Home / ಲೇಖನ / ಇತರೆ / ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

Mettiluಪ್ರಿಯ ಸಖಿ,

ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ ಕೆಲಸ ಮುಂದುವರೆಸುವುದಿಲ್ಲ ಎಂದು ಹೇಳಿದ.

ಇದನ್ನು ಕೇಳಿದ ಗುರುಗಳು ನೋಡು ಮಗು, ಯಾವುದೇ ಹೊಸ ಕೆಲಸದಲ್ಲಿ ಗುರಿಯನ್ನು ಸೇರಬೇಕಾದರೆ ಆ ಸಾಧನೆಯ ಹಾದಿಯಲ್ಲಿ ನಾಲ್ಕು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಮೊದಲನೆ ಹಂತದಲ್ಲಿ ಜನ ನಿನ್ನ ಹೊಸ ಕೆಲಸವನ್ನು ನೋಡಿ ನಗುತ್ತಾರೆ. ಮುಂದುವರೆದರೆ, ಎರಡನೆಯ ಹಂತದಲ್ಲಿ ವ್ಯಂಗ್ಯ, ಕೊಂಕು ಮಾತುಗಳಿಂದ ನಿನ್ನ ಚುಚ್ಚುತ್ತಾರೆ. ಇದಕ್ಕೂ ನೀನು ಹೆದರದೇ ಮುಂದುವರೆದರೆ ಮೂರನೆಯ ಹಂತದಲ್ಲಿ ಜನ ಇವನೇನೋ ಮಾಡ್ತಾ ಇದ್ದಾನಲ್ಲ ತಾಳು ನೋಡೋಣ ಅಂತ ಮೌನವಾಗಿ ನಿಂತು ನೋಡ್ತಾರೆ. ಕೊನೆಯ ನಿನ್ನ ಗೆಲುವಿನ ಹಂತ. ಇಲ್ಲಿ ಜನ ನೀನು ಮಾಡಿರೋ ಕೆಲಸ ಸತ್ವಪೂರ್ಣವಾದುದೋ ಅಲ್ಲವೋ ಪರೀಕ್ಷಿಸಿ, ಇದು ನಿನ್ನ ನಿಜವಾದ ಸಾಧನೆ ಅಂತ ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ. ಈ ನಾಲ್ಕೂ ಹಂತಗಳು ಒಬ್ಬ ಸಾಧಕನಿಗೆ ಸತ್ವ ಪರೀಕ್ಷೆ ಇದ್ದ ಹಾಗೆ. ಕೆಲವರು ಮೊದಲ ಹಂತದಲ್ಲೇ ಜನರ ನಗುವನ್ನು ತಿರಸ್ಕಾರವನ್ನು ಕಂಡು ಹೆದರಿ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಹೋಗ್ತಾರೆ.  ಉಳಿದ ಕೆಲವರು ಮೂರನೇ ಹಂತಕ್ಕೆ ಬಂದು ಜನರ ಮೌನವನ್ನು ಅರ್ಥ ಮಾಡಿಕೊಳ್ಳಲಾಗದೇ ಗೊಂದಲಕ್ಕೊಳಗಾಗಿ ಹೆದರಿ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸ್ತಾರೆ. ಇನ್ನುಳಿದ ಕೆಲವೇ ಕೆಲವರು ಮಾತ್ರ ಈ ಮೂರೂ ಹಂತಗಳನ್ನು ಧೈರ್ಯದಿಂದ ದಾಟಿ ನಾಲ್ಕನೆಯ ಹಂತವನ್ನು ತಲುಪಿ ತಮ್ಮ ಕೆಲಸವನ್ನು ಸಮಾಜದ ಪರಿಕ್ಷೆಗೆ ಒಳಪಡಿಸುತ್ತಾರೆ ಮತ್ತು ಅದೇ ಜನರಿಂದಲೇ ಭೇಷ್‌ ಎನಿಸಿಕೊಳ್ತಾರೆ.

ಆದ್ದರಿಂದಲೇ ನಿಜವಾದ ಸಾಧಕನಿಗೆ ತಾಳ್ಮೆ ಅತಿ ಮುಖ್ಯ. ತಾನು ಯಾವ ಹಂತದಲ್ಲೂ ಅಧೈರ್ಯದಿಂದ ಓಡಿ ಹೋಗದಂತಾ ಮನಸ್ಥೈರ್ಯ, ಸ೦ಯಮವನ್ನು ಸಾಧಕ ಮೊದಲು ರೂಢಿಸಿಕೊಳ್ಳಬೇಕು. ಜನರ ಮಾತುಗಳಿಗೆ ಕಿವಿಯನ್ನು ಕಿವುಡಾಗಿಸಿಕೊಳ್ಳಬೇಕು. ಅರ್ಜುನನ ಕಣ್ಣಿಗೆ ಪಕ್ಷಿಯ ಕಣ್ಣು ಮಾತ್ರ ಕ೦ಡಂತೆ, ಸಾಧಕನಿಗೆ ತನ್ನ ಗುರಿ ಮಾತ್ರ ಮುಖ್ಯವಾದುದು. ಹಾಗೇ ಆ ಗುರಿಯನ್ನು ತಲುಪಲು ಇಲ್ಲಿ ಯಾವುದೂ ಸುಲಭ ಮಾರ್ಗಗಳಿಲ್ಲ. ಅದನ್ನು ಕಠಿಣ ಪರಿಶ್ರಮದಿಂದಷ್ಟೇ ಸಾಧಿಸಬೇಕು, ಎ೦ಬುದನ್ನು ಸಾಧಕ ಎ೦ದೂ ಮರೆಯಬಾರದು ಎಂದರು.

ಇವನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯವಾಯ್ತು. ಇನ್ನು ತನ್ನ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ, ಆತಂಕಗಳು ಬಂದರೂ ತಾನು ಹೆದರುವುದಿಲ್ಲವೆ೦ದು ಆತ ಪ್ರತಿಜ್ಞೆ ಮಾಡಿದ. ಮತ್ತು ತನ್ನ ಸಾಧನೆಯಲ್ಲಿ ಗೆದ್ದ.

ಸಖಿ, ಕಥೆ ಇಷ್ಪವಾಯ್ತೋ ಇಲ್ಲವೋ ತಿಳಿಸುತ್ತೀಯಲ್ಲವೇ ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...