Home / ಕವನ / ಕವಿತೆ / ಶವ ಕ್ಷೇತ್ರಗಳು

ಶವ ಕ್ಷೇತ್ರಗಳು

ಜನರ ಲೌಕಿಕಾಶಯಗಳ ತುಳಿದ
ಕಲ್ಲು ಕಲ್ಲುಗಳ ತಳಪಾಯ
ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು
ಶೋಷಣೆಯ ವೈಭವೀಕರಣದ ನವರಂಗಗಳು
ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ
ಮತಾಧಿಕ್ಯತೆಯ ಬೆರಗಿನ ಗೋಪುರ
ಅಜ್ಞಾನಕ್ಕಿಟ್ಟ ಕಳಸುಗಳು
ಮೆರೆದಿವೆ ಭವ್ಯ ಭಾರತದ ಭೂತದ ಹಿರಿಮೆಗಳು
ಕೆಲವರ ಕೀರ್ತಿಯ ಮೆರೆಸಲು
ಅಸಮಾನತೆಯ ಪರಂಪರೆಯ ಆಚಂದ್ರಾರ್ಕವುಳಿಸಲು
ಕೊಳ್ಳೆ ಲೂಟಿಗಳಿಂದ ಜನರ ಸುಲಿಗೆಯಿಂದ
ದುಡಿವವರ ಬೆವರು ರಕ್ತಗಳಿಂದ
ಕಟ್ಟಿಸಿದ ಸುಂದರ ಸುಲಿಗೆಯ ಮಂದಿರಗಳು
ಬದುಕಿಗೆಂದೂ ಬೆಂಬಲವಾಗದ ಕಲ್ಲು ಚಪ್ಪಡಿ ಹಂದರಗಳು
ಇಲ್ಲಿ ಸಿಗಲು ಸಾಧ್ಯವೇ ಇಲ್ಲದ ಇಷ್ಟಾರ್ಥಗಳನ್ನು
ಅಲ್ಲಿ ಕಂಡುಕೊಂಡು ಮೋಕ್ಷ ಪಡೆಯಲು
ಸೊನ್ನೆಯೊಳಗೇ ಸುತ್ತುತ್ತಾ
ಸುತ್ತಿ ಬಂದು ಅಡ್ಡ ಬೀಳಲು
ಇಹದಿಂದ ಪಲಾಯನವನೇ ಜೀವನ ಸಿದ್ದಿಯೆಂದು ತಿಳಿದು
ಮತ್ಯ೯ವ ಜರೆದು ಕುಗ್ಗಿ ಕುಸಿದು
ನೆಲ ಹತ್ತಲು
ನೆಲ ಹತ್ತುವುದೇ ಪರಮಾನಂದವಾಗಲು
ಇಷ್ಟಿಷ್ಟೇ ಇಡೀ ದೇಶದ
ಸಾಮೂಹಿಕ ಹತ್ಯೆ ಸಾಗಿ ಬಂದಿದೆ ನೂರಾರರು ವರ್ಷ
ಆಳುವ ವರ್ಗದ ಕೃಪಾ ಛತ್ರದಡಿಯಲ್ಲಿ
ಕೊಳಕು ಮಂಡಲಗಳಂಥ ಈ ಕ್ಷೇತ್ರಗಳಲ್ಲಿ
ಭಕ್ತಿಯ ಹೆಸರಿನ ಭಯ ಮೌಢ್ಯದ ಬಂಡವಾಳದ ಮೇಲೆ
ನಡೆದು ಬಂದಿದೆ ಭರ್ಜರಿ ಲಾಭೋದ್ಯಮ
ಅಲ್ಲೇ ದೇವರಿದ್ದಾನೆ, ಅಲ್ಲೇ ಪುಣ್ಯ ದೊರೆಯುವುದು
ಎಂದು ನಂಬಿ ಬೋರಲು ಬಿದ್ದ ಮೂರ್ಖರ ಸಂತೆಗಳು
ಜನ ಮರುಳಿನ ಜಾತ್ರೆಗಳು
ಇವು ಶತಮಾನಗಳಿಂದಲೂ ದೇಶದ ದೇಹದ ಮೇಲೆ
ಗಟ್ಟಿಯಾಗಿ ನೆಲೆಯೂರಿರುವ ಕೀವು ಹುಣ್ಣುಗಳು
ಇವುಗಳೂಳಗೆ ಹರಿದಾಡುತಿವೆ ಕ್ಷುದ್ರ ಹುಳುಗಳು
ಮಂತಾಂಧತೆಯು ದದ್ದುಗಟ್ಟಿದ ಗಟ್ಟಿ ಗಣ್ಣುಗಳು

ಭಿಕ್ಷುಕರನ್ನು ಸಾಲು ಸಾಲು ಬೆಳೆಸುವ
ಪಿಳ್ಳೆ ಜುಟ್ಟುಗಳ ಬೊಜ್ಜುಗಳನ್ನುಬ್ಬಿಸುವ
ಸಾಂಕ್ರಮಿಕ ರೋಗಗಳ ಪುಕ್ಕಟ್ಟೆ ಮಾರುವ
ಜನರ ಜೇಬು ತಲೆಗಳ ನುಣ್ಣಗೆ ಬೋಳಿಸುವ
ಮಣ್ಣ ಮಕ್ಕಳ ದೂರವಿಟ್ಟು ಕಣ್ಣು ಕೆಕ್ಕರಿಸಿ
ಅಧರ್ಮಿಗಳೆಂದು ನೋಡುವ
ಇವು
ಪುಣ್ಯ ಕ್ಷೇತ್ರಗಳಲ್ಲ ಪಣ್ಯ ಕ್ಷೇತ್ರಗಳು
ಶಿವ ಕ್ಷೇತ್ರಗಳಲ್ಲ ಶವ ಕ್ಷೇತ್ರಗಳು
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...