Home / ಲೇಖನ / ಇತರೆ / ಕುರ್-ಆನ್ ಕತೆ

ಕುರ್-ಆನ್ ಕತೆ

ಬಹಳಷ್ಟು ಜನರಿಗೆ ಕುರ್-ಆನ್ ಬಗ್ಗೆ ತಿಳಿದಿಲ್ಲ. ಎಲ್ಲರಿಗೆ ತಿಳಿದಿರುವ ಅವಶ್ಯಕತೆ ಏನಿದೆ? ಎಂದು ನೀವೆಲ್ಲ ಕೇಳಬಹುದೇನೋ….

ಹೌದು! ನಮ್ಮ ದೇಶ ಸರ್ವಧರ್ಮಗಳ ಸಮನ್ವಯ ದೇಶ. ಎಲ್ಲ ಧರ್ಮಗಳ ಸಾರ ಒಂದೇ. ಅದು ತಿಳಿದಿದ್ದರೆ ಒಳ್ಳೆಯದಲ್ಲವೇ?

ಲಂಡನ್‌ನ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇರುವ ಕುರ್-ಆನ್ ಹಸ್ತಪ್ರತಿಯೊಂದರ ತುಣುಕುಗಳು ಇಡೀ ವಿಶ್ವದಲ್ಲಿರುವ ತೀರಾ ಹಳೆಯ ಕುರ್-ಆನ್ ಹಸ್ತಪತಿಗಳಲ್ಲಿ ಒಂದು ಮೊತ್ತ ಮೊದಲನೆಯದೆಂದು ಜುಲೈ ೨೦೧೫ ರ ತಿಂಗಳಲ್ಲಿ ಸಂಶೋಧಕರು ಸತ್ಯವನ್ನು ಹೊರಗೆಡವಿದ್ದಾರೆ!

ಈ ಹಸ್ತ ಪ್ರತಿಯು ೧೩೭೦ ವರ್ಷಗಳಷ್ಟು ತೀರಾ ಹಳೆಯದಾಗಿದ್ದು ಪ್ರವಾದಿ ಮುಹಮ್ಮದ್ ಅವರ ಕಾಲಕ್ಕೆ ಸಂಪರ್ಕಕ್ಕೆ ತೀರಾ ನಿಕಟ ಸಂಬಂಧವಿದೆಯೆಂದು ಸಂಶೋಧಕರು ಪತ್ತೆ ಹಚ್ಚಿರುವರು. ಇದು ಚರ್‍ಮದ ಹಾಳೆಗಳನ್ನು ಹೊಂದಿದೆ. ಇದನ್ನು ಈಗಾಗಲೇ ಸಂಶೋಧಕರು ರೇಡಿಯೊ ಕಾರ್ಬನ್ ವಿಶ್ಲೇಷಣೆಗೆ ಒಳಪಡಿಸಿರುವರು.

ಹೀಗಾಗಿ ಈ ಹಸ್ತಪ್ರತಿಯು ೫೬೮ ರಿಂದ ೬೪೫ ನೆಯ ಇಸವಿಯಲ್ಲಿ ಸೃಷ್ಠಿಯಾಗಿದೆಯೆಂಬ ಒಮ್ಮತಕ್ಕೆ ಬಂದಿರುವರು.

ಈ ಸಂಶೋಧನೆಯು ನೂರಕ್ಕೆ ನೂರರಷ್ಟು ಖಚಿತವಾದುದ್ದು ನಿಖರವಾದುದ್ದು ಎಂದು ಇವರು ತಿಳಿಸಿರುವರು.

ಕಾರಣ- ಈ ಕುರ್ ಆನ್‌ನಲ್ಲಿ ಯಾವುದೇ ಸೇರ್ಪಡೆ ಬದಲಾವಣೆ ತಿದ್ದುಪಡಿ ಇರುವುದಿಲ್ಲ. ಮುಹಮ್ಮದ್ ಅವರ ದಿವ್ಯ ಸಂದೇಶವನ್ನೊಳಗೊಂಡಿರುವುದರಿಂದ ಇದೊಂದು ಪರಮ ಪವಿತ್ರ ಕುರ್‌ಆನ್ ಎಂದೇ ಖ್ಯಾತವಾಗಿರುವುದು.

ಇದರಲ್ಲಿ ಹಿಜಾಜಿ ಎಂದು ಕರೆಯಲಾಗುವ ಅರೇಬಿಕ್‌ ಆರಂಭಿಕ ಕಾಲದ ಲಿಪಿಯನ್ನು ಈ ಗ್ರಂಥದಲ್ಲಿ ಬಳಸಿರುವುದೊಂದು ವಿಶೇಷವಾಗಿದೆ.

ಇದು- ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಮಧ್ಯಪ್ರಾಚ್ಯ ಹಸ್ತಪ್ರತಿ ವಿಭಾಗದಲ್ಲಿ ಈ ಮಹಾ ಕುರ್‌ಆನ್ ಹಸ್ತ ಪ್ರತಿ ಇದೆ. ಇದನ್ನು ಬಲು ಅಮೂಲ್ಯವಾಗಿ ಅಪರೂಪವೆಂಬಂತೆ ಸಂರಕ್ಷಿಸಿ ಇಡಲಾಗಿದೆ.

ಬರ್ಮಿಂಗ್ ಹ್ಯಾಮ್‌ಗೆ ಯಾರೇ ಹೋಗಲಿ ವಿಶೇಷವಾಗಿ ಮುಸ್ಲಿಮ್ ಬಾಂಧವರು ಭೇಟಿ ನೀಡಿದವರೆಲ್ಲ ತಪ್ಪದೆ, ಮರೆಯದೆ, ಅದನ್ನು ವೀಕ್ಷಿಸಿ, ಅದಕ್ಕೆ ನಮಸ್ಕರಿಸಿ ಬರುವರು.

ಇದು ಕುರ್‌-ಆನ್ ಮಹತ್ವವೆಂದರೆ…
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...