Home / ಲೇಖನ / ಸಾಹಿತ್ಯ / ಎಚ್ಚರಿಕೆ

ಎಚ್ಚರಿಕೆ

ಅಲಂಕಾರವು ಕೀಳಾದರೆ ತಪ್ಪಿದಾತನು ಸೊನೆಗಾರ
ಭಂಗಾರದ್ದೇನು ತಪ್ಪು?
ಮೂರ್ತಿ ಕೆಟ್ಟರೆ ದೋಷಕ್ಕೆ ಗುರಿ ಚಿತ್ರಗಾರ
ಮಣ್ಣೇನು ಮಾಡೀತು?
ಮನೆ ಡೊಂಕಾದರೆ ಕೆಡಿಸಿದವನು ಉಪ್ಪಾರ
ಕಟ್ಟೇನು ಮಾಡ್ಯಾವು?
ನಾನು ಗುಣಹೀನನಾದರೆ, ದೇವಾ
ನೀನು ಹೊಣೆಗಾರನು.

ಒಬ್ಬ ಸೊನಗಾರ ಕೆಲಸ ಕೆಡಿಸಿದರೆ ಮತ್ತೊಬ್ಬ ದೊರೆಯುವನೆಂದು ಜನರಿಗೆ ನಂಬಿಕೆ. ಆದರೆ ಸೃಷ್ಟಿಕರ್ತನು ಬೀದಿ-ಬೀದಿಗೆ ದೊರಕುವದುಂಟೆ? ದೇವಾ ನೀ ಮಾಡಿದ ತಪ್ಪನ್ನು ಮತ್ತಾರು ತಿದ್ದುವರು? ಜೀವಿಗಳನ್ನು ನಿರ್ಮಿಸುವಾಗ್ಗೆ ಎಚ್ಚರಿರಬೇಡವೆ? ನನ್ನಂಥ ಪಾಮರರನ್ನು ಜನಿಸಿಸಿ ನಿನ್ನ ಹೆಸರಿಗೆ ನೀನೇ ಕುಂದು ತಗಲಿಸುವದುಚಿತವೆ?

ಕುಂಬಾರನಿಂದ ಒಡಕ ಗಡಿಗೆಗಳನ್ನಾರೂ ಕೊಳ್ಳುವದಿಲ್ಲ. ಕೊಳಕು ಹಣ್ಣುಗಳು ಮಾರಾಟವಾಗುವದಿಲ್ಲ. ಒಡಕ ಗಡಿಗೆಗಳು ತಿರುಗಿ ಕುಂಬಾರನ ಮನೆಗೇ ಹೋಗುವವು. ಎಲೈ ಭವಚಕ್ರನಾಡಿಸುವ ಕುಂಬಾರನೇ! ನನ್ನಂಥ ನಿರ್ಗುಣಿಗಳು ತಿರುಗಿ ನಿನ್ನೆಡೆಗೆಯೇ ಬರುವರು ಎಚ್ಚರಿಕೆ.

ನನ್ನ ಪೂರ್ವ ಕರ್ಮದ ಫಲವೆಂದು ನೀನು ದೋಷ ತಪ್ಪಿಸಲು ಯತ್ನಿಸಬಹುದು, ಆದರೆ ಪೂರ್ವ ಕರ್ಮವನ್ನಾದರೂ ಮಾತಾಡಿಸಿದವರಾರು?
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...