Home / ಲೇಖನ / ಇತರೆ / ಮಾನವ ಸರ್ವಶ್ರೇಷ್ಠನೇ ?

ಮಾನವ ಸರ್ವಶ್ರೇಷ್ಠನೇ ?

Iruveಪ್ರಿಯ ಸಖಿ,
ಅದೊಂದು ವಿಜ್ಞಾನಿಗಳ ಗಹನವಾದ ಸಭೆ, ಪ್ರತಿಯೊಬ್ಬ ವಿಜ್ಞಾನಿಯೂ ಪ್ರಪಂಚದಲ್ಲೆಲ್ಲಾ ಮಾನವನೇ ಅತ್ಯಂತ ಶ್ರೇಷ್ಠ ಜೀವಿ. ಅವನು ಎಲ್ಲ ಪ್ರಾಣಿಗಳನ್ನೂ ತನ್ನ ಅಧೀನದಲ್ಲಿರಿಸಿಕೊಂಡು ಈ ಭೂಮಿಯನ್ನೇ ಆಳಬಲ್ಲ ಎಂಬ ವಿಷಯವನ್ನು ಕುರಿತು ವಿಷಯ ಮಂಡಿಸುತ್ತಿದ್ದಾರೆ.

ಪ್ರಪಂಚದಲ್ಲೆಲ್ಲಾ ಅಳಬಲ್ಲ, ನಗಬಲ್ಲ, ಯೋಚಿಸಬಲ್ಲ, ವಿವೇಚಿಸಬಲ್ಲ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನೇ. ಅವನು ಸಿಂಹ, ಹುಲಿ, ಆನೆ, ಕರಡಿ, ಚಿರತೆ, ನರಿ, ತೋಳದಂತಹಾ ಪ್ರಾಣಿಗಳನ್ನು ಪಳಗಿಸಿ ತನ್ನ ಅಡಿಯಾಳಾಗಿ ಮಾಡಿಕೊಳ್ಳಬಲ್ಲ. ಜಿಂಕೆ, ಕುದುರೆ, ಹಸು, ಎಮ್ಮೆ, ಕುರಿ, ತೋಳಗಳಂತಹ ಪ್ರಾಣಿಗಳನ್ನು ಸಾಕಿ ತನ್ನಿಷ್ಟದಂತೆ ಉಪಯೋಗ ಪಡೆಯಬಲ್ಲ. ಪ್ರಪಂಚದ ಎಲ್ಲ ಪ್ರಾಣಿಗಳ ಸ್ವಭಾವವನ್ನೂ ವಿಜ್ಞಾನದ ಮುಖಾಂತರ ತಿಳಿದುಕೊಂಡಿರುವುದರಿಂದ ಯಾವ ಪ್ರಾಣಿಯನ್ನೇ ಆಗಲಿ ಹತೋಟಿಯಲ್ಲಿಡುವುದು ಮಾನವನಿಗೆ ಕಷ್ಟವೇ ಅಲ್ಲ. ಆದ್ದರಿಂದಲೇ ಜಗತ್ತಿನಲ್ಲೇ ಸರ್ವಶ್ರೇಷ್ಠವಾದ, ಬಲಿಷ್ಟವಾದ ಪ್ರಾಣಿ ಮಾನವನೇ ಇತ್ಯಾದಿ ವಿಷಯಗಳನ್ನು ವಿಜ್ಞಾನಿಗಳು ಚರ್ಚೆಯ ಮುಖಾಂತರ ಸಾಬೀತು ಪಡಿಸುತ್ತಿದ್ದಾರೆ.

