Home / ಕಥೆ / ಕಿರು ಕಥೆ / ನದಿಯ ನೆನಪು

ನದಿಯ ನೆನಪು

ನದಿಯು ತನ್ನ ಉಗಮದ ನೆನಪೇ ಇಲ್ಲದೆ ಅನಂತವಾಗಿ ಹರಿಯುತ್ತಿತ್ತು. ತನ್ನಿಂದ ತುಂಬಿ ತುಳುಕುತ್ತಿದ್ದ ಬೆಳ್ಳಿ, ಹಿತ್ತಾಳೆ, ತಾಮ್ರ ಹಾಗೂ ಮಣ್ಣಿನ ಬಿಂದಿಗೆಗಳ ನೆನಪು ತನಗೆ ಒಂದಿಷ್ಟು ಇಲ್ಲ. ಅಷ್ಟೇಕೆ? ಬಾಯಾರಿ ದಾಹತೀರಿಸಲು ಬೊಗಸೆ ಕೈಯನ್ನು ತನ್ನ ಹರಿಯುವ ಒಡಲಿಗೆ ಸೇರಿಸಿ ನೀರು ಕುಡಿದ ಬೊಗಸೆಯ ನೆನಪು ತನಗಿಲ್ಲ. ತನ್ನ ದಾರಿಯುದ್ದಕ್ಕೆ ಸಂಧಿಸಿದ ಗಿಡಮರ, ವೃಕ್ಷಗಳು, ಪಕ್ಷಿ ಪ್ರಾಣಿಗಳು ಎಲ್ಲವೂ ತನ್ನ ಹರಿವ ಜಲದಲ್ಲಿ ಒಂದು ನೆನಪೂ ಬಿಟ್ಟಿಲ್ಲ. ಹರಿದು ಹೋಗುವಾಗ ಅದೊಂದು ಶುಭ್ರತೆಯ ವೇಗ, ಮುಂದೆ ಸಾಗರದ ಮಿಲನ. ಧ್ಯೇಯದ ಧ್ಯಾನದಲ್ಲಿ ಅನಂತತೆಗೆ ಯಾನ ಹಾದಿಯಲ್ಲಿ ಅದೆಷ್ಟು ಬೆಟ್ಟಗಳು, ಅದೆಷ್ಟು ತಿಟ್ಟಗಳು, ಎಲ್ಲವನ್ನೂ ಧುಮುಕಿ ಹರಿಯುವ ವೇಗ. ನಿಲ್ಲದೆ ಸರಸರನೆ ಸುತ್ತಿ ಸುಳಿದು, ಬತ್ತದೆ, ಬಸವಳಿಯದೆ, ಹರಿವ ನದಿಗೆ ಸಾಗರದ ಸಮ್ಮೋಹದಲ್ಲಿ ಅದೆಂತಹ ಸೆಳವು. ಅನಂತತೆಯ ಮಿಲನಕ್ಕೆ ಅನಾದಿಯ ಹಾದಿ. ನದಿ ತನ್ನ ಉಗಮ ಮರೆತಾಗ ಆಗಮ ಸೇರಿತ್ತು. ಹುಟ್ಟಿದ ಕ್ಷಣದಿಂದ ಹರಿಯುವ ನದಿಗೆ ಅನಂತತೆಯ ಅರಿವು ಭರವಾಗಿತ್ತು, ಭರವಸೆಯಾಗಿತ್ತು, ರಭಸವಾಗಿತ್ತು, ರಾಗವಾಗಿತ್ತು, ಅನುರಾಗವಾಗಿತ್ತು, ಕೊನೆಗೆ ಮಿಲನವಾಗಿತ್ತು. ನೆನಪುಗಳನ್ನು ಬಿಟ್ಟು ಹರಿದ ನದಿ ನೇರ ಗುರಿ ಮುಟ್ಟಿತ್ತು. ಗಮನದಲ್ಲಿ ಕೊನೆಯ ನಮನ ಸಲ್ಲಿಸಿತ್ತು.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...