Home / ಕವನ / ಕವಿತೆ / ಶವ ಕ್ಷೇತ್ರಗಳು

ಶವ ಕ್ಷೇತ್ರಗಳು

ಜನರ ಲೌಕಿಕಾಶಯಗಳ ತುಳಿದ
ಕಲ್ಲು ಕಲ್ಲುಗಳ ತಳಪಾಯ
ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು
ಶೋಷಣೆಯ ವೈಭವೀಕರಣದ ನವರಂಗಗಳು
ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ
ಮತಾಧಿಕ್ಯತೆಯ ಬೆರಗಿನ ಗೋಪುರ
ಅಜ್ಞಾನಕ್ಕಿಟ್ಟ ಕಳಸುಗಳು
ಮೆರೆದಿವೆ ಭವ್ಯ ಭಾರತದ ಭೂತದ ಹಿರಿಮೆಗಳು
ಕೆಲವರ ಕೀರ್ತಿಯ ಮೆರೆಸಲು
ಅಸಮಾನತೆಯ ಪರಂಪರೆಯ ಆಚಂದ್ರಾರ್ಕವುಳಿಸಲು
ಕೊಳ್ಳೆ ಲೂಟಿಗಳಿಂದ ಜನರ ಸುಲಿಗೆಯಿಂದ
ದುಡಿವವರ ಬೆವರು ರಕ್ತಗಳಿಂದ
ಕಟ್ಟಿಸಿದ ಸುಂದರ ಸುಲಿಗೆಯ ಮಂದಿರಗಳು
ಬದುಕಿಗೆಂದೂ ಬೆಂಬಲವಾಗದ ಕಲ್ಲು ಚಪ್ಪಡಿ ಹಂದರಗಳು
ಇಲ್ಲಿ ಸಿಗಲು ಸಾಧ್ಯವೇ ಇಲ್ಲದ ಇಷ್ಟಾರ್ಥಗಳನ್ನು
ಅಲ್ಲಿ ಕಂಡುಕೊಂಡು ಮೋಕ್ಷ ಪಡೆಯಲು
ಸೊನ್ನೆಯೊಳಗೇ ಸುತ್ತುತ್ತಾ
ಸುತ್ತಿ ಬಂದು ಅಡ್ಡ ಬೀಳಲು
ಇಹದಿಂದ ಪಲಾಯನವನೇ ಜೀವನ ಸಿದ್ದಿಯೆಂದು ತಿಳಿದು
ಮತ್ಯ೯ವ ಜರೆದು ಕುಗ್ಗಿ ಕುಸಿದು
ನೆಲ ಹತ್ತಲು
ನೆಲ ಹತ್ತುವುದೇ ಪರಮಾನಂದವಾಗಲು
ಇಷ್ಟಿಷ್ಟೇ ಇಡೀ ದೇಶದ
ಸಾಮೂಹಿಕ ಹತ್ಯೆ ಸಾಗಿ ಬಂದಿದೆ ನೂರಾರರು ವರ್ಷ
ಆಳುವ ವರ್ಗದ ಕೃಪಾ ಛತ್ರದಡಿಯಲ್ಲಿ
ಕೊಳಕು ಮಂಡಲಗಳಂಥ ಈ ಕ್ಷೇತ್ರಗಳಲ್ಲಿ
ಭಕ್ತಿಯ ಹೆಸರಿನ ಭಯ ಮೌಢ್ಯದ ಬಂಡವಾಳದ ಮೇಲೆ
ನಡೆದು ಬಂದಿದೆ ಭರ್ಜರಿ ಲಾಭೋದ್ಯಮ
ಅಲ್ಲೇ ದೇವರಿದ್ದಾನೆ, ಅಲ್ಲೇ ಪುಣ್ಯ ದೊರೆಯುವುದು
ಎಂದು ನಂಬಿ ಬೋರಲು ಬಿದ್ದ ಮೂರ್ಖರ ಸಂತೆಗಳು
ಜನ ಮರುಳಿನ ಜಾತ್ರೆಗಳು
ಇವು ಶತಮಾನಗಳಿಂದಲೂ ದೇಶದ ದೇಹದ ಮೇಲೆ
ಗಟ್ಟಿಯಾಗಿ ನೆಲೆಯೂರಿರುವ ಕೀವು ಹುಣ್ಣುಗಳು
ಇವುಗಳೂಳಗೆ ಹರಿದಾಡುತಿವೆ ಕ್ಷುದ್ರ ಹುಳುಗಳು
ಮಂತಾಂಧತೆಯು ದದ್ದುಗಟ್ಟಿದ ಗಟ್ಟಿ ಗಣ್ಣುಗಳು

ಭಿಕ್ಷುಕರನ್ನು ಸಾಲು ಸಾಲು ಬೆಳೆಸುವ
ಪಿಳ್ಳೆ ಜುಟ್ಟುಗಳ ಬೊಜ್ಜುಗಳನ್ನುಬ್ಬಿಸುವ
ಸಾಂಕ್ರಮಿಕ ರೋಗಗಳ ಪುಕ್ಕಟ್ಟೆ ಮಾರುವ
ಜನರ ಜೇಬು ತಲೆಗಳ ನುಣ್ಣಗೆ ಬೋಳಿಸುವ
ಮಣ್ಣ ಮಕ್ಕಳ ದೂರವಿಟ್ಟು ಕಣ್ಣು ಕೆಕ್ಕರಿಸಿ
ಅಧರ್ಮಿಗಳೆಂದು ನೋಡುವ
ಇವು
ಪುಣ್ಯ ಕ್ಷೇತ್ರಗಳಲ್ಲ ಪಣ್ಯ ಕ್ಷೇತ್ರಗಳು
ಶಿವ ಕ್ಷೇತ್ರಗಳಲ್ಲ ಶವ ಕ್ಷೇತ್ರಗಳು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...