Home / ಲೇಖನ / ಇತರೆ / ಜೀವಕ್ಕೆ ಬೆಲೆ ಇದೆಯೆ ?

ಜೀವಕ್ಕೆ ಬೆಲೆ ಇದೆಯೆ ?

ಪ್ರಿಯ ಸಖಿ,
ದೂರದರ್ಶನವೆಂಬ ಮೂರ್ಖರ ಪೆಟ್ಟಿಗೆ ಮನೆಗಳಿಗೆ ಧಾಳಿಯಿಟ್ಟಾಗಿನಿಂದ ಮನೆಮಂದಿಯ ಊಟ, ತಿಂಡಿ ಎಲ್ಲ ಅದರ ಮುಂದೆಯೇ! ಹಲವಾರು ಕಾರಣಗಳಿಗೆ ಅದು ಮೂರ್ಖರ ಪೆಟ್ಟಿಗೆಯೇ ಆದರೂ ಎಲ್ಲೋ ನಡೆದ ಘೋರವನ್ನು, ದುರಂತವನ್ನು ಇದ್ದದ್ದು ಇದ್ದಂತೆ ನಮ್ಮ ಕಣ್ಣ ಮುಂದೆ ಚಿತ್ರಿಸುವ ಅದರ ಹಿರಿಮೆಯನ್ನು ಮೆಚ್ಚಿಕೊಳ್ಳಲೇಬೇಕು. ಮೊನ್ನೆ, ದೂರದ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ಗಳಿಗೆ ವಿಮಾನ ಢಿಕ್ಕಿ ಹೊಡೆದು ಆ ಬೃಹತ್ ಕಟ್ಟಡಗಳು ಹಂತ ಹಂತವಾಗಿ ನೆಲಕಚ್ಚುವುದನ್ನು ಕಂಡು ಬೆದರಿರುವ ಜನ, ಕಟ್ಟಡದೊಳಗಿನಿಂದ ಸಹಾಯಕ್ಕಾಗಿ ಯಾಚಿಸುತ್ತಾ ಕೈಚಾಚಿ ಗಾಬರಿಯಿಂದ ಕಿರುಚಿತ್ತಿರುವ ಮಂದಿ, ಕ್ಷಣಾರ್ಧದಲ್ಲಿ ತಮ್ಮ ತಪ್ಪಿಲ್ಲದೆಯೂ ರುಂಡ, ಮುಂಡ, ಕೈಕಾಲು ಬೇರ್ಪಟ್ಟು ರಕ್ತಸಿಕ್ತ ದೇಹದಲ್ಲಿ ಮುದ್ದೆಯಾಗಿ ಬಿದ್ದ ಪ್ರಾಣವಿರುವ, ಪ್ರಾಣಹೋದ, ಕುಟುಕು ಪ್ರಾಣದ ಸಾವಿರಾರು ದೇಹಗಳನ್ನು ಟಿ.ವಿ. ಪರದೆಯ ಮೇಲೆ ಕಂಡಾಗ ಹೃದಯ ದ್ರವಿಸಿ ಹೊಟ್ಟೆ ಕಿವುಚಿದಂತಾಗಿ ಕಂಗಳಲ್ಲಿ ನೀರು ತಂದುಕೊಂಡವರದೆಷ್ಟೋ ಮಂದಿ ಕೈಯಲ್ಲಿರುವ ತುತ್ತು ಬಾಯಿಗೆ ಹೋಗದೇ ಮುಷ್ಕರ ಹೂಡುತ್ತದೆ. ಏನೋ ತಳಮಳ, ಸಂಕಟ, ಪ್ರಶ್ನೆಗಳ ಸರಮಾಲೆ ಅಯ್ಯೋ ಇದೆಲ್ಲಾ ಏನಾಗುತ್ತಿದೆ? ಅಮೆರಿಕದ ಅಡಳಿತ ನಡೆಸುತ್ತಿರುವ ಕೆಲವೇ ಕೆಲವು ತಲೆಗಳು ತಮ್ಮ ಅಸ್ತಿತ್ವ ಎಲ್ಲೆಡೆ ಸ್ಥಾಪಿಸಿ ಪ್ರತಿಷ್ಠೆ ಮೆರೆಯಲು ಸಲ್ಲದ ಯೋಜನೆಯನ್ನು ಹೂಡಿ ತಪ್ಪು ಹೆಜ್ಜೆ ಇಟ್ಟಿರಬಹುದು. ಅದಕ್ಕೆಂದೇ ಈ ಹಕ್ಕು ಆ ರಾಕ್ಷಸರಿಗೆ ಯಾರು ಕೊಟ್ಟರು ? ಕ್ಷುಲ್ಲಕ ಕಾರಣಗಳಿಗಾಗಿ ಜೀವ ಬಸಿಯುವಷ್ಟು ಮಾನವತ್ವ ತುಂಬಿದವರಾರು ? ಇತ್ಯಾದಿ.

