Home / ಲೇಖನ / ವಿಜ್ಞಾನ / ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರೂಪಾಂತರಗಳಾಗಿ, ತಂತ್ರಗಳಾಗಿ ಹೊರಹೊಮ್ಮಿವೆ. ಅದರಲ್ಲೂ ೧೯೪೮ರಲ್ಲಿ “ಪೊಲರೈಯ್ಡ್ ಕ್ಯಾಮರಾ” ಎಂದು ಕರೆಯಲಾಗುವ ತಕ್ಷಣ ಚಿತ್ರ ಬಿಂಬವನ್ನು ತಯಾರಿಸಿಕೊಡುವ ಅದ್ಭುತ ಕ್ಯಾಮರ ಇದಾಗಿದೆ. ಇದು ವಿಜ್ಞಾನ ಜಗತ್ತಿಗೆ ನೂತನ ಕೊಡುಗೆಯಾಗಿದೆ. ಇದನ್ನು ಸಂಯುಕ್ತಸಂಸ್ಥಾನದ ‘ಎಡ್ವಿನ್ ಹರ್ಬರ್ಟ್’ ಎಂಬ ವಿಜ್ಞಾನಿ
ಕಂಡುಹಿಡಿದ. ಅಲ್ಲಿಯವರೆಗೆ “ಕಪ್ಪು-ಬಿಳುಪು ಕ್ಯಾಮರಾಗಳು ಸಾಕಷ್ಟು ಸಮಯದ ನಂತರ ಫಲಿತಾಂಶ ನೀಡುತ್ತಿದ್ದವು. ಆದರೆ ತತ್‌ಕ್ಷಣದಲ್ಲಿ ಅದು ಬಣ್ಣದಲ್ಲಿ ಫೋಟೋಗಳನ್ನು ನೀಡಬಲ್ಲ ಈ ಕ್ಯಾಮರಾ ದುಬಾರಿಯಾಗಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ.

ಮುಂದುವರೆದಂತೆ ೧೯೭೨ರಲ್ಲಿ ಎಡ್ವಿನ್. ಹೆಚ್. ಲ್ಯಾಂಡ್ ಎಸ್.ಎಕ್ಷ್-೭೦ ಎಂದು ಕರೆಯಲ್ಪಡುವ ತನ್ನ ಕ್ಯಾಮರದ ಸುಧಾರಿತ ‘ಜೇಬು ಮಾದರಿ’ಯನ್ನು ಸೊಸೈಟಿ ಆಫ್
ಪೋಟೋಗ್ರಾಫಿಕ್ ಸೈಂಟಿಸ್ಟ್ ಅಂಡ್ ಇಂಜಿನಿಯರ್ಸ್‌ಗೆ ಪರಿಚಯಿಸಿದ. ಇದರಲ್ಲಿ ಛಾಯಾ ಚಿತ್ರಣ ಕ್ರಿಯೆಯು ಸೂಕ್ಷ್ಮ ಎಲೆಕ್ಟ್ರಾನಿಕ್ ಪರಿಧಿಗಳಿಂದ ತಮ್ಮಷ್ಟಕ್ಕೆ ತಾವೇ ನಿಯಂತ್ರಿಸಲ್ಪಡುತ್ತವೆ. ೧೯೪೮ರಲ್ಲಿ ಎಡ್ವಿನ್ ಲ್ಯಾಂಡನು “ಪೊಲಾರ್ ವಿಷನ್” ಎಂದು ಕರೆಯಲ್ಪಡುವ ಒಂದು ತಕ್ಷಣ ಗೃಹಚಲನ ಚಿತ್ರ ವ್ಯವಸ್ಥೆಯನ್ನು ಕಂಡುಹಿಡಿದು ಪರಿಚಯಿಸಿದ. ಇಂತಹ ಕ್ಯಾಮರಗಳು ಅದ್ಭುತವಾಗಿದ್ದು ಪ್ರಪಂಚದಾದ್ಯಂತ ಹವ್ಯಾಸಿ ಛಾಯಾ ಚಿತ್ರಗಾರರಿಂದ ಬಳಕೆಯಾಗಲ್ಪಡುತ್ತವೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...