Home / ಕವನ / ಕವಿತೆ / ಗೋರಿಗಳ ಸ್ವಗತ

ಗೋರಿಗಳ ಸ್ವಗತ

ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು
ನೀನು ಬಹಳ ಪುಣ್ಯವಂತೆ
ಬಾದಷಹ ಷಹಜಹಾನನು
ನಿನ್ನ ಅಮರ ಸೌಂದರ್ಯದ ಸ್ಮೃತಿಗೆ
ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ.

ಶಹರ ಪಟ್ಟಣಗಳು ನರಕಕೂಪಗಳಾಗಿ
ನಿನ್ನ ಸಮಾಧಿಗೆ ಸಂಗಮರಮರಿಯ
ಹಾಲಿನಂತಹ ತಂಪು ಬೆಳದಿಂಗಳು
ನನ್ನ ಗೋರಿಯ ಸುತ್ತಲೂ ನೋಡು
ನಿಶಾನೆ ಅಳಿಸುತ್ತ ಕತ್ತಲ್ಲನ್ನಪ್ಪಿ ಮಲಗಿದೆ.

ನನ್ನದೆಂತಹ ಖೋಟಾ ನಸೀಬು ನೋಡು
ಸುತ್ತಲೂ ಮುಳ್ಳು ಕಂಟಿ ಗಿಡಗಳು
ನಿನಗೆ ಸಿಕ್ಕ ಸವಲತ್ತು, ದವಲತ್ತು ನನಗೆಲ್ಲಿ
ದಿನವೂ ರೊಟ್ಟಿಗಾಗಿ ಹೋರಾಡುತ್ತಲೇ ಸತ್ತೆ
ಹೆಣ ಹುಗಿಯಲು ಹಣ ಎಲ್ಲಿಂದ ತರಲಿ?
ನಿನ್ನ ಸಮಾಧಿಯನ್ನು ವಿಶ್ವವೇ ನೋಡುತ್ತಿದೆ

ನನ್ನ ಗೋರಿಯ ಗುರುತು ಹೇಗೆ ಉಳಿಸಲಿ?
ನಿನ್ನ ಸಮಾಧಿಯ ಮೇಲೆ ಗಲೀಫ್, ಹೂ, ಚಾದರ
ನನ್ನ ಗೋರಿ ಮೇಲೆ ಒಂದು ದಳವೂ ಇಲ್ಲ
ವಾರಸುದಾರರಿಲ್ಲದ ಪರದೇಶಿ ಗೋರಿ ನನ್ನದು.

ಬಡವರ ಗೋರಿಗೆ ಮಕಮಲ್ಲು ಚಾದರಿಲ್ಲ
ಗುರುತಿನ ಕಲ್ಲಿಲ್ಲ, ನೆರಳಿನ ಮರವಿಲ್ಲ
ಮುಮ್ತಾಜ್ ನೀನೆ ಪುಣ್ಯವಂತೆ ನೋಡು
ತಂಪುಬಿಳುಪಿನ ಸಂಗಮರಮರಿಯ ಛಾವಣಿ
ಕೆತ್ತನೆಯ ಸುಂದರ ಸಮಾಧಿ ನಿನ್ನದು.
ನನ್ನ ಹಾಳುಬಿದ್ದ ಸಮಾಧಿಗೆ ಸುಣ್ಣಬಣ್ಣವಿಲ್ಲ
ಒಣಗಿದ ಹೂವಿಗೂ ಗತಿಯಿಲ್ಲ ನೋಡು.

ನನ್ನ ಕಣ್ಣಿನಿಂದ ಉದುರಿದ ಉಪ್ಪು ನೀರಿಗೆ
ನರಕದ ನಿಗಿನಿಗಿ ಕೆಂಡದ ಬಿಸಿ ಬೂದಿಯಾಯ್ತು.
ಎಲ್ಲರ ಗೋರಿ ಖಬರಸ್ತಾನದಲ್ಲಿದ್ದರೆ ನಿನ್ನದು ಮಾತ್ರ
ಸುಂದರ ಯಮುನೆಯ ತಟದಲ್ಲಿದೆ.
ವಾರಸುದಾರರಿಲ್ಲದ ನನ್ನ ಪರದೇಶಿ ಗೋರಿಗೆ
ಅಸಂಖ್ಯಾತ ಬಡವರ ಕಣ್ಣೀರುಗಳೇ ಕೊಡುಗೆ ನೋಡು.
*****
* ಖೊಟ್ಟಿ ಹಣೆಬರಹ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...