Home / ಲೇಖನ / ಸಾಹಿತ್ಯ / ಮುಂಬರುವ “ಶೌಚಾಲಯ”

ಮುಂಬರುವ “ಶೌಚಾಲಯ”

“ಲ್ಯಾಟ್ರಿನ್’ ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ “ಲ್ಯಾಟ್ರಿನ್” ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ಆಧುನಿಕ ನಮೂನೆಗಳ ಕಕ್ಕಸು ಕೋಣೆಯನ್ನು ಕಟ್ಟಸಿದವರಿದ್ದಾರೆ. ಇವೆಲ್ಲ ಅಂದ, ಚಂದ, ಸ್ವಚ್ಛತೆಯ ದೃಷ್ಟಿಯಿಂದ ಆಪ್ಯಾಯಮಾನವಾಗಿರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ವೈದ್ಯಕೀಯ ವಿಜ್ಞಾನ ಇಣುಕು ಹಾಕಿದೆ. ಲಂಡನ್ನಿನ ವಿಜ್ಞಾನಿಗಳು ರೂಪಿಸಿದ ಲ್ಯಾಟ್ರಿನ್ ಒಂದು ವರದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಖ್ಯವಾಗಿ ಗರ್ಭಿಣಿಯರು ಮತ್ತು ಡಯಾಬಿಟಿಸ್ ಕಾಯಿಲೆಗಳಿದ್ದವರ ರೋಗಗಳ ವಿವರವನ್ನು ಈ ಮಲ, ಮೂತ್ರಾಲಯ ನೀಡಲಿದೆ. ಇದಕ್ಕೆ ಸ್ವಯಂ ಚಾಲಿತವಾಗಿ
ಜೋಡಿಸಿದ ಮೋಡೆಮ್‌ಗಳು ರೋಗಿಗಳ ಖಾಸಗಿ ವ್ಶೆದ್ಯರಿಗೆ ರೋಗಗಳ ವಿವರಗಳನ್ನು ಇ-ಮೇಲ್ ಮೂಲಕ ಸಂವಹನ ನಡೆಸುತ್ತವೆ. ವರ್ಸ್‌ಟೈಲ್ ಇಂಟರ್ಯಾಕ್ಟಿವ್ ಪಾನ್ (V.I.P) ಎಂದು ಕರೆಯಲ್ಪಡುವ ಈ ಕಕ್ಕಸ್ಸನ್ನು ಮುಂಬರುವ ಜಾಣ್ಮೆಯ ಕಕ್ಕಸುಗಳೆಂದು ಈಗಾಗಲೇ ಉಪಯೋಗಿಸಿದ ರೋಗಿಗಳ ಅಭಿಪ್ರಾಯವಾಗಿದೆ. ಮಕ್ಕಳು ಅಥವಾ ಅಂಗವಿಕಲರು ಈ ಕಕ್ಕಸ್ಸಿನ ಬಳಿಗೆ ಬಂದು ಮಾತನಾಡಿದರೆ ಸಾಕು ಅದು ಅವರಿಗೆ ಅನುಕೂಲವಾಗುವಂತೆ
ಸ್ವಯಂಚಾಲಿತವಾಗಿ ತನ್ನ ವಿನ್ಯಾಸವನ್ನು ಬದಲಿಸಿಕೊಳ್ಳಲಿದೆ. ಧ್ವನಿಗ್ರಹಣ (ಶಬ್ದ ಮಾಡಿದರೆ) ಮಾಡಿದರೆ ಕಕ್ಕಸ್ಸಿ- ನಿಂದ ಇದು ಕೇವಲ ಮೂತ್ರಾಲಯವಾಗಿ ಪರಿವರ್ತನೆಯಾಗುತ್ತದೆ. ಈ ಹೊಸ ಮಾದರಿಯ ಲ್ಯಾಟ್ರಿನ್  ವಿನ್ಯಾಸ- ಗೊಳಿಸಲು 5 ವರ್ಷ ಹಿಡಿದು 8000 ಡಾಲರ್ ಖರ್ಚಾಗಿದೆ. 2006ರಲ್ಲಿ ಈ ಮಾದರಿಯನ್ನು ಮಾರುಕಟ್ಟೆಗೆ ತರಲಾಗುಪುದೆಂದು ಚೆಸ್ಟರ್ ಮೂಲದ ಟ್ವೈಪೋರ್ಡ್‌ ಬಾತ್‌ರೂಮ್ ಕಂಪನಿ ಪ್ರಕಟಿಸಿದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...