Home / ಕವನ / ಕವಿತೆ / ಜೋ-ಅರಿವು

ಜೋ-ಅರಿವು

ಮಾಟ ಮಾಟ, ಇದು ಯಾವ ಆಟ
ಈ ಬಟಾ ಬಯಲಿನಲ್ಲಿ.
ಅಚ್ಚ ಅರಿವು ಬರಿ ಬಚ್ಚ ಅರಿವು
ಹೊಸ ಹೊಚ್ಚ ಅರಿವಿನಲ್ಲಿ.

ಅರೆ ಅರಿವಿನಲ್ಲಿ ಮರೆ ಅರಿವಿನಲ್ಲಿ
ಹೊರ ಅರಿವಿನಲ್ಲಿ ನೀನು
ತೆರೆ ಅರಿವಿನಲ್ಲಿ ಬರೆ ಅರಿವಿನಲ್ಲಿ
ಕೊರೆ ಅರಿವಿನಲ್ಲಿ ನೀನು.

ಮುರಿವರಿವಿನಲ್ಲಿ ಮೆರೆವರಿವಿನಲ್ಲಿ
ನೆರೆವರಿವಿನಲ್ಲಿ ನೀನು
ನುರಿವರಿವಿನಲ್ಲಿ ನೊರೆವರಿನಿನಲ್ಲಿ
ತೊರೆವರಿವಿನಲ್ಲಿ ನೀನು.

ನೆಲದರಿವಿನಲ್ಲಿ ನೀರರಿವಿನಲ್ಲಿ
ಉರಿವರಿವಿನಲ್ಲಿ ಅನಿಲ
ಬಾನರಿವಿನಲ್ಲಿ ತಾನರಿವಿನಲ್ಲಿ
ಹರಿವರಿವಿನಲ್ಲಿ ಅನಲ.

ಅನಲ, ಅನಿಲ ಸಂಯೋಗದಲ್ಲಿ ಗೋ
-ಪುರವ ಕಟ್ಟಿ ಅರಿವು
ಮರೆವಿನೊಂದು ಮರೆಯಲ್ಲಿ ಮನೆಯ
ಕಟ್ಟಿಹುದು ಬಯಲ ಇರವು.

ಹರವೆ ತಗ್ಗುತಿದೆ; ಹರವೆ ನುಗ್ಗುತಿದೆ
ಹಿಗ್ಗುತಿಹುದು ಹರವು
ಮೊಗ್ಗು ಮೊಗ್ಗಾಗಿ; ಅರಳು ಅರಳಾಗಿ
ಹರಳುಗೊಳುವ ಇರವು.

ಅರಬು ಏಕೆ? ಬರಬೇಕೆ? ಮರೆವೊ? ಓ
ಅರಿವೆ ಅರಿವೆ ಇಹುದು
ಸ್ವರದ ಮೂರ್ಛನೆಗೆ ರಾಗ ಲಯದ ಕಲೆ
ತಲೆಯ ತೂಗುತಿಹುದು.

ತಾ ಎಂದ ಅರಿವು ಬಾ ಎನುವ ಅರಿವು
ನಾ ಎನುವ ಅರಿವು ಇಳಿದು
ಜೋ ಎನುವ ಅರಿವು ಭೋ ಎನುವ ಅರಿವು
ಬರುತಿಹುದು ತಮವ ಕಳೆದು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...