ಇವರ ವಾದವನ್ನೆಲ್ಲಾ ಈ ವಿಜ್ಞಾನಿಗಳ ಗುಂಪಿನ ಅತ್ಯಂತ ಹಿರಿಯ ಹಾಗೂ ಪ್ರಮುಖ ವಿಜ್ಞಾನಿ ಕೇಳಿಸಿಕೊಳ್ಳುತ್ತಿದ್ದಾನೆ. ಆದರೆ ಅವನಿಗೆ ಆ ಕಡೆಗೆ ಏಕಾಗ್ರತೆ ಇಲ್ಲ. ಸಭೆ ಪ್ರಾರಂಭವಾದಾಗಿನಿಂದ ಇವನಿಗೆ ತನ್ನ ಶರಟಿನೊಳಗೆ ತುರಿಕೆ ಪ್ರಾರಂಭವಾಗಿದೆ. ಯಾವುದೋ ಕ್ರಿಮಿ ಇವನ ಮೈಮೇಲೆ ಓಡಾಡುತ್ತಾ ಕಚ್ಚುತ್ತಿರುವುದು ಸ್ಪಷ್ಟವಾಗಿದೆ. ಆದರೆ ಅದೊಂದು ಗಂಭೀರವಾದ ಸಭೆಯಾದ್ದರಿಂದ ಆಡಲಾಗದೇ, ಅನುಭವಿಸಲಾಗದೇ ಕೂತ ಜಾಗದಲ್ಲೇ ಮಿಸುಕಾಡುತ್ತಾ ಕುಳಿತಿದ್ದಾನೆ. ಶರಟಿನ ಮೇಲೆ ಯಾರಿಗೂ ಗೊತ್ತಾಗದಂತೆ ಉಜ್ಜಿಕೊಳ್ಳುತ್ತಿದ್ದಾನೆ. ಕೆರೆದುಕೊಳ್ಳುತ್ತಿದ್ದಾನೆ. ಯಾರಾದರೂ ಇತ್ತ ಗಮನಹರಿಸಿದರೆ ಪೆಚ್ಚುನಗೆ ನಕ್ಕು ಕೈ ಹಿಂದೆಳೆದುಕೊಳ್ಳುತ್ತಾನೆ.

ಸುಮಾರು ಹೊತ್ತಿನಿಂದ ಇವನ ಪರದಾಟ ಹೀಗೇ ಸಾಗಿದೆ. ಚರ್ಚೆ, ವಾದ, ವಿವಾದಗಳು ಮುಗಿಯಲು ಬಂದಿವೆ. ಇನ್ನು ಈ ಪ್ರಮುಖ ವಿಜ್ಞಾನಿ ನಿರ್ಣಯವನ್ನು ತೆಗೆದುಕೊಂಡು ಒಪ್ಪಿಗೆ ಸೂಚಿಸಿದರೆ ಎಲ್ಲವೂ ಮುಗಿದಂತೆಯೇ. ಇದ್ದಕ್ಕಿದ್ದಂತೆ ಇನ್ನು ತಡೆಯಲಾರದವನಂತೆ ಈ ಹಿರಿಯ ವಿಜ್ಞಾನಿ ತನ್ನ ಶರಟನ್ನು ಬಿಚ್ಚಿದ್ದಾನೆ. ಅಷ್ಟು ಹೊತ್ತಿನಿಂದಲೂ ಇವನನ್ನು ಕಚ್ಚಿ ಹಿಂಸೆ ನೀಡುತ್ತಿರುವ ಪುಟಾಣಿ ಇರುವೆಯನ್ನು ಹುಡುಕಿ ತೆಗದು ಟೇಬಲ್ಲಿನ ಮೇಲೆ ಹರವಿ “ಪ್ರಪಂಚದಲ್ಲಿ ಶ್ರೇಷ್ಠವಾದವನು ಮಾನವನೊಬ್ಬನೇ ಅಲ್ಲ. ನನ್ನಂತಹ ದೊಡ್ಡ ವಿಜ್ಞಾನಿಯನ್ನೂ ಗಂಟೆಗಳಿಂದ ಕಾಡಿಸಿದ ಈ ಯಕಶ್ಚಿತ್ ಇರುವೆಯಂತಾ ಪ್ರಾಣಿ ಕೂಡ ಶ್ರೇಷ್ಠವಾದುದೇ. ಆದ್ದರಿಂದ ಈ ಪ್ರಪಂಚದಲ್ಲಿನ ಎಲ್ಲ ಜೀವಿಗಳೂ ತಮ್ಮ ತಮ್ಮ ವಿಶಿಷ್ಟತೆಯಿಂದ ಶ್ರೇಷ್ಠವಾದುದೇ. ಈ ನಮ್ಮ ಇಂದಿನ ಎಲ್ಲ ಚರ್ಚೆ ಹುರುಳಿಲ್ಲದ್ದು ಎಂಬ ನಿರ್ಣಯವನ್ನು ಈ ಸಭೆಗೆ ನೀಡುತ್ತಿದ್ದೇನೆ” ಎಂದು ಘೋಷಿಸಿ ಸಭೆಯಿಂದ ಹೊರನಡೆಡುಬಿಟ್ಟ. ಟೇಬಲ್ಲಿನ ಉದ್ದಗಲಕ್ಕೂ ಹರಿದಾಡುತ್ತಿದ್ದ ಇರುವೆ, ಪೆಚ್ಚಾದ ವಿಜ್ಞಾನಿಗಳ ಮುಖವನ್ನು ನೋಡಿ ಗಹಗಹಿಸಿ ನಗಲಾರಂಭಿಸಿತು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...