Home / ಲೇಖನ / ವಿಜ್ಞಾನ / ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರೂಪಾಂತರಗಳಾಗಿ, ತಂತ್ರಗಳಾಗಿ ಹೊರಹೊಮ್ಮಿವೆ. ಅದರಲ್ಲೂ ೧೯೪೮ರಲ್ಲಿ “ಪೊಲರೈಯ್ಡ್ ಕ್ಯಾಮರಾ” ಎಂದು ಕರೆಯಲಾಗುವ ತಕ್ಷಣ ಚಿತ್ರ ಬಿಂಬವನ್ನು ತಯಾರಿಸಿಕೊಡುವ ಅದ್ಭುತ ಕ್ಯಾಮರ ಇದಾಗಿದೆ. ಇದು ವಿಜ್ಞಾನ ಜಗತ್ತಿಗೆ ನೂತನ ಕೊಡುಗೆಯಾಗಿದೆ. ಇದನ್ನು ಸಂಯುಕ್ತಸಂಸ್ಥಾನದ ‘ಎಡ್ವಿನ್ ಹರ್ಬರ್ಟ್’ ಎಂಬ ವಿಜ್ಞಾನಿ
ಕಂಡುಹಿಡಿದ. ಅಲ್ಲಿಯವರೆಗೆ “ಕಪ್ಪು-ಬಿಳುಪು ಕ್ಯಾಮರಾಗಳು ಸಾಕಷ್ಟು ಸಮಯದ ನಂತರ ಫಲಿತಾಂಶ ನೀಡುತ್ತಿದ್ದವು. ಆದರೆ ತತ್‌ಕ್ಷಣದಲ್ಲಿ ಅದು ಬಣ್ಣದಲ್ಲಿ ಫೋಟೋಗಳನ್ನು ನೀಡಬಲ್ಲ ಈ ಕ್ಯಾಮರಾ ದುಬಾರಿಯಾಗಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ.

ಮುಂದುವರೆದಂತೆ ೧೯೭೨ರಲ್ಲಿ ಎಡ್ವಿನ್. ಹೆಚ್. ಲ್ಯಾಂಡ್ ಎಸ್.ಎಕ್ಷ್-೭೦ ಎಂದು ಕರೆಯಲ್ಪಡುವ ತನ್ನ ಕ್ಯಾಮರದ ಸುಧಾರಿತ ‘ಜೇಬು ಮಾದರಿ’ಯನ್ನು ಸೊಸೈಟಿ ಆಫ್
ಪೋಟೋಗ್ರಾಫಿಕ್ ಸೈಂಟಿಸ್ಟ್ ಅಂಡ್ ಇಂಜಿನಿಯರ್ಸ್‌ಗೆ ಪರಿಚಯಿಸಿದ. ಇದರಲ್ಲಿ ಛಾಯಾ ಚಿತ್ರಣ ಕ್ರಿಯೆಯು ಸೂಕ್ಷ್ಮ ಎಲೆಕ್ಟ್ರಾನಿಕ್ ಪರಿಧಿಗಳಿಂದ ತಮ್ಮಷ್ಟಕ್ಕೆ ತಾವೇ ನಿಯಂತ್ರಿಸಲ್ಪಡುತ್ತವೆ. ೧೯೪೮ರಲ್ಲಿ ಎಡ್ವಿನ್ ಲ್ಯಾಂಡನು “ಪೊಲಾರ್ ವಿಷನ್” ಎಂದು ಕರೆಯಲ್ಪಡುವ ಒಂದು ತಕ್ಷಣ ಗೃಹಚಲನ ಚಿತ್ರ ವ್ಯವಸ್ಥೆಯನ್ನು ಕಂಡುಹಿಡಿದು ಪರಿಚಯಿಸಿದ. ಇಂತಹ ಕ್ಯಾಮರಗಳು ಅದ್ಭುತವಾಗಿದ್ದು ಪ್ರಪಂಚದಾದ್ಯಂತ ಹವ್ಯಾಸಿ ಛಾಯಾ ಚಿತ್ರಗಾರರಿಂದ ಬಳಕೆಯಾಗಲ್ಪಡುತ್ತವೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...