Home / ಕವನ / ಕವಿತೆ / ಶುಭಾಶಂಸನೆ

ಶುಭಾಶಂಸನೆ

ಯದುಕುಲಾಂಬುಧಿ ಚಂದ್ರ ವರಗುಣ
ಹೃದಯ ಕನ್ನಡ ನಾಡ ಕಣ್ಮಣಿ
ಸದಯ ಶ್ರೀಜಯಚಾಮರಾಜೇಂದ್ರ ಸುಖಿಸು ಜಗದಲಿ
ಸುದತಿ ಸತ್ಯಪ್ರೇಮದೇವಿಯ
ಮುದದಿ ವೆರಸುತ ರಾಜ್ಯಲಕ್ಷ್ಮಿಯ
ಹೃದಯ ಭೂಷಣನೆನಿಸಿ ಬಾಳೈ ಧರೆಯ ಪಾಲಿಸುತ
ವರದೆ ಶುಭಕಾವೇರಿ ಗೋದಾ
ವರಿಯು ವೇದಾವತಿ ಕಪಿಲೆಯರು
ಪರಮಪಾವನೆ ತುಂಗಭದ್ರೆಯು ಪಂಚ ಕನ್ಯೆಯರು
ಕರದಿ ಧರಿಸಿಹ ಪುಣ್ಯ ಜಲವನು
ಸುರಿಸುವರು ಮಕುಟಾಗ್ರದಲಿ ನೀ
ನರಸುತನಗೈಯ್ಯೆಂದು ಹರಸುವರು ಜನಪೋತ್ತಮಕೆ
ಯಾದವಾನ್ವಯ ಮಾತೆ ಗಿರಿಜೆಯು
ಮೋದದಿಂದಲಿ ಕಟ್ಟಿ ಪಟ್ಟವ
ಗಾದಿಯಲಿ ಕುಳ್ಳಿರಿಸಿ ಕರವಾಲವಿಡುತ ಕರದಲಿ
ಸಾದರದಿ ಶಿಖ ಮೊಹರ ನೀಡುತ
ಮೇದಿನೀಪತಿಯಾಗಿ ಧರೆಯಲಿ
ಮೇದಿನೀಶರ ಮೌಳಿಮಣಿಯಾಗೆಂದು ಹರಸುವಳು
ಪುಣ್ಯ ಪುರುಷನೆ! ನಿನ್ನ ಸಲಹಲಿ
ಪುಣ್ಯ ನದಿಗಳ ಪುಣ್ಯತೀರ್ಥದ
ಪುಣ್ಯರಾಶಿಯು ಪುಣ್ಯ ಪುರುಷರ ತಪದ ಫಲವೆಲ್ಲ
ಪುಣ್ಯವಧು ಸಚ್ಚರಿತೆ ಪುಣ್ಯಾ
ರಣ್ಯೆ ಸತ್ಯಪ್ರೇಮದೇವಿಯ
ಪುಣ್ಯವರ್ಧಿಸಿ ವಂಶಲತೆ ಪೂತು ಫಲಿಸಲಿಹದಲಿ
ವೀರ ಯದುರಾಯರ ಕಲಿತನವ
ಧೀರ ರಾಜೊಡೆಯರಭಿಮಾನವ
ಶೂರ ಚಿಕದೇವಾಖ್ಯಭೂಪರ ದೈವಭಕ್ತಿಯ ಮೇಣ್‌
ಧೀರ ಮುಮ್ಮಡಿ ಕೃಷ್ಣಜನಪರ
ಶೂರರೆನಿಸಿದ ಚಾಮರಾಜರ
ಚಾರುತರ ಗುಣಗಣವ ಮೆರೆಸುತ ಸಲಹು ಲೋಕವನು
“ರಾಜಋಷಿ” ಯೆಂದೆನಿಸಿ ಬಾಳಿದ
ರಾಜ ನಾಲ್ವಡಿ ಕೃಷ್ಣಭೂಪರ
ತೇಜವನು ಬೀರುತ್ತ ರಕ್ಷಿಸು ನಾಡ ಪ್ರಜೆಗಳನು
ಸಾಜದಿಂದಲಿ ತಂದೆಯಂದದಿ
ರಾಜಗುಣಗಳ ಪಡೆದು ನೆರೆ ರಾ
ರಾಜಿಸೈ ನೀಂ ರತ್ನ ಸಿಂಹಾಸನದಿ ಮಂಡಿಸುತ
ಪಟ್ಟ ಭದ್ರನೆ ಸುಖಿಸು ಸಂತತ
ಪಟ್ಟಮಹಿಷಿಯ ಸಹಿತ ಧರೆಯಲಿ
ಪಟ್ಟದಾನೆಯು ಪಟ್ಟದಶ್ವವು ನಿರುತ ವರ್ಧಿಸಲಿ
ಪಟ್ಟಮೆರೆಯಲಿ ಶಾಶ್ವತವೆನಿಸಿ
ನೆಟ್ಟಿರಲಿ ಯದುವಂಶ ಪೀಳಿಗೆ
ಯಟ್ಟಹಾಸದಿ ವರ್ಧಿಸಲಿ ರವಿಚಂದ್ರರಿರುವನಕ
ವಿಜಯಿಸೈ ಜಯಚಾಮರಾಜನೆ
ವಿಜಯಸೈ ನವಕೋಮಲಾಂಗನೆ
ವಿಜಯಸೈ ಶುಭವನಿತೆ ಚಾರುಪುನೀತೆಯವೆರಸಿ ನೀಂ
ವಿಜಯಲಕ್ಷ್ಮಿಯ ಪೂರ್ಣ ಕೃಪೆಯಿಂ
ವಿಜಯಿಯಾಗೈ ಸುಜನರಂಜಕ
ವಿಜಯ ಲಕ್ಷ್ಮಾಂಬಿಕೆಯ ನಲವಿನ ಮುದ್ದುಸೋದರನೆ
ಸುಖಿಸು ನೀಂ ಜಯಚಾಮ ರಾಜನೆ
ಸುಖಸು ನೀಂ ನರಸಿಂಹವರನಯನೆ
ಸುಖಿಸು ಸತ್ಯಪ್ರೇಮಭಾಮೆಯ ವೆರಸಿ ಚಿರಕಾಲ
ಸುಖಿಸು ಕನ್ನಡನಾಡ ಕಣ್ಮಣಿ
ಸುಖಿಸು ಯದುಕುಲ ವೀರ ದಿನಮಣಿ
ಸುಖಸು ದೀನರ ಸಂತ ಬುಧ ಕವಿ ಜನರ ಪಾಲಿಸುತ
………
ಚಿರಮಭಿವರ್ಧತಾ೦ ಯದುಸಂತಾನ ಶ್ರೀಃ
*****
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...