Home / ಕವನ / ಕವಿತೆ / ಜೀವದ ಒಳಗುಟ್ಟು

ಜೀವದ ಒಳಗುಟ್ಟು

ಕರ್ಮದ ಬಾಳಿಗೆ ಮಣ್ಣಿಟ್ಟು
ನೋಡಿದೆ ಜೀವದ ಒಳಗುಟ್ಟು!

ಧರ್ಮಕೆ ಕಸಿಯನು ನಾ ಮಾಡಿ
ತಿಂದೆನೊ ಪಾಪದ ಹಣ್ಣು ಇಡಿ;

ಮೂಡಲ ಸೂರ್ಯನು ಅಲ್ಲಿರನು
ಮನುಜನು ಬುದ್ದಿಯ ತಾಳಿರನು!

ಗಂಟೆಯ ಮುಳ್ಳದು ತಿರುಗಾಡಿ
ಲೋಕಕೆ ಕಲಿಪುದು ಬಲುಮೋಡಿ.

ಸುತ್ತಲು ಮಂಜಿನ ನೆನೆಹನಿ
ಕಣ್ಣಲಿ ಪಾಡಿನ ಮಂಕು ಹನಿ!

ಹೊಂಡವೆ ನೀರಿನ ಸದ್ಯನೆಲೆ,
ಲೋಕ ದಾರಿದ್ರ್‍ಯದ ಕಟ್ಟುಬಲೆ;

ಜೀವನ ಜಿದ್ದಿನ ಜೀಕಲಿನ
ಆಶ್ರಯವಾಗಿದೆ-ಅದೆ ಮಲಿನ!

ಪಾಪಿಯ ನಗುವಿನ ಕಹಿ ಗೆಲುವು
ಯಾರ ಹೃದಯಕೆ ಎಸೆದುಗುಳು?

ಪುಷ್ಪದ ಎಸಳಿನ ಆ ಸೊಗವು
ಮೋಹಿನಿ ತೋರಿದ ಆ ಸೊಬಗು-

ಅಂಗೈ ತೋರಿದ ಭಾಗ್ಯವದು
ಎಲ್ಲಿವರೆಗದು- ಅದೆ ನೆನವು!

ಸೂಜಿಯು ಹೊರುವುದು ದಾರವನು
ಇರುವೆಯು ಹೊರುವುದು ಕಾಳನ್ನು,

ಮರಗಳು ಹೊರುವುವು ಹಣ್ಣನ್ನು
ಮಾನವ ಹೊರುವನು ಪಾಪವನು!

ನಾಯಿಗೆ ನಾಯ್ಗಳು ವೈರಿಗಳು,
ಜನಗಳು ಜನಕೆ ಮೊನೆಮುಳ್ಳು!

ರಕ್ತದ ದಾಹವೆ ಹೃದಯದಲು,
ಕಾಮಿಯ ವಾಣಿಯ ಉಸುರಿನಲು;

ಸತ್ತರು ಮರೆಯರು ಲೋಭವನು,
ಮತ್ಸರ ಬಾಳಿನ ದರ್ಪವನು,

ಮೀನಿಗೆ ಮೀನೇ ಸವಿಯೂಟ
ಸೋದರ ವಧೆಯೇ ನರನಾಟ!

ವಿದ್ಯೆಯು ದ್ರೋಹಿಯ ಮಂಕಾಟ,
ಬಡವನ ವಂಚಿಪ ಹುಸಿಮಾಟ!

ತಿನ್ನುವ ಕಾಳದು ಕರುಳಿನಲಿ
ಉರಳ್ವದು ಮೋಹದ ರಾಟೆಯಲಿ.

ಅದರಿಂ ಸೂರ್ಯನು ಚಂದ್ರನನು
ವಂಚಿಪ ಬಾಳಿನ ತಿರುಳನ್ನು,

ನೋಡುತ ಪೋಗ್ವುದೆ-ಈ ಮಾಯ,
ಮಾಯ ಪ್ರಪಂಚದ ಅಧಿಮಾಯ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...