊಲೆ, ಇಂತಹವುಗಳನ್ನು ಕಂಡಾಗ ನಾವಿರುವುದು, ಬಾಳುತ್ತಿರುವುದು ಮನುಷ್ಯರ ಮಧ್ಯೆಯೇ? ಸ್ವಾರ್ಥ, ಸ್ವಹಿತಗಳ ಮುಂದೆ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ದಿಗಿಲಾಗುತ್ತದೆ.

ಸಖಿ, ಮಾನವ ಏನೆಲ್ಲವನ್ನು ಕಲಿತಿರಬಹುದು, ತಿಳಿದಿರಬಹುದು, ಏನೇನೆಲ್ಲವನ್ನೂ ಸೃಷ್ಟಿಸಿರಬಹುದು, ವಿನಾಶ ಮಾಡಬಹುದು. ಅದರೆ ಸತ್ತು ಮಲಗಿರುವವನಿಗೆ ಮತ್ತೆ ಜೀವ ತುಂಬುವ ಕಲೆ ಅವನಿಗೆ ಗೊತ್ತಿಲ್ಲ. ಹೀಗಿದ್ದಾಗ ಅಮೂಲ್ಯವಾದ ಜೀವವೊಂದುನ್ನು ತೆಗೆಯುವ ಹಕ್ಕು ಅವನಿಗಿಲ್ಲ. ಈ ಸೃಷ್ಟಿಯಲ್ಲಿ ಎಷ್ಟೊಂದು ಅಸಮಾನತೆ, ನ್ಯೂನ್ಯತೆ, ಘೋರಗಳು ಇವೆ. ಆದರೆ ಮಾನವರಿಗೆ ದೊರಕಿರುವ ಈ ಜೀವ ತೆಗೆಯುವ ಕ್ರೂರತೆ ಮಾತ್ರ ಎಲ್ಲಕ್ಕಿಂತಾ ಘೋರವಾದುದು. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...