Home / ಲೇಖನ / ಇತರೆ / ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

Mettiluಪ್ರಿಯ ಸಖಿ,

ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ ಕೆಲಸ ಮುಂದುವರೆಸುವುದಿಲ್ಲ ಎಂದು ಹೇಳಿದ.

ಇದನ್ನು ಕೇಳಿದ ಗುರುಗಳು ನೋಡು ಮಗು, ಯಾವುದೇ ಹೊಸ ಕೆಲಸದಲ್ಲಿ ಗುರಿಯನ್ನು ಸೇರಬೇಕಾದರೆ ಆ ಸಾಧನೆಯ ಹಾದಿಯಲ್ಲಿ ನಾಲ್ಕು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಮೊದಲನೆ ಹಂತದಲ್ಲಿ ಜನ ನಿನ್ನ ಹೊಸ ಕೆಲಸವನ್ನು ನೋಡಿ ನಗುತ್ತಾರೆ. ಮುಂದುವರೆದರೆ, ಎರಡನೆಯ ಹಂತದಲ್ಲಿ ವ್ಯಂಗ್ಯ, ಕೊಂಕು ಮಾತುಗಳಿಂದ ನಿನ್ನ ಚುಚ್ಚುತ್ತಾರೆ. ಇದಕ್ಕೂ ನೀನು ಹೆದರದೇ ಮುಂದುವರೆದರೆ ಮೂರನೆಯ ಹಂತದಲ್ಲಿ ಜನ ಇವನೇನೋ ಮಾಡ್ತಾ ಇದ್ದಾನಲ್ಲ ತಾಳು ನೋಡೋಣ ಅಂತ ಮೌನವಾಗಿ ನಿಂತು ನೋಡ್ತಾರೆ. ಕೊನೆಯ ನಿನ್ನ ಗೆಲುವಿನ ಹಂತ. ಇಲ್ಲಿ ಜನ ನೀನು ಮಾಡಿರೋ ಕೆಲಸ ಸತ್ವಪೂರ್ಣವಾದುದೋ ಅಲ್ಲವೋ ಪರೀಕ್ಷಿಸಿ, ಇದು ನಿನ್ನ ನಿಜವಾದ ಸಾಧನೆ ಅಂತ ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ. ಈ ನಾಲ್ಕೂ ಹಂತಗಳು ಒಬ್ಬ ಸಾಧಕನಿಗೆ ಸತ್ವ ಪರೀಕ್ಷೆ ಇದ್ದ ಹಾಗೆ. ಕೆಲವರು ಮೊದಲ ಹಂತದಲ್ಲೇ ಜನರ ನಗುವನ್ನು ತಿರಸ್ಕಾರವನ್ನು ಕಂಡು ಹೆದರಿ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಹೋಗ್ತಾರೆ.  ಉಳಿದ ಕೆಲವರು ಮೂರನೇ ಹಂತಕ್ಕೆ ಬಂದು ಜನರ ಮೌನವನ್ನು ಅರ್ಥ ಮಾಡಿಕೊಳ್ಳಲಾಗದೇ ಗೊಂದಲಕ್ಕೊಳಗಾಗಿ ಹೆದರಿ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸ್ತಾರೆ. ಇನ್ನುಳಿದ ಕೆಲವೇ ಕೆಲವರು ಮಾತ್ರ ಈ ಮೂರೂ ಹಂತಗಳನ್ನು ಧೈರ್ಯದಿಂದ ದಾಟಿ ನಾಲ್ಕನೆಯ ಹಂತವನ್ನು ತಲುಪಿ ತಮ್ಮ ಕೆಲಸವನ್ನು ಸಮಾಜದ ಪರಿಕ್ಷೆಗೆ ಒಳಪಡಿಸುತ್ತಾರೆ ಮತ್ತು ಅದೇ ಜನರಿಂದಲೇ ಭೇಷ್‌ ಎನಿಸಿಕೊಳ್ತಾರೆ.

ಆದ್ದರಿಂದಲೇ ನಿಜವಾದ ಸಾಧಕನಿಗೆ ತಾಳ್ಮೆ ಅತಿ ಮುಖ್ಯ. ತಾನು ಯಾವ ಹಂತದಲ್ಲೂ ಅಧೈರ್ಯದಿಂದ ಓಡಿ ಹೋಗದಂತಾ ಮನಸ್ಥೈರ್ಯ, ಸ೦ಯಮವನ್ನು ಸಾಧಕ ಮೊದಲು ರೂಢಿಸಿಕೊಳ್ಳಬೇಕು. ಜನರ ಮಾತುಗಳಿಗೆ ಕಿವಿಯನ್ನು ಕಿವುಡಾಗಿಸಿಕೊಳ್ಳಬೇಕು. ಅರ್ಜುನನ ಕಣ್ಣಿಗೆ ಪಕ್ಷಿಯ ಕಣ್ಣು ಮಾತ್ರ ಕ೦ಡಂತೆ, ಸಾಧಕನಿಗೆ ತನ್ನ ಗುರಿ ಮಾತ್ರ ಮುಖ್ಯವಾದುದು. ಹಾಗೇ ಆ ಗುರಿಯನ್ನು ತಲುಪಲು ಇಲ್ಲಿ ಯಾವುದೂ ಸುಲಭ ಮಾರ್ಗಗಳಿಲ್ಲ. ಅದನ್ನು ಕಠಿಣ ಪರಿಶ್ರಮದಿಂದಷ್ಟೇ ಸಾಧಿಸಬೇಕು, ಎ೦ಬುದನ್ನು ಸಾಧಕ ಎ೦ದೂ ಮರೆಯಬಾರದು ಎಂದರು.

ಇವನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯವಾಯ್ತು. ಇನ್ನು ತನ್ನ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ, ಆತಂಕಗಳು ಬಂದರೂ ತಾನು ಹೆದರುವುದಿಲ್ಲವೆ೦ದು ಆತ ಪ್ರತಿಜ್ಞೆ ಮಾಡಿದ. ಮತ್ತು ತನ್ನ ಸಾಧನೆಯಲ್ಲಿ ಗೆದ್ದ.

ಸಖಿ, ಕಥೆ ಇಷ್ಪವಾಯ್ತೋ ಇಲ್ಲವೋ ತಿಳಿಸುತ್ತೀಯಲ್ಲವೇ ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...