Home / ಕವನ / ಕವಿತೆ / ಸುಳಿಗಾಳಿಯೊಡನೆ

ಸುಳಿಗಾಳಿಯೊಡನೆ

ಹನ್ನೆರಡು ವರುಷಗಳು ಮೇಲೇಸೊ ದಿವಸಗಳು
ಭೂತಕಾಲದ ಗರ್ಭಗೋರಿಯಲ್ಲಿ;
ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು
ನೊಂದ ಜೀವಿಯ ಮನದ ರಂಗದಲ್ಲಿ.
ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ
ವಿಜಯಪುರವೇ ನಿನ್ನ ಮರೆಯಲಾರೆ;
ನೂರಾರು ಮೈಲುಗಳ ಗಡಿಯಾಚೆ ನಿಂತರೂ
ಎದೆಯ ಹಂಬಲವನ್ನು ತೊರೆಯಲಾರೆ.
ಅರೆಬೀಳು ಕೋಟೆಗಳು ಆ ಹಾಳು ಗೋರಿಗಳು
ಕೂಗಿ ಕರೆದಿವೆ ಕವಿಯ, ಬಾರೋ ಎಂದು;
ತಮ್ಮ ಮೇಲೊಂದೊಂದು ಕಾವ್ಯಕೃತಿ ರಚಿಸೆಂದು
ಅಂಗಲಾಚಿವೆ ಕಣ್ಗೆ ನೀರ ತಂದು.
ದುಃಖದಲ್ಲಿ ಬಿಕ್ಕಿರುವ ನಗುನಗುತ ಬಾಳಿರುವ
ನಿಮ್ಮ ನೆರಳೇ ನನಗೆ ತೌರಾಗಿದೆ;
ಮರಣ ಶಯ್ಯೆಯ ಮೇಲೆ ಕೊನೆಯ ಉಸಿರೆಳೆಯದಿರಿ
ಕವಿಯ ಕರುಳೇ ಕರಗಿ ನೀರಾಗಿದೆ.
ನನ್ನ ಹೃದಯವ ನೋಡಿ ಕಾವ್ಯ ಕಲ್ಪನೆ ನೀಡಿ
ನಿಮ್ಮತನ ಸರ್ವಸ್ವದೌದಾರ್ಯಕೆ;
ಕಾವ್ಯ ಕೃತಿಯಲ್ಲೊಂದು ಸ್ಮೃತಿಯ ದೀಪಸ್ತಂಭ
ನಿಲ್ಲಿಸಿದರಾದಿನವೆ ಋಣ ತೀರಿತೆ?
ನಿತ್ಯ ನಿಲ್ದಾಣದಲಿ ಸಿಳ್ಳು ಹೊಡೆಯುವ ಗಾಡಿ
ಹೊತ್ತು ತರದಿಹುದಲ್ಲ ಕವಿಯನೊಮ್ಮೆ
ಎಂದು ಪ್ರತಿ ಉಸುರಿನಲಿ ಅಳಲ ಚೀತ್ಕಾರದಲಿ
ಎದೆಗೆಟ್ಟು ಕೂಗದಿರಿ-ಬರುವೆನೊಮ್ಮ.
ಹಗಲಿರಲಿ ಇರುಳಿರಲ್ಲಿ ಯಾವ ದಿನವೇ ಇರಲಿ
ತೇಲಿ ಬರುವೆನು ಮುಗಿಲ ತೇರನೇರಿ;
ಸುಳಿಗಾಳಿಯೊಡಗೂಡಿ ಸುತ್ತು ಸೌರಭ ಸೂಸಿ
ಬರುವೆ ಬೀದಿಯ ತುಂಬ ಬೆಳಕ ಬೀರಿ!
*****
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...