Home / ಲೇಖನ / ವಿಜ್ಞಾನ / ಮಾನವನ ಚರ್ಮ ಉತ್ಪಾದಿಸುವ ತಂತ್ರಜ್ಞಾನ

ಮಾನವನ ಚರ್ಮ ಉತ್ಪಾದಿಸುವ ತಂತ್ರಜ್ಞಾನ

ಬೆಂಕಿಯಿಂದ ಚರ್ಮಸುಟ್ಟು ಹೋದಾಗ ಅಥವಾ ಚರ್ಮದ ಕೊಳೆತದಿಂದಾಗಿ, ಒಳಗಿನ ಮಾಂಸ ಹೊರಕಾಣುವಾಗ ಅಥವಾ ಅಪಘಾತ ಇನ್ನಿತರೆ ಅವಘಡಗಳಲ್ಲಿ ಚರ್ಮಕ್ಕೆ ಬಾಧೆಯಾದಾಗ ಆ ಸ್ಥಳಗಳಿಗೆ ಬೇರೆ ಚರ್ಮವನ್ನು ಕವಚ ಗೊಳಿಸಿ (ಜೀವಾಣು) ಗಳ ಕ್ರಿಯೆ ನಡೆಯುವಂತೆ ಮಾಡಲಾಗುತ್ತೆದೆ. ಇಲ್ಲಿಯವರೆಗೆ ಅದೇ ವ್ಯಕ್ತಿಯ ಬೇರೆ ಭಾಗದ ಚರ್ಮವನ್ನು ಸುಲಿದು ಹಾಕುವ ಪದ್ದತಿ ಇತ್ತು ಇನ್ನು ಮುಂದೆ ಮುಂದುವರಿದ ವೈಜ್ಞಾನಿಕ ತಂತ್ರಗಳನ್ನು ಬಳಸಿ ಹೊಸ ಬಗೆಯ ಚರ್ಮವನ್ನೇ ಉತ್ಪಾದಿಸಿ ಕಿತ್ತು ಹೋದ ಭಾಗಕ್ಕೆ ಅಂಟಿಸುವ ತಂತ್ರಜ್ಞಾನ ಬರಲಿದೆ.

ಕ್ಯಾಲಿಫೋರ್ನಿಯಾದ ಜೀವತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಕೆಲವು ದಿನಗಳಲ್ಲಿ ಇಂಚು ಉದ್ಧ 6 ಇಂಚು ಅಗಲದ ಚರ್ಮದ ಹಾಳೆಗಳನ್ಪು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲಿದ್ದಾರೆ. ಇಂತಹ ಚರ್ಮದ ಹಾಳೆಗಳು ಬೆಂಕಿ ಅಪಘಾತಗಳಲ್ಲಿ ಹಾನಿಗೊಂಡ ಚರ್ಮದ ಮೇಲೆ ಹೊದಿಸಲು ತುಂಬ ಉಪಯುಕ್ತವೆಂದು ಹೇಳುತ್ತಾರೆ. ಕ್ಯಾಲಿಫೋರ್ನಿಯಾದ ಜೋಸೆಪ್ ಮತ್ತು ರಾಬರ್ಟ್ ಅವರು ಅನೇಕ ಪ್ರಯೋಗಗಳನ್ನು ಮಾಡಿ ಕೃತಕ ಚರ್ಮದ ಉತ್ಪಾದನೆಯನ್ನೂ ಕಂಡುಹಿಡಿದಿದ್ದಾರೆ. ಕ್ಯಾಲಿಫೋನಿರ್ಯದ ಉನ್ನತ ಅಂಗಾಂಶ (ATS) ವಿಜ್ಞಾನಿಗಳ ಸಂಸ್ಥೆ ಲಾಜೋಲಾವದಲ್ಲಿ ಜಗತ್ತಿನ ಮೊಟ್ಟಮೊದಲ ಚರ್ಮದ ಕಾರ್ಖಾನೆಯ ಕಟ್ಟಡವನ್ನು ಪೂರ್ಣಗೊಳಿಸಿದ್ದಾರೆ. ಉತ್ಪಾದನೆಯನ್ನು ಆರಂಭಿಸಲು ಸರ್ಕಾರದ ಅನುಮತಿ (AIS)ಗಾಗಿ ಕಾಯುತ್ತಿದೆ.

ಈ ಚರ್ಮವು ಚಪ್ಪಟೆಯಾಕಾರವಾಗಿದ್ದು ಸಂಕೀರ್ಣ ಅಂಗವಾಗಿದೆ ಇದರ ಎರಡು ಪದರುಗಳು ವಿಶೇಷ ಕಾರ್ಯ ನಿರ್ವಹಿಸಲೆಂದೇ ನಿರ್ಮಾಣಗೊಂಡಿವೆ. ಕಳೆದ ದಶಕದಲ್ಲಿ ವಿಜ್ಞಾನಿಗಳು ಅವಿರತವಾಗಿ ಪ್ರಯತ್ನ ನಡಸಿದ್ದು ಈಗ ಫಲಕಾರಿಯಾಗಿದೆ. ಹಾಸಿಗೆಯ ಮೇಲೆ ಸತತವಾಗಿ ಮಲಗಿರುವುದರಿಂದ ಉಂಟಾಗುವ ಗಾಯ (Bedsores) ಹಾಗೂ ಸಕ್ಕರೆ ರೋಗದ (Diabetic Ulsers) ಹುಣ್ಣುಗಳನ್ನು ಗುಣಪಡಿಸಲು ಬಳಸುವ ಚರ್ಮ ಭಾಗಗಳೆಂದಲೇ ವರ್ಷಒಂದಕ್ಕೆ 3 ರಿಂದ 5 ಶತ ಕೋಟಿ ಡಾಲರು ವಹಿವಾಟು ಆಗಲಿದೆ. ಪ್ರಯೋಗಾಲಯದಲ್ಲಿ ತಯಾರಿಸಿದ ಚರ್ಮಕ್ಕೆ ಬೇಡಿಕೆ ಇರುವ ಮತ್ತೊಂದು ಮಾರುಕಟ್ಟೆ ಯೆಂದರೆ ಸುಟ್ಟಗಾಯದ ರೋಗಿಗಳದ್ಭು ಇದರ ಆದಾಯ 30 ಕೋಟಿ ಡಾಲರ್ ಅಗಬಹುದೆಂದು ಯೋಜನೆ ಹಾಕಿಕೊಂಡಿದೆ.

ಇದೇ ತಂತ್ರ ಜ್ಞಾನವನ್ನು ಬಳಸಿ ಮೃದ್ವಸ್ಥಿ (Cartilage) ಮತ್ತು ಸ್ಥಾನದ ಅಂಗಾಂಶಗಳನ್ನು ಪ್ರಯೋಗಾಲಯದಲ್ಲಿ ಉತ್ಪಾದಿಸುವ ಕಾರ್ಯವೂ ನಡೆದಿದೆ.

****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್