Home / ಲೇಖನ / ವಿಜ್ಞಾನ / ಮಾನವನ ಚರ್ಮ ಉತ್ಪಾದಿಸುವ ತಂತ್ರಜ್ಞಾನ

ಮಾನವನ ಚರ್ಮ ಉತ್ಪಾದಿಸುವ ತಂತ್ರಜ್ಞಾನ

ಬೆಂಕಿಯಿಂದ ಚರ್ಮಸುಟ್ಟು ಹೋದಾಗ ಅಥವಾ ಚರ್ಮದ ಕೊಳೆತದಿಂದಾಗಿ, ಒಳಗಿನ ಮಾಂಸ ಹೊರಕಾಣುವಾಗ ಅಥವಾ ಅಪಘಾತ ಇನ್ನಿತರೆ ಅವಘಡಗಳಲ್ಲಿ ಚರ್ಮಕ್ಕೆ ಬಾಧೆಯಾದಾಗ ಆ ಸ್ಥಳಗಳಿಗೆ ಬೇರೆ ಚರ್ಮವನ್ನು ಕವಚ ಗೊಳಿಸಿ (ಜೀವಾಣು) ಗಳ ಕ್ರಿಯೆ ನಡೆಯುವಂತೆ ಮಾಡಲಾಗುತ್ತೆದೆ. ಇಲ್ಲಿಯವರೆಗೆ ಅದೇ ವ್ಯಕ್ತಿಯ ಬೇರೆ ಭಾಗದ ಚರ್ಮವನ್ನು ಸುಲಿದು ಹಾಕುವ ಪದ್ದತಿ ಇತ್ತು ಇನ್ನು ಮುಂದೆ ಮುಂದುವರಿದ ವೈಜ್ಞಾನಿಕ ತಂತ್ರಗಳನ್ನು ಬಳಸಿ ಹೊಸ ಬಗೆಯ ಚರ್ಮವನ್ನೇ ಉತ್ಪಾದಿಸಿ ಕಿತ್ತು ಹೋದ ಭಾಗಕ್ಕೆ ಅಂಟಿಸುವ ತಂತ್ರಜ್ಞಾನ ಬರಲಿದೆ.

ಕ್ಯಾಲಿಫೋರ್ನಿಯಾದ ಜೀವತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಕೆಲವು ದಿನಗಳಲ್ಲಿ ಇಂಚು ಉದ್ಧ 6 ಇಂಚು ಅಗಲದ ಚರ್ಮದ ಹಾಳೆಗಳನ್ಪು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲಿದ್ದಾರೆ. ಇಂತಹ ಚರ್ಮದ ಹಾಳೆಗಳು ಬೆಂಕಿ ಅಪಘಾತಗಳಲ್ಲಿ ಹಾನಿಗೊಂಡ ಚರ್ಮದ ಮೇಲೆ ಹೊದಿಸಲು ತುಂಬ ಉಪಯುಕ್ತವೆಂದು ಹೇಳುತ್ತಾರೆ. ಕ್ಯಾಲಿಫೋರ್ನಿಯಾದ ಜೋಸೆಪ್ ಮತ್ತು ರಾಬರ್ಟ್ ಅವರು ಅನೇಕ ಪ್ರಯೋಗಗಳನ್ನು ಮಾಡಿ ಕೃತಕ ಚರ್ಮದ ಉತ್ಪಾದನೆಯನ್ನೂ ಕಂಡುಹಿಡಿದಿದ್ದಾರೆ. ಕ್ಯಾಲಿಫೋನಿರ್ಯದ ಉನ್ನತ ಅಂಗಾಂಶ (ATS) ವಿಜ್ಞಾನಿಗಳ ಸಂಸ್ಥೆ ಲಾಜೋಲಾವದಲ್ಲಿ ಜಗತ್ತಿನ ಮೊಟ್ಟಮೊದಲ ಚರ್ಮದ ಕಾರ್ಖಾನೆಯ ಕಟ್ಟಡವನ್ನು ಪೂರ್ಣಗೊಳಿಸಿದ್ದಾರೆ. ಉತ್ಪಾದನೆಯನ್ನು ಆರಂಭಿಸಲು ಸರ್ಕಾರದ ಅನುಮತಿ (AIS)ಗಾಗಿ ಕಾಯುತ್ತಿದೆ.

ಈ ಚರ್ಮವು ಚಪ್ಪಟೆಯಾಕಾರವಾಗಿದ್ದು ಸಂಕೀರ್ಣ ಅಂಗವಾಗಿದೆ ಇದರ ಎರಡು ಪದರುಗಳು ವಿಶೇಷ ಕಾರ್ಯ ನಿರ್ವಹಿಸಲೆಂದೇ ನಿರ್ಮಾಣಗೊಂಡಿವೆ. ಕಳೆದ ದಶಕದಲ್ಲಿ ವಿಜ್ಞಾನಿಗಳು ಅವಿರತವಾಗಿ ಪ್ರಯತ್ನ ನಡಸಿದ್ದು ಈಗ ಫಲಕಾರಿಯಾಗಿದೆ. ಹಾಸಿಗೆಯ ಮೇಲೆ ಸತತವಾಗಿ ಮಲಗಿರುವುದರಿಂದ ಉಂಟಾಗುವ ಗಾಯ (Bedsores) ಹಾಗೂ ಸಕ್ಕರೆ ರೋಗದ (Diabetic Ulsers) ಹುಣ್ಣುಗಳನ್ನು ಗುಣಪಡಿಸಲು ಬಳಸುವ ಚರ್ಮ ಭಾಗಗಳೆಂದಲೇ ವರ್ಷಒಂದಕ್ಕೆ 3 ರಿಂದ 5 ಶತ ಕೋಟಿ ಡಾಲರು ವಹಿವಾಟು ಆಗಲಿದೆ. ಪ್ರಯೋಗಾಲಯದಲ್ಲಿ ತಯಾರಿಸಿದ ಚರ್ಮಕ್ಕೆ ಬೇಡಿಕೆ ಇರುವ ಮತ್ತೊಂದು ಮಾರುಕಟ್ಟೆ ಯೆಂದರೆ ಸುಟ್ಟಗಾಯದ ರೋಗಿಗಳದ್ಭು ಇದರ ಆದಾಯ 30 ಕೋಟಿ ಡಾಲರ್ ಅಗಬಹುದೆಂದು ಯೋಜನೆ ಹಾಕಿಕೊಂಡಿದೆ.

ಇದೇ ತಂತ್ರ ಜ್ಞಾನವನ್ನು ಬಳಸಿ ಮೃದ್ವಸ್ಥಿ (Cartilage) ಮತ್ತು ಸ್ಥಾನದ ಅಂಗಾಂಶಗಳನ್ನು ಪ್ರಯೋಗಾಲಯದಲ್ಲಿ ಉತ್ಪಾದಿಸುವ ಕಾರ್ಯವೂ ನಡೆದಿದೆ.

****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...