Home / ಲೇಖನ / ವಿಜ್ಞಾನ / ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಜಗತ್ತನ್ನೇ ಅಂಗೈಯೊಳಗೆ ನೋಡುವ ಕಾಲ ಸನ್ನಿಹಿತವಾಗುತ್ತದೆ. ಈಗಾಗಲೇ ಕಂಪ್ಯೂಟರ್ ಮೂಲಕ ಕುಳಿತಲ್ಲೇ ಜಗತ್ತಿನ ದರ್ಶನವಾಗುತ್ತಲಿದೆ. ಆದರೆ ಚಲಿಸುತ್ತಲೇ ಜಗತ್ತನ್ನು ನೋಡುವ ವಿಜ್ಞಾನ ಇದುವರೆಗೂ ಬೆಳೆದಿರಲಿಲ್ಲ ಆದರೆ ಇತ್ತೀಚಿನ ಶೋಧಗಳಿಂದಾಗಿ ಚಲಿಸುವ ಕಾರಿನೊಳಗೆ ಪವಡಿಸಿಕೊಂಡೇ ಜಗತ್ತಿನ ಮೇಲೆ ಮೂಲೆಗಳನ್ನು ಕೂಡ ಶ್ರವಣ, ದೃಶ್ಯಮಾಧ್ಯಮಗಳಿಂದ ಸಂವಹನ ನಡೆಸಬಹುದಾದ ಕಾರೊಂದು ಇನ್ನೂ ಕೆಲವು ವರ್ಷಗಳಲ್ಲಿ
ಮಾರುಕಟ್ಟೆಗೆ ಬರಲಿದೆ.

ಈ ಕಾರಿನಲ್ಲಿ ಶ್ರವಣ, ದೃಶ್ಯ, ಕಂಪ್ಯೂಟರ್. ಫೋನ್, ಉಪಗ್ರಹ, ಆಂಟೆನಾ ಇತ್ಯಾದಿ ಉಪಕರಣಗಳಿರುತ್ತವೆ. ಇವೆಲ್ಲ ಅಂತರ್ಜಾಲ ವ್ಯವಸ್ಥೆಯಲ್ಲಿ ಪರಸ್ಪರ ಇವುಗಳನ್ನು ಜೋಡಿಸಲಾಗಿದೆ. “ಡೆಲ್‌ಕೋ ಎಲೆಕ್ಟ್ರಾನಿಕ್ಸ್ ಐ.ಬಿ.ಎಂ. ನೆಟ್‌ಸ್ಕೋಪ್ ಮತ್ತು ಸನ್‌ಕಂಪನಿ”ಗಳ ಕೂಟವು ಈ ಹೊಸ ಯೋಜನೆಯ ಕಾರಿಗೆ ರೂಪು ನೀಡಲು ನಿರ್ಧರಿಸಿದೆ. ಒಟ್ಟಾರೆಯಾಗಿ ಈ ಕಾರಿಗೆ ನೆಟ್‌ವರ್ಕ್‌ ವೆಹಿಕಲ್ ಎಂದು ಕರೆಯಲಾಗುತ್ತದೆ. ಈ ಕಾರಿನೊಳಗಿನಿಂದ ವಿಶಿಷ್ಟವಾವ ಮಾತು ಗುರುತಿಸುವ, ಅದರೊಂದಿಗೆ ಸಂಭಾಷಣೆ ಮಾಡುವ ವ್ಯವಸ್ಥೆ ಇದೆ. ಕಾರಿನ ಛಾವಣಿ ಮೇಲೆ ಉಪಗ್ರಹ ಆಂಟೆನಾ ಮತ್ತು ಆಸನಗಳಲ್ಲಿ ಸೇರಿಸಲಾದ ಮಂಚಗಳು, ಇವುಗಳಿಂದ “ಇಂಟರ್‌ನೆಟ್’ ಸಂಪರ್ಕವನ್ನು ಹೊಂದಬಹುದಲ್ಲದೇ ಸೆಲ್ಯೂಲಾರ್ ಫೋನ್ ಮತ್ತು ಹೆಡ್‌ಫೋನ್, ವ್ಯವಸ್ಥೆಗಳಿರುವುದರಿಂದ ಕಾರು ಓಡಿಸುತ್ತಲೇ ಯಾವುದು ಬೇಕಾದುದರೊಂದಿಗೆ ಸಂಪರ್ಕವನ್ನು ಹೊಂದಬಹುದಾಗಿದೆ. ಇದಲ್ಲದೇ ಕಾರಿನಲ್ಲಿ ‘ವೆಬ್‌ಜಾಲ’ ಮತ್ತು ‘ಜಿಯಸ್‌’ಗಳೂ ಕೂಡ ಇರುವುದರಿಂದ ಇವು ಹೊಸ ನಿಯಂತ್ರಣ, ದಾರಿಯ ಸೂಚನೆ ಮತ್ತು ತುರ್ತುಪರಿಸ್ಥಿತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದು. ಒಂದು ವೇಳೆ ಈ ಕಾರು ಕಳವು ಆಯಿತೆಂದರೆ ಇಂಟರ್‌ನೆಟ್ ಸಂಪರ್ಕದ ಮೂಲಕ ದೂರು ನಿಯಂತ್ರಿತವಾಗಿ ಕಾರು ಎಲ್ಲಿ ಇರುತ್ತದೆಯೋ ಅಲ್ಲಿಯೇ ನಿಲ್ಲಿಸಿಬಿಡಬಹುದು. ಅದರ ಯಂತ್ರಗಳನ್ನು ಸ್ಥಬ್ಧಗೊಳಿಸಬಹುದು. ದೀಪಗಳನ್ನು ಆರಿಸಬಹುದು.

ಬಹುಕೃತ ಉಪಯೋಗಗಳು : ಈ ಕಾರು ಎಲ್ಲಿಯಾದರೂ ಹೋಗುವಾಗ ತೊಂದರೆಗೊಳಪಟ್ಟರೆ ಒಂದು ಶಬ್ಧದ ಮೂಲಕ ಸಂದೇಶ ನೀಡಿ ಎಚ್ಚರಿಸುತ್ತದೆ. ಆಗ ಹತ್ತಿರದ ಸೇವಾಕೇಂವ್ರವನ್ನು ಸಹಾಯಕ್ಕಾಗಿ ಕೇಳಬಹುದು. ಆ ಕೇಂದ್ರವು ಪ್ರತಿಯಾಗಿ ದೂರಸಂಪರ್ಕ ವ್ಯವಸ್ಥೆಯಿಂದ ಕಾರಿನ ತೊಂದರೆಯನ್ನು ಪತ್ತೆಮಾಡಿ ಅದಕ್ಕೆ ಸೂಚಿಸುತ್ತದೆ.  ಎಲ್ಲಿಯಾದರೂ ಕಾರು ನಿಂತು ಹೋದರೆ ಪೆಟ್ರೋಲ್ ನಿಲ್ದಾಣ ಅಥವಾ ಹೊಟೆಲ್‌ಗೆ ನಿರ್ದೇಶನ ನೀಡುತ್ತದೆ. ಈಮೇಲ್ ಸಂದೇಶಗಳು ಕರೆಗಳು ಮುಖದ ಮುಂದಿನ ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಆಗ ಬಾಯಿ ಮಾತಿನಿಂದ ಸಂದೇಶಕೊಟ್ಟರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬಾಯಿಮಾತಿನಿಂದಲೇ ಫೋನ್‌ಡೈಯಲ್ ಮಾಡಬಹುದು. ಬೇಕಾದ ರೇಡಿಯೋ ನಿಲಯಗಳನ್ನು ಪಡೆಯಬಹುದು. ಸಂಚಾರದ ಸ್ಥಿತಿಗತಿಗಳನ್ನು, ಸ್ಟಾಕ್ ಮತ್ತು ಷೇರು ಮಾರುಕಟ್ಟೆಯ ದರಗಳನ್ನು ತಿಳಿಯಬಹುದು. ಇಂಟರ್‌ನೆಟ್ ಮೂಲಕ ಜಗತ್ತಿನ ಸುದ್ದಿಸಾರಾಂಶವನ್ನು ಅರಿಯಬಹುದು. ಪ್ರಯಾಣದ ದಾರಿ ಮತ್ತು ಸಮಯಗಳ ಯೋಜನೆಯನ್ನು ಮಾಡಲು ‘ವರ್ಕ್ ಪ್ಯಾಡ್’ ಎಂಬ  ‘ಗಣಕೀಕೃತ’ ವ್ಯವಸ್ಥೆಯೂ ಇದರಲ್ಲಿ ಇರುವುದರಿಂದ ಪ್ರಯಾಣ ಮಾಡುವವರಿಗೆ ಬೇಸರವಾಗಲಾರದು. ಏಕೆಂದರೆ ನೇರವಾಗಿ ಉಪಗೃಹದ ಮೂಲಕ ಆಪ್ತವಾದ ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಮನರಂಜನೆ. ದಾರಿಸೂಚನೆ, ಕಛೇರಿ ವೆಬ್‌ಜಾಲ ಮತ್ತು ಮಾಹಿತಿಗಳನ್ನು ಪರದೆಯಮೇಲೆ ಸ್ಪರ್ಷಿಸುತ್ತ ಅನುಭವ ಪಡೆಯಬಹುದು. ಸೆಲ್ಯೂಲಾರ್ ಫೋನ್, ಸಿಡಿಪ್ಲೆಯರ್ಸ್, ಇಂಟರ್‌ನೆಟ್. ರೇಡಿಯೋ, ಹವಾಮಾನ ನಿಯಂತ್ರಣ ಎಲ್ಲವನ್ನು ಸ್ಪರ್ಷಿಸುವುದರ ಮೂಲಕ ಮಾಹಿತಿ ದೊರೆಯುತ್ತದೆ.

ಇಂತಹ ಕಾರುಗಳ ಜತೆಗೆ ‘ಕ್ಲಾರಿಯಾನ್’ ಮತ್ತು’ಇಂಟೆಲ್’ ಅವರು ತಯಾರಿಸುವ ಕಂಪ್ಯೂಟರ್ ವ್ಯವಸ್ಥೆಯ ಕಾರುಗಳೂ ಸಹ ಇಂಥದ್ದೆ ಸೇವೆಯನ್ನು ಕೊಡಲಿದೆ. ಮನೆಯಲ್ಲಿಯೇ ಜಗತ್ತು ಕಂಡಂತೆ ಚಲಿಸುವ ಕಾರಿನಲ್ಲಿಯೂ ಜಗತ್ತನ್ನು ಆರಿಸಬಹುದು. ಅಪಘಾತಗಳಂತೂ ಇಂತಹ ಕಾರುಗಳಲ್ಲಿ ಇಲ್ಲವೇ ಇಲ್ಲವೆನ್ನಬಹುದು. ಇನ್ನೇನು ಬೇಕು ಸುಖ ಸಂಸಾರಕ್ಕೆ ?! ಮುಂದುವರಿದ ಜಗತ್ತಿನ ಹೊಸ ಅವಿಷ್ಕಾರಗಳ ಪರಿಣಾಮವಾಗಿ ಹೊಸ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ದಿನನಿತ್ಯ ನಮ್ಮ ಸಂಶೋಧಕರು ನೂತನ ಅವಿಷ್ಕಾರಗಳನ್ನು ಕಂಡುಹಿಡಿಯುತ್ತಲೇ ಇರುತ್ತಾರೆ.
೦೦೦

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...