Home / ಕಥೆ / ಕಿರು ಕಥೆ / ದಾರಿ ಎಲ್ಲಿದೆ?

ದಾರಿ ಎಲ್ಲಿದೆ?

“ದಾರಿ ಎಲ್ಲಿದೆ? ಎಂದು ಕಳಕಳಿಯಿಂದ ಶಿಷ್ಯ, ಗುರುವಿನಲ್ಲಿ ಕೇಳಿದ.
“ಬಹಿರಂಗದಲ್ಲಿ ನಿಂತು ಸಾಗಿದ್ದರೆ ಶಿಷ್ಯಾ! ನೇರ ಅಂತರಂಗದ ಹಾದಿಗೆ ಹೋಗು. ಅಂತರಂಗದಲ್ಲಿ ದಾರಿ ಕವಲೊಡೆದರೆ, ನಿಲ್ಲು ಧ್ಯಾನದಲ್ಲಿ, ಕೊನೆಗೆ ಸೇರುವೆ ಸಮಷ್ಟಿಯ ದಾರಿಯಲ್ಲಿ”- ಎಂದರು ಗುರುಗಳು.
“ನನ್ನ ಮನದ ಅಂತರಂಗ ಬಹಿರಂಗಗಳಿಗೆ ಗೆರೆ ಹಾಕುವುದು ಹೇಗೆ ಗುರುವರ್ಯಾ?” ಎಂದ ಶಿಷ್ಯ.
“ಗೋಡೆ, ಗೆರೆ, ಬೇಲಿಗಳಿಗಿಂತ ಹೊಸಿಲು, ಸೇತುವೆ ಇಟ್ಟುಕೋ.
ಮೆಟ್ಟಿಲಿರಲಿ ಏರಿ ಇಳಿಯಲು ಅಂತರಂಗಕ್ಕೆ” ಎಂದರು ಗುರುಗಳು.
“ಈ ದಾರಿಗೆ ಬೆಳಕಾವುದು ಗುರುಗಳೇ? ಊರುಗೋಲಾವುದು?” ಎಂದ.
“ತಿಳಿವು, ಅರಿವು ಇವೇ ದಾರಿಯ ಹಣತೆಗಳು, ಪ್ರಜ್ಞೆಯೇ ಊರುಗೋಲು.”
“ಈ ದಾರಿಯ ಗುರಿ ಎಲ್ಲಿಯವರೆಗೆ? ಗುರುವೇ!”
“ಅದರ ಗುರಿ ಆನಂದದಲ್ಲಿ. ಅನಂತದಲ್ಲಿ. ವ್ಯಷ್ಟಿ ಸಮಷ್ಟಿಲೀನದಲ್ಲಿ. ಆತ್ಮ ವಿಶ್ವಾತ್ಮ ತಾದಾತ್ಮ್ಯದಲ್ಲಿ.”
“ನದಿಯು ಹರಿಯುವ ದಾರಿ ಸಾಗರಮಿಲನ ವಲ್ಲವೇ?” ಎಂದಾಗ ಶಿಷ್ಯನಿಗೆ ದಾರಿ, ದೃಷ್ಟಿ ಗೋಚರವಾಯಿತು ಗುರುಗಳ ನುಡಿ ಬೆಳಕಿನಲ್ಲಿ.
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...