Home / ಕವನ / ಕವಿತೆ / ದೊಡ್ಡ ಜನರು

ದೊಡ್ಡ ಜನರು

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು
ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು
ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ
ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ
ಬೃಹತ್ತಾದ ತೈಲಚಿತ್ರಗಳು ಹಿರಿಯರದು.  ಆ ಮೂಲೆಯಲ್ಲೊಂದು
ಎರಕದ ಬುದ್ಧ. ಇಲ್ಲೊಂದು ಕಪ್ಪು ಶಿಲೆಯ ಗೊಮ್ಮಟ.
ದೊಡ್ಡ ಜನರು ದೊಡ್ಡ ಮನೆಗಳಲ್ಲಿ ವಾಸ ಮಾಡುತ್ತಾರೆ.

ಸರ್ವಸೇವಾ ಸಂಸ್ಥೆಯ ಅಧ್ಯಕ್ಷಿಣಿ ಕಾಮಾಕ್ಷಮ್ಮ
ನೆಲ ಮುಟ್ಟಿದ್ದೆ ಅಪರೂಪ.  ಚಿನ್ನದ ಬಣ್ಣದ ಸಾಂಡಲುಗಳನ್ನು
ಸ್ನಾನಗೃಹದ ಹೊರಗೊಮ್ಮೆ, ಶಯನಗೃಹದ ಒಳಗೊಮ್ಮೆ
ತೆಗೆಯುತ್ತಾರಷ್ಟೆ. ಮತ್ತೆ ಒಂದು ರಾಬಿನ್ಸನೊಂದಿಗೇ
ಒಂದು ಭೈರಪ್ಪನೊಂದಿಗೋ ಮೆತ್ತೆಯಲ್ಲಿ ಮಲಗಿ ನಿದ್ದೆಹೋದರೆ
ಎಬ್ಬಿಸಬೇಕು ಅಡಿಗೆಯವಳು ಅಥವ ಸ್ಥಳೀಯ ಮುಖಂಡರು.
ದೊಡ್ಡ ಜನರು ದೊಡ್ಡ ಹೆಂಗಸರನ್ನು ಮದುವೆಯಾಗುತ್ತಾರೆ.

ಬೇಸಿಗೆಯ ಇಳಿಹೊತ್ತಿನಲ್ಲಿ ಹೊರಗೆ ಕುಳಿತುಕೊಳ್ಳುವುದು ಆರಾಮ.
ಗುಲ್ಮೊಹರ್‍ ಮರಗಳ ಕೆಳಗೆ ಬೆತ್ತದ ಆಸನಗಳನ್ನು ಹಾಕಿದೆ.
ಟೀಪಾಯಿಯ ಮೇಲೆ ಚಹಾದ ಕೆಟ್ಟಲು ಕಪ್ಪುಗಳು.
ಸೆಕೆಗಾಲದಲ್ಲಿ ಲಿಂಬೆಹಣ್ಣಿನ ಚಹಾವನ್ನೆ ಎಲ್ಲರೂ ಇಷ್ಟಪಡುತ್ತಾರೆ.
ಮಾನವೀಯ ಹಕ್ಕುಗಳೆ? ನೇಪಾಳವನ್ನು ತಗೊಳ್ಳಿ, ಉದಾಹರಣೆಗೆ.
ಹಿಂದೆ ನಾನು ಡಾರ್ಜೀಲಿಂಗಿನಲ್ಲಿದ್ದಾಗ ಒಬ್ಬಳು ನೇಪಾಳಿ ಸಿಕ್ಕಿದಳು.
ದೊಡ್ಡ ಜನರು ದೊಡ್ಡ ಸಂಗತಿಗಳನ್ನು ಚರ್ಚಿಸುತ್ತಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...