Home / ಕಥೆ / ಕಿರು ಕಥೆ / ಧ್ವನಿಯಲ್ಲಿ ಗುರು

ಧ್ವನಿಯಲ್ಲಿ ಗುರು

ಊರು ಕೇರಿ, ಮನೆ ಮಠ ತೊರೆದು ಹೋದ ಮಗನಿಗಾಗಿ ನೊಂದ ತಾಯಿ ಬಹಳಷ್ಟು ಕಾಯುತ್ತಿದ್ದಳು. ಬಿಟ್ಟು ಹೋದ ಒಬ್ಬನೇ ಮಗನ ಹಂಬಲ ಅವಳನ್ನು ಬಹಳಷ್ಟು ಕಾಡುತಿತ್ತು.

ಒಂದು ಸುಂದರ ಬೆಳಗು, ಅಂಗಳದಲ್ಲಿ ರಂಗವಲ್ಲಿ ಬಿಡಿಸುವಾಗ ಇವಳ ಕರುಳಕುಡಿ ಬಂದು ನಿಂತ ಅಂಗಳದಲ್ಲಿ. ರಂಗವಲ್ಲಿಯಲ್ಲಿ ಕರುಳ ಹೂ ಅರಳಿಸಿದ್ದ ತಾಯಿಗೆ ಮಗನನ್ನು ನೋಡಿ ಸಂತಸವಾಯಿತು.

“ಮಗನೇ! ಅದೇಕೆ, ಮನೆ ತೊರೆದು ಹೋದೆ. ನಿನ್ನ ತಾಯಿಯ ಕರುಳಧ್ವನಿ ನಿನಗೆ ಕೇಳಲಿಲ್ಲವೇ?” ಎಂದಳು.

“ಮನೆತೊರೆದು ಹೋಗಿ, ಜಗದ ಎಲ್ಲಾ ಧ್ವನಿಗಳನ್ನು ಕೇಳಿ, ಅಳೆದು ಸುರಿದು ಬಂದಿರುವೆ. ಧ್ವನಿಯೊಳಗೆ ಧ್ವನಿ ಗುರುತಿಸಿರುವೆ. ಧ್ವನಿ ಮೆಟ್ಟಿಲು ಹತ್ತಿಳಿದು ಬಂದು, ಧ್ವನಿ ಲೋಕವನ್ನು ಅರ್ಥವಿಸಿ ಬಂದಿರುವೆ. ಧ್ವನಿಯಲ್ಲಿ ಅಡಗಿದ ಹಾವ ಭಾವಗಳು, ಪ್ರೀತಿ, ಪ್ರೇಮ, ಒಂದೇ ಅಲ್ಲದೆ ನಿರ್ಲಕ್ಷ್ಯ, ವೈಷಮ್ಯ, ಅಸೂಯೆ ದೂರ ಅಟ್ಟಿ-ಕರುಣೆ, ಗುರುತಿಸಿರುವೆ. ಲೋಕದ ಧ್ವನಿಯಲ್ಲಿ, ಸಮಾಜದ ಧ್ವನಿಯಲ್ಲಿ, ನನ್ನನ್ನು ಬೆಳೆಸಿಕೊಂಡಿರುವೆ. ಪ್ರಕೃತಿಯ ಧ್ವನಿಯಲ್ಲಿ ನನ್ನನ್ನು ನಾ ಕಂಡುಕೊಂಡಿರುವೆ. ಅಧಿಕಾರದ ಧ್ವನಿಯಲ್ಲಿ ನನ್ನನ್ನು ತಿದ್ದಿಕೊಂಡಿರವೆ. ಅಭಯದ ಧ್ವನಿಯಲ್ಲಿ ಬಾಳಿರುವ, ಅಭೇದ್ಯ ಧ್ವನಿಯಲ್ಲಿ ಜ್ಞಾನ ಗುರುತಿಸಿರುವೆ. ಅಶರೀರ ಧ್ವನಿಯಲ್ಲಿ ದೈವತ್ವ, ಕಂಡಿರುವೆ. ಪ್ರೀತಿ ಕರುಣೆ ಧ್ವನಿಯಲ್ಲಿ ತಾಯಿಯ ಗುರುತಿಸಿ ನಿನ್ನಲ್ಲಿಗೆ ಬಂದಿರುವೆ. ನಿನ್ನ ಪಾರದರ್ಶಕ ಧ್ವನಿಯಲ್ಲಿ ದೈವತ್ವವ ಕಂಡಿರುವೆ. ನಿನ್ನ ಧ್ವನಿಯ ಧ್ಯಾನದಲ್ಲಿ ನಾನು ಈಗ ನಿನ್ನ ಪಾದಕ್ಕೆ ಬಂದು ಸೇರಿರುವೆ” ಎಂದ ಮಗ.

ಧ್ವನಿಯನ್ನು ಗುರವಾಗಿಸಿಕೊಂಡ ಮಗನನ್ನು ಅಪ್ಪಿ, ತಾಯಿ ಧ್ವನಿಯಲ್ಲಿ ಪ್ರತಿ ಧ್ವನಿಯಾಗಿ, ಪ್ರೀತಿ ಧ್ವನಿಯಾದಳು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...