Home / ಕವನ / ಕವಿತೆ / ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ
ನೆಮ್ಮದಿಯು ಭೂತಳದ ದೇಶಗಳಿಗೆಲ್ಲ

ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ
ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ
ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ
ಆನಂದ ನಸುನಗುವ ವಸಂತನಂತೆ

ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ
ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ
ಜೀವನವು ಬೆಳಕು ಮೇಣ್ ಪ್ರೀತಿಗಳು ಎಲ್ಲರಿಗೆ
ಜೀವಿಗಳಿಗೆಲ್ಲರಿಗೆ ಪ್ರೇಮ ನಿಸ್ಸೀಮ

ಎಲ್ಲರಿಗೆ ಕಾಯಕವು ಅನ್ನ ಬಟ್ಟೆಗಳಿರಲಿ
ಸರಿಸಮತೆ ನೆಲಗೊಳ್ಳಲೆಲ್ಲರಲ್ಲಿ
ಮನೆ ಶಾಲೆ ಆರೋಗ್ಯವನುಕೂಲವೆಲ್ಲರಿಗೆ
ಸಂತಸದ ಜಗವಿರಲಿ ಎಲ್ಲೆಡೆಯಲಿ

ಸೋಮಾರಿ ಸಿರಿತನವು ಬರಿಹೊಟ್ಟೆ ಭಿಕ್ಷುಕರು
ಬೇಡವೈ ಎಲ್ಲರೂ ಸಮ ಕೆಲಸದಲ್ಲಿ
ಕಣ್ಣೀರ ಕರೆಬೇಡ ಅಂಜಿಕೆಯ ಪರಿಬೇಡ
ನಗುವುಕ್ಕಿ ಹರಿಯಲೀ ಎಲ್ಲರೆದೆಯಲ್ಲಿ

ಅಣುಶಕ್ತಿ ಭಯಬೇಡ ಸಿರಿರಾಷ್ಟ್ರ ಬಲಬೇಡ
ಯುದ್ಧ ರಾಕ್ಷಸನಿಗೋ ಸ್ಥಳವೆ ಬೇಡ
ಮರದ ಎಲೆಗಳ ರೀತಿ ಸೂರ್ಯಕಿರಣಗಳಂತೆ
ನಾವೆಲ್ಲ ದಿವ್ಯ ಮಾನವರು ನೋಡ

ನಿನ್ನೊಳಗಿನೊಳತಿರುಳು ಎಲ್ಲರೊಳಿತಿಗೆ ತುಡಿದು
ನಿನ್ನ ಜೀವವು ಎಲ್ಲ ಜೀವಗಳಿಗಾಗಿ
ನಿನ್ನ ದೇವರು ಎಲ್ಲ ಜನರಲ್ಲು ತುಂಬಿಹನು
ನಿನ್ನ ಪ್ರೀತಿಯು ಎಲ್ಲ ಮಾನವರಿಗಾಗಿ

ಅವನಿಗೋ ಅವಳಿಗೋ ಪ್ರತಿಯೊಬ್ಬ ವ್ಯಕ್ತಿಗೋ
ಸಹಬಾಳ್ವೆಯೇ ಬೆಳಕು ಅತ್ಯುತ್ತಮಾ
ಪಾಶ್ಚಾತ್ಯ ಪೌರಾತ್ಯ ಭೂಬಂಧುಗಳಿಗೆಲ್ಲ
ವಿಶ್ವ ಮಾನವ ಧರ್ಮ ಅತ್ಯುತ್ತಮ

ಸಸ್ಯ ಸಂತತಿಗೆಲ್ಲ ಪ್ರಾಣಿ ಪಕ್ಷಿಗಳಿಗೂ
ಗಿರಿಗಳಿಗೆ ವನಗಳಿಗೆ ಕಳಕಳದ ಹೊಳೆಗೆ
ನೆಲ ಜಲಕೆ ತಿರೆ ವಾಯು ಪಂಚಭೂತದ ಜಗಕೆ
ಚೈತನ್ಯ ನೆಮ್ಮದಿಯು ತುಂಬಿ ಬೆಳಗೆ

ಎಲ್ಲರಿಗೂ ನೆಮ್ಮದಿಯು ಎಲ್ಲೆಡೆಗು ನೆಮ್ಮದಿಯು
ಅಮರ ಶಾಂತಿಯ ದಿವ್ಯ ಭವ್ಯ ನೆಮ್ಮದಿಯು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...