Home / ಲೇಖನ / ವಿಜ್ಞಾನ / ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ

ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ

ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ್ನು ಸುರಿದು (Blood Bank) ನಲ್ಲಿ ರಕ್ತ ತಂದು ಪೂರೈಸ- ಬೇಕಾಗುತ್ತದೆ. ಇದೆಲ್ಲ ಕಷ್ಟಕರವಾದ ಕೆಲಸವೆ. ಆದರೆ ತಂತ್ರಜ್ಞಾನದಿಂದ ರಕ್ತವೂ ಸೃಷ್ಟಿಯಾಗಿ  ಬೇಕಾದವರಿಗೆ ಅಂಗಡಿಯಲ್ಲಿ ಸಿಗುವಂತಾದರೆ ಅದಕ್ಕಿಂತಲೂ ಇನ್ನೇನು ಬೇಕು. ರೋಗಿಯ ಪುಣ್ಯ ರಕ್ತಕ್ಕಾಗಿ ಅಲೆಯುವ ಸಮಸ್ಯೆಯೇ ಇರಲಾರದು. ಇಂತಹ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ‘ವಿಟ್‌ವೈಸ್’ ಎಂಬ ವಿಜ್ಞಾನಿ ಜೈವ ತಂತ್ರಜ್ಞಾನ ಸಾಧನೆಯಿಂದ ರಕ್ತದ ಸೃಷ್ಟಿಯನ್ನು ಕಂಡು ಹಿಡಿದರು. ಕೆಂಬ್ರಿಡ್ಜ್ ಮಸಾಚುಸೆಟ್ಟ್‌ನಲ್ಲಿರುವ  ಆಂಟೋಜೆನಿ ಎಂಬ ಜೈವ ತಾಂತ್ರಿಕ ಸಂಸ್ಥೆಯಲ್ಲಿ ಸಂಶೋಧಕ ವ್ಶೆದ್ಯರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಪಥಮವಾಗಿ ಆದಿಕೋಶಗಳನ್ನು ಗುರುತಿಸಿ, ಪ್ರತ್ಯೇಕಿಸಿ ಪ್ರಯೋಗಾಲಯದ ಪ್ಲಾಸ್ಟಿಕ್ ತಟ್ಟೆಯೊಂದರಲ್ಲಿ ಅವನ್ನು ಬಿತ್ತಿದರು. ಅವಕ್ಕೆ ಪೋಶಾಕಾಂಶಗಳನ್ನು ಒದಗಿಸಿದರು. ಸೂಕ್ತಜನಕಾಣುಗಳನ್ನು ಪೂರೈಸಿದರು. ಕೆಲವೇ ದಿನಗಳಲ್ಲಿ ನಿಬ್ಬೆರಗಿನ ಫಲಿತಾಂಶವನ್ನು ನೋಡಿ ಕುಣಿದಾಡಿದರು. ಆದಿಕೋಶವು ಕೆಂಗಣಗಳನ್ನು ಉತ್ಪಾದಿಸಲಾಂಭಿಸಿತು. ರಕ್ತವು ಸ್ಪಷ್ಟಿಯಾಯಿತು. ಈ. ಸೂತ್ರವನ್ನು ಅನುಸರಿಸಿ ಸಂಶೋಧಕರು ರಕ್ತವನ್ನು ಸೃಷ್ಟಿಸಿ ಅಶಕ್ತ ರೋಗಿಗಳಿಗೆ ಈ ರಕ್ತವನ್ನು ಪೂರೈಸುತ್ತಾರೆ ಎಂಬ ದಿನಗಳು ಬರುತ್ತವೆ !

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...