Home / ಲೇಖನ / ವಿಜ್ಞಾನ / ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೆದುಳು ಮನುಷ್ಯನಿಗೆ ಅತ್ಯಮೂಲ್ಯ ವಸ್ತು ಇದರಿಂದಲೇ ಇಡೀ ದೇಹದ ಸೂತ್ರ
ಸಂಹನ ಕ್ರಿಯೆ ನಡೆಯುತ್ತದೆ. ಸೂಕ್ಷ್ಮತೆಯಿಂದಲೂ ಅಷ್ಟೇ ಪ್ರಧಾನವಾದ ಮೆದುಳನ್ನು
ನೈಸರ್ಗಿಕವಾಗಿಯೆ ತಲೆಬುರುಡೆ ರಕ್ಷಿಸುತ್ತದೆ. ತಲೆ ಚಿಪ್ಪಿನೊಳಗೆ ಇರುವ ಮಿದುಳಿಗೆ ಏನಾದರೂ
ಘಾಸಿಯಾದಾಗ ಇದುವರೆಗೆ ಅದರೊಂದಿಗೆ ಸಂಪರ್ಕ ಹೊಂದುವುದು ಬಹಳ ಕಷ್ಟವಿತ್ತು
ಚಿಪ್ಪಿನ ಮೂಲಕ ಅಪರೇಷನ್ ಮಾಡಲು ಸಾಧ್ಯವಿರಲಿಲ್ಲ. ಇದೀಗ ಮೂಗಿನ ಮೂಲಕ
ಅಸ್ತ್ರಗಳನ್ನು ತೂರಿಸಿ ಮೆದುಳಿನ ತೊಂದರೆಗಳನ್ನು ನಾಶಮಾಡಬಹುದೆಂದು ದಿಲ್ಲಿಯ
ಇಂದ್ರಪ್ರಸ್ತ ಅಪೋಲೋ ಅಸ್ಟತ್ರೆಯ ಡಾ|| ವಿಜಯಕುಮಾರ್ ಮತ್ತು ತಂಡದವರು
ಕಂಡುಹಿಡಿದಿದ್ದಾರೆ.

ಮೂಗಿನ ಮೂಲಕ ಮೆದುಳನ್ನು ತಲುಪಿ ಶಸ್ತ್ರ ಚಿಕಿತ್ಸೆ ನಡೆಸುವ ಈ ತಂತ್ರದಲ್ಲಿ
ರಕ್ತಸ್ರಾವವಾಗಲಾರದೆಂದು ಡಾ|| ವಿಜಯಕುಮಾರ್ ತಿಳಿಸುತ್ತಾರೆ. ನೇಸನ್ ಎಂಡೋಸ್ಕೋಪಿ
ಅಥವಾ ಮೂಗಿನ ಮೂಲಕದ ಶಸ್ತ್ರಚಿಕಿತ್ಸಾ ವಿಧಾನದಿಂದ ಮೆದುಳಿನ ಯಾವ
ಭಾಗವನ್ನಾದರೂ ತಲುಪಬಹುದು. ಆದರೆ  ಮಿದುಳಿನ ಶಸ್ತ್ರ ಚಿಕಿತ್ಸೆಯಿಂದ
ಮಿದುಳಿನ ಕೆಳಭಾಗದಲ್ಲಿರುವ ಪಿಟ್ಯೂಟರಿ ಗ್ರಂಥಿಯವನ್ನು ತಲುಪಲು ಸಾಧ್ಯವಾಗುವುದಿಲ್ಲ

ಕೇವಲ 4 ಮೀಟರ್ ಉದ್ದನೆಯ ಹಗುರವಾದ ತಂತಿಯ ಮೂಲಕ ಈ ಎಲ್ಲ ಶಸ್ತ್ರ
ಚಿಕಿತ್ಸೆಯನ್ನು ನಡೆಸಲಾಗುವುದು. ಇದು ಮೂಗನ್ನು ಪ್ರವೇಶಿಸಿದಾಗ ಈ ಭಾಗದಸಂಪೂರ್ಣ
ಚಿತ್ರವು ಗಣಕಯಂತ್ರ (ಕಂಪ್ಯೂಟರ್) ನಲ್ಲಿ ಕಾಣುತ್ತದೆ. ಈ ಕಂಪ್ಯೂಟರ್ ಮೇಲೆ ಕಾಣುವ
ಚಿತ್ರದ ಸಹಾಯದಿಂದ ಎಲ್ಲವನ್ನು ಪರಿಗ್ರಹಿಸುತ್ತ ಮೆದುಳಿನ ಭಾಗವನ್ನು ಪ್ರವೇಶಿಸಿ ಅದರಲ್ಲಿ
ಏನಾದರೂ ಏರುಪೇರಾಗಿದ್ದರೆ ಆ ತಂತಿಯ ತುದಿಯಲ್ಲಿರುವ ಚಿಕಿತ್ಸಕ ಘಟಕದಿಂದ
ಪರಿಹರಿಸಲಾಗುತ್ತದೆ. ಇದರ ಬಗೆಗೆ ಸಂಶೋಧನೆಗಳು  ದೇಶಗಳಲ್ಲಿ ನಡೆದು ‘ಯಶಸ್ವಿ
ಚಿಕಿತ್ಸೆ’ ಎಂದು ಹೇಳಿದೆ ಮೆದುಳಿನ ದ್ರವಸೋರಿಕೆಗೆ ಮತ್ತು ಕೆಲವೊಂದು ಭಾಗದ ಶಸ್ತ್ರ
ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ.
****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್