ಕಾಶ್ಮೀರ ಕಣಿವೆಯಲ್ಲಿ ನಿತ್ಯವೂ ನಡೆಯತ್ತಿರುವ ನರಮೇಧ, ಜಮ್ಮು ಕಾಶ್ಮೀರದ ವಿಧಾನ ಸೌಧದ ಬಳಿ ಮೊನ್ನೆಯಷ್ಟೇ ನಡೆದ ಹತ್ಯಾಕಾಂಡ, ಬಾಂಬ್ ಧಾಳಿಗಳಿಂದ ನಿರಂತರ ಸಾವು ನೋವಿಗೀಡಾಗುತ್ತಿರುವ ಮುಗ್ಧ ಜನರು ಪ್ರತಿಷ್ಠೆ ಮೆರೆಯಲು ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಅಸಂಖ್ಯಾತ ಸಾವು, ನಮ್ಮ ಸುತ್ತಮುತ್ತಲೂ ನಿತ್ಯವೂ ನಡೆಯುತ್ತಿರುವ ಕೊಲೆ, ಇಂತಹವುಗಳನ್ನು ಕಂಡಾಗ ನಾವಿರುವುದು, ಬಾಳುತ್ತಿರುವುದು ಮನುಷ್ಯರ ಮಧ್ಯೆಯೇ? ಸ್ವಾರ್ಥ, ಸ್ವಹಿತಗಳ ಮುಂದೆ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ದಿಗಿಲಾಗುತ್ತದೆ.

ಸಖಿ, ಮಾನವ ಏನೆಲ್ಲವನ್ನು ಕಲಿತಿರಬಹುದು, ತಿಳಿದಿರಬಹುದು, ಏನೇನೆಲ್ಲವನ್ನೂ ಸೃಷ್ಟಿಸಿರಬಹುದು, ವಿನಾಶ ಮಾಡಬಹುದು. ಅದರೆ ಸತ್ತು ಮಲಗಿರುವವನಿಗೆ ಮತ್ತೆ ಜೀವ ತುಂಬುವ ಕಲೆ ಅವನಿಗೆ ಗೊತ್ತಿಲ್ಲ. ಹೀಗಿದ್ದಾಗ ಅಮೂಲ್ಯವಾದ ಜೀವವೊಂದುನ್ನು ತೆಗೆಯುವ ಹಕ್ಕು ಅವನಿಗಿಲ್ಲ. ಈ ಸೃಷ್ಟಿಯಲ್ಲಿ ಎಷ್ಟೊಂದು ಅಸಮಾನತೆ, ನ್ಯೂನ್ಯತೆ, ಘೋರಗಳು ಇವೆ. ಆದರೆ ಮಾನವರಿಗೆ ದೊರಕಿರುವ ಈ ಜೀವ ತೆಗೆಯುವ ಕ್ರೂರತೆ ಮಾತ್ರ ಎಲ್ಲಕ್ಕಿಂತಾ ಘೋರವಾದುದು. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್