Home / ಲೇಖನ / ವಿಜ್ಞಾನ / ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ ‘ಡಾರ್ಕ್‌ಸ್ಟಾರ್’ ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ  ಸಾಧ್ಯತೆಗಳಿವೆ. ಮತ್ತಿನ್ನಿಷ್ಟು ವರ್ಷಗಳು ಕಳೆದರೆ ರೋಬಟ್ ಹೆಲಿಕ್ಯಾಪ್ಪರ್‌ಗಳು ಸೈನಿಕರನ್ನು ಯುದ್ಧಕ್ಕೆ ಬಿಡಬಹುದು. ಮನುಷ್ಯರ ಮನಸ್ತತ್ವವನ್ನು ಆಧರಿಸಿ ಈ ಚಾಲಕ ರಹಿತ ವಿಮಾನಗಳು ತಯಾರಾಗಲಿವೆ. 21ನೇ ಶತಮಾನದಲ್ಲಿ ಇಂತಹ ವಿಮಾನಗಳು ಚಾಲಕ ರಹಿತ ವಿಮಾನಗಳೂ ಸಹ ಹಳೆಯದಾಗ ಬಹುದು. ಒಬ್ಬ ಪೈಲೆಟ್, ಮತ್ತು 7 ಜನ  ಪ್ರಯಾಣಿಕರೊಂದಿಗೆ ಗಂಟೆಗೆ 220 ಕಿ.ಮೀ. ವೇಗದಲ್ಲಿ ಚಲಿಸುವ ಮಿನಿವ್ಯಾನ್‌ನಂತಹ ವಿಮಾನಗಳು ಪ್ರಪಂಚದ ಎಲ್ಲೆಡೆ ಸಂಚರಿಸುತ್ತವೆ. 21ನೇ ಶತಮಾನದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಂಶೋಧನೆಗಳನ್ನು ಮಾಡುವ ಖಾಸಗಿ ಸಂಸ್ಥೆಗಳನ್ನು ಗುರುತಿಸಲು ನಾಸಾ ಸಂಸ್ಥೆಯು ಕೈಕೊಂಡ ಯೋಜನೆಯಾದ Advanced General Eviation Transport Experiment (ಆಗೇಟ್) ಎನ್ನುವ ಪದವನ್ನು ತಮ್ಮ ಸಂಸ್ಥೆಯ ನಿಕ್‌ನೇಮ್ ಆಗಿ ಮಾಡಿಕೊಳ್ಳಲು ಸಂಸ್ಥೆಗಳು ಆತುರದಿಂದ ಕಾಯುತ್ತವೆ. ಕಾಕ್‌ಪಿಟ್ ಪ್ರವೇಶದ್ವಾರದ ಮೇಲೆ ಹೈವೆ ಇನ್ ದಿ ಸ್ಕೈ (Highway in the sky) ಎನ್ನುವ ಬೋರ್ಡು, ಸುತ್ತಲಿನ ದೃಶ್ಯಗಳು ಕಾಣುವಂತೆ ತಲೆಯ ಮೇಲ್ಭಾಗದಲ್ಲಿ ಸುತ್ತಲೂ ಗಾಜಿನ ಆವರಣ, ವಿಮಾನವನ್ನು ಸರಿಯಾಗಿ ನಡೆಸಲು ಡಿಜಿಟಲ್ ವೇಟ್‌ಲಿಂಕ್ಸ್ (Digital Weight Links) ಸಹಕರಿಸುವಿಕೆ, ವಿಮಾನ ಸರಿಯಾದ ಎತ್ತರ ಮತ್ತು ದಿಕ್ಕಿನಲ್ಲಿ ಚಲಿಸಲು ಸೂಕ್ಷ್ಮವಾದ ಕಂಟ್ರೋಲ್ ಪ್ಯಾನಲ್(Control Panel)ಗಳು, ಭವಿಷ್ಯದ ಆಗೆಟ್  Projectಗಳೊಂದಿಗೆ ಹಗುರವಾದ ದೃಢವಾದ ಸಾಮರ್ಧ್ಯವನ್ನು ಹೊಂದಿರುವ ಇಂತಹ ಮಾದರಿಯ ಚಾಲಕನಿಲ್ಲದ ವಿಮಾನಗಳು ತಯಾರಾಗುವ ನಿರೀಕ್ಷೆ ಇದೆ, ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...