Home / ಕವನ / ಕವಿತೆ / ಗೋರಿಗಳ ಸ್ವಗತ

ಗೋರಿಗಳ ಸ್ವಗತ

ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು
ನೀನು ಬಹಳ ಪುಣ್ಯವಂತೆ
ಬಾದಷಹ ಷಹಜಹಾನನು
ನಿನ್ನ ಅಮರ ಸೌಂದರ್ಯದ ಸ್ಮೃತಿಗೆ
ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ.

ಶಹರ ಪಟ್ಟಣಗಳು ನರಕಕೂಪಗಳಾಗಿ
ನಿನ್ನ ಸಮಾಧಿಗೆ ಸಂಗಮರಮರಿಯ
ಹಾಲಿನಂತಹ ತಂಪು ಬೆಳದಿಂಗಳು
ನನ್ನ ಗೋರಿಯ ಸುತ್ತಲೂ ನೋಡು
ನಿಶಾನೆ ಅಳಿಸುತ್ತ ಕತ್ತಲ್ಲನ್ನಪ್ಪಿ ಮಲಗಿದೆ.

ನನ್ನದೆಂತಹ ಖೋಟಾ ನಸೀಬು ನೋಡು
ಸುತ್ತಲೂ ಮುಳ್ಳು ಕಂಟಿ ಗಿಡಗಳು
ನಿನಗೆ ಸಿಕ್ಕ ಸವಲತ್ತು, ದವಲತ್ತು ನನಗೆಲ್ಲಿ
ದಿನವೂ ರೊಟ್ಟಿಗಾಗಿ ಹೋರಾಡುತ್ತಲೇ ಸತ್ತೆ
ಹೆಣ ಹುಗಿಯಲು ಹಣ ಎಲ್ಲಿಂದ ತರಲಿ?
ನಿನ್ನ ಸಮಾಧಿಯನ್ನು ವಿಶ್ವವೇ ನೋಡುತ್ತಿದೆ

ನನ್ನ ಗೋರಿಯ ಗುರುತು ಹೇಗೆ ಉಳಿಸಲಿ?
ನಿನ್ನ ಸಮಾಧಿಯ ಮೇಲೆ ಗಲೀಫ್, ಹೂ, ಚಾದರ
ನನ್ನ ಗೋರಿ ಮೇಲೆ ಒಂದು ದಳವೂ ಇಲ್ಲ
ವಾರಸುದಾರರಿಲ್ಲದ ಪರದೇಶಿ ಗೋರಿ ನನ್ನದು.

ಬಡವರ ಗೋರಿಗೆ ಮಕಮಲ್ಲು ಚಾದರಿಲ್ಲ
ಗುರುತಿನ ಕಲ್ಲಿಲ್ಲ, ನೆರಳಿನ ಮರವಿಲ್ಲ
ಮುಮ್ತಾಜ್ ನೀನೆ ಪುಣ್ಯವಂತೆ ನೋಡು
ತಂಪುಬಿಳುಪಿನ ಸಂಗಮರಮರಿಯ ಛಾವಣಿ
ಕೆತ್ತನೆಯ ಸುಂದರ ಸಮಾಧಿ ನಿನ್ನದು.
ನನ್ನ ಹಾಳುಬಿದ್ದ ಸಮಾಧಿಗೆ ಸುಣ್ಣಬಣ್ಣವಿಲ್ಲ
ಒಣಗಿದ ಹೂವಿಗೂ ಗತಿಯಿಲ್ಲ ನೋಡು.

ನನ್ನ ಕಣ್ಣಿನಿಂದ ಉದುರಿದ ಉಪ್ಪು ನೀರಿಗೆ
ನರಕದ ನಿಗಿನಿಗಿ ಕೆಂಡದ ಬಿಸಿ ಬೂದಿಯಾಯ್ತು.
ಎಲ್ಲರ ಗೋರಿ ಖಬರಸ್ತಾನದಲ್ಲಿದ್ದರೆ ನಿನ್ನದು ಮಾತ್ರ
ಸುಂದರ ಯಮುನೆಯ ತಟದಲ್ಲಿದೆ.
ವಾರಸುದಾರರಿಲ್ಲದ ನನ್ನ ಪರದೇಶಿ ಗೋರಿಗೆ
ಅಸಂಖ್ಯಾತ ಬಡವರ ಕಣ್ಣೀರುಗಳೇ ಕೊಡುಗೆ ನೋಡು.
*****
* ಖೊಟ್ಟಿ ಹಣೆಬರಹ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...