Home / ಕವನ / ಕವಿತೆ / ನನ್ ಚಿನ್ನ

ನನ್ ಚಿನ್ನ

“ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ?
ಪರದಾಟ ಸಾಕಿನ್ನು, ಮಹರಾಯ!
ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,-
ನಿನ್ನ ಮನೆಯಾಳಲ್ಲ ಸ್ವಾಮಿ !”

ಎರಡರಲಿ ಒಂದೇನೊ ಆಳಾಗಿ ಇರಬೇಕು,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಆ ಆಳು ಗಂಡಿರಲೆ? ಹೆಣ್ಣಿರಲೆ?-ಹೇಳಿಬಿಡು,
ನನ್ನ ಕೈಹಿಡಿದ ರನ್ನಾ!

“ಗಂಡಯ್ಯ, ಇನ್ನೂ ಇಹುದೆ ಈ ಹಳೆ ಬಿಂಕ
ಅರಸುತನ, ಆಳಬಾಳೆಂಬ?
ನಾ ನಿನ್ನ ತೊರೆದೇನು! ಹಿಡಿ ನಿನ್ನ ಕಡೆ ಸುಂಕ;
ಕೈಮುಗಿದೆ ;-ಇರಲಿ ಆ ಜಂಬ!”

ನೀ ತೊರೆಯೆ ನಾ ಕೆಟ್ಟೆ, ನೀರಿರದ ಗೋಕಟ್ಟೆ,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಬರುವುದೆಲ್ಲಾ ಬರಲಿ, ಗಂಡು ನಾನಂಜುವೆನೆ,
ನನ್ನ ಕೈಹಿಡಿದ ರನ್ನಾ?

“ಅಯ್ಯೋ! ನನ್ನೆದೆ ಮುತ್ತೆ ನೀನೊಡೆದು ಹೋಗುವೆಯ?-
ಮಿತ್ತು ಹತ್ತಿರವಾಯ್ತೆ ನನಗೆ?
ಮಣ್ಣಿನಲಿ ಕುಳಿ ತೆಗೆದು ನೀನೆನ್ನನಿಡುವಾಗ,
ಗಂಡಯ್ಯ, ಒದಗೀತೆ ಸಹನೆ!”

ದೇವರಲಿ ನನಗಿವೆ ಅಪಾರ ನಂಬಿಕೆ ಭಕ್ತಿ,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಒದಗೀತು ನನಗಂಥ ಅಳಲ ದಾಟುವ ಶಕ್ತಿ
ನನ್ನ ಕೈಹಿಡಿದ ರನ್ನಾ

“ಅಂತಾದರಳಿವಿನ ಮಹಾ ಮೌನದೊಳಗಿಂದ
ನಾ ನಿನ್ನ ಶಾಂತಿಯನು ಕಾಡ ಬಹೆನು;
ನಿದ್ದೆಯಲಿ ಮುಳುಗಿರುವ ನಿನ್ನ ಹಾಸಿನ ಸುತ್ತ
ಬೊಮ್ಮರಕ್ಕಸಗಳನು ಕುಣಿಸ ಬಹೆನು.”

ನಾನಾಗ ನಿನ್ನಂಥ ಸತಿಯ ಕೈಹಿಡಿಯುವೆನು
ನನ್ನ ಚಿನ್ನಾ ಓ ನನ್ನ ಚಿನ್ನಾ!
ಅವಳ ಕಣ್ಣಿಗೆ ಹೆದರಿ ನರಕವೇ ಓಡುವುದು
ನನ್ನ ಚಿನ್ನಾ, ಓ ನನ್ನ ಚಿನ್ನಾ!
-Robert Burns: My Spouse Nancy
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...