Home / ಲೇಖನ / ಸಾಹಿತ್ಯ / ಮುಂಬರುವ “ಶೌಚಾಲಯ”

ಮುಂಬರುವ “ಶೌಚಾಲಯ”

“ಲ್ಯಾಟ್ರಿನ್’ ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ “ಲ್ಯಾಟ್ರಿನ್” ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ಆಧುನಿಕ ನಮೂನೆಗಳ ಕಕ್ಕಸು ಕೋಣೆಯನ್ನು ಕಟ್ಟಸಿದವರಿದ್ದಾರೆ. ಇವೆಲ್ಲ ಅಂದ, ಚಂದ, ಸ್ವಚ್ಛತೆಯ ದೃಷ್ಟಿಯಿಂದ ಆಪ್ಯಾಯಮಾನವಾಗಿರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ವೈದ್ಯಕೀಯ ವಿಜ್ಞಾನ ಇಣುಕು ಹಾಕಿದೆ. ಲಂಡನ್ನಿನ ವಿಜ್ಞಾನಿಗಳು ರೂಪಿಸಿದ ಲ್ಯಾಟ್ರಿನ್ ಒಂದು ವರದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಖ್ಯವಾಗಿ ಗರ್ಭಿಣಿಯರು ಮತ್ತು ಡಯಾಬಿಟಿಸ್ ಕಾಯಿಲೆಗಳಿದ್ದವರ ರೋಗಗಳ ವಿವರವನ್ನು ಈ ಮಲ, ಮೂತ್ರಾಲಯ ನೀಡಲಿದೆ. ಇದಕ್ಕೆ ಸ್ವಯಂ ಚಾಲಿತವಾಗಿ
ಜೋಡಿಸಿದ ಮೋಡೆಮ್‌ಗಳು ರೋಗಿಗಳ ಖಾಸಗಿ ವ್ಶೆದ್ಯರಿಗೆ ರೋಗಗಳ ವಿವರಗಳನ್ನು ಇ-ಮೇಲ್ ಮೂಲಕ ಸಂವಹನ ನಡೆಸುತ್ತವೆ. ವರ್ಸ್‌ಟೈಲ್ ಇಂಟರ್ಯಾಕ್ಟಿವ್ ಪಾನ್ (V.I.P) ಎಂದು ಕರೆಯಲ್ಪಡುವ ಈ ಕಕ್ಕಸ್ಸನ್ನು ಮುಂಬರುವ ಜಾಣ್ಮೆಯ ಕಕ್ಕಸುಗಳೆಂದು ಈಗಾಗಲೇ ಉಪಯೋಗಿಸಿದ ರೋಗಿಗಳ ಅಭಿಪ್ರಾಯವಾಗಿದೆ. ಮಕ್ಕಳು ಅಥವಾ ಅಂಗವಿಕಲರು ಈ ಕಕ್ಕಸ್ಸಿನ ಬಳಿಗೆ ಬಂದು ಮಾತನಾಡಿದರೆ ಸಾಕು ಅದು ಅವರಿಗೆ ಅನುಕೂಲವಾಗುವಂತೆ
ಸ್ವಯಂಚಾಲಿತವಾಗಿ ತನ್ನ ವಿನ್ಯಾಸವನ್ನು ಬದಲಿಸಿಕೊಳ್ಳಲಿದೆ. ಧ್ವನಿಗ್ರಹಣ (ಶಬ್ದ ಮಾಡಿದರೆ) ಮಾಡಿದರೆ ಕಕ್ಕಸ್ಸಿ- ನಿಂದ ಇದು ಕೇವಲ ಮೂತ್ರಾಲಯವಾಗಿ ಪರಿವರ್ತನೆಯಾಗುತ್ತದೆ. ಈ ಹೊಸ ಮಾದರಿಯ ಲ್ಯಾಟ್ರಿನ್  ವಿನ್ಯಾಸ- ಗೊಳಿಸಲು 5 ವರ್ಷ ಹಿಡಿದು 8000 ಡಾಲರ್ ಖರ್ಚಾಗಿದೆ. 2006ರಲ್ಲಿ ಈ ಮಾದರಿಯನ್ನು ಮಾರುಕಟ್ಟೆಗೆ ತರಲಾಗುಪುದೆಂದು ಚೆಸ್ಟರ್ ಮೂಲದ ಟ್ವೈಪೋರ್ಡ್‌ ಬಾತ್‌ರೂಮ್ ಕಂಪನಿ ಪ್ರಕಟಿಸಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...