Home / ಕಥೆ / ಕಿರು ಕಥೆ / ನದಿಯ ನೆನಪು

ನದಿಯ ನೆನಪು

ನದಿಯು ತನ್ನ ಉಗಮದ ನೆನಪೇ ಇಲ್ಲದೆ ಅನಂತವಾಗಿ ಹರಿಯುತ್ತಿತ್ತು. ತನ್ನಿಂದ ತುಂಬಿ ತುಳುಕುತ್ತಿದ್ದ ಬೆಳ್ಳಿ, ಹಿತ್ತಾಳೆ, ತಾಮ್ರ ಹಾಗೂ ಮಣ್ಣಿನ ಬಿಂದಿಗೆಗಳ ನೆನಪು ತನಗೆ ಒಂದಿಷ್ಟು ಇಲ್ಲ. ಅಷ್ಟೇಕೆ? ಬಾಯಾರಿ ದಾಹತೀರಿಸಲು ಬೊಗಸೆ ಕೈಯನ್ನು ತನ್ನ ಹರಿಯುವ ಒಡಲಿಗೆ ಸೇರಿಸಿ ನೀರು ಕುಡಿದ ಬೊಗಸೆಯ ನೆನಪು ತನಗಿಲ್ಲ. ತನ್ನ ದಾರಿಯುದ್ದಕ್ಕೆ ಸಂಧಿಸಿದ ಗಿಡಮರ, ವೃಕ್ಷಗಳು, ಪಕ್ಷಿ ಪ್ರಾಣಿಗಳು ಎಲ್ಲವೂ ತನ್ನ ಹರಿವ ಜಲದಲ್ಲಿ ಒಂದು ನೆನಪೂ ಬಿಟ್ಟಿಲ್ಲ. ಹರಿದು ಹೋಗುವಾಗ ಅದೊಂದು ಶುಭ್ರತೆಯ ವೇಗ, ಮುಂದೆ ಸಾಗರದ ಮಿಲನ. ಧ್ಯೇಯದ ಧ್ಯಾನದಲ್ಲಿ ಅನಂತತೆಗೆ ಯಾನ ಹಾದಿಯಲ್ಲಿ ಅದೆಷ್ಟು ಬೆಟ್ಟಗಳು, ಅದೆಷ್ಟು ತಿಟ್ಟಗಳು, ಎಲ್ಲವನ್ನೂ ಧುಮುಕಿ ಹರಿಯುವ ವೇಗ. ನಿಲ್ಲದೆ ಸರಸರನೆ ಸುತ್ತಿ ಸುಳಿದು, ಬತ್ತದೆ, ಬಸವಳಿಯದೆ, ಹರಿವ ನದಿಗೆ ಸಾಗರದ ಸಮ್ಮೋಹದಲ್ಲಿ ಅದೆಂತಹ ಸೆಳವು. ಅನಂತತೆಯ ಮಿಲನಕ್ಕೆ ಅನಾದಿಯ ಹಾದಿ. ನದಿ ತನ್ನ ಉಗಮ ಮರೆತಾಗ ಆಗಮ ಸೇರಿತ್ತು. ಹುಟ್ಟಿದ ಕ್ಷಣದಿಂದ ಹರಿಯುವ ನದಿಗೆ ಅನಂತತೆಯ ಅರಿವು ಭರವಾಗಿತ್ತು, ಭರವಸೆಯಾಗಿತ್ತು, ರಭಸವಾಗಿತ್ತು, ರಾಗವಾಗಿತ್ತು, ಅನುರಾಗವಾಗಿತ್ತು, ಕೊನೆಗೆ ಮಿಲನವಾಗಿತ್ತು. ನೆನಪುಗಳನ್ನು ಬಿಟ್ಟು ಹರಿದ ನದಿ ನೇರ ಗುರಿ ಮುಟ್ಟಿತ್ತು. ಗಮನದಲ್ಲಿ ಕೊನೆಯ ನಮನ ಸಲ್ಲಿಸಿತ್ತು.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...