Home / ಲೇಖನ / ಇತರೆ / ಕೋಳಿ ಮೊದಲೋ… ಮೊಟ್ಟೆ ಮೊದಲೋ…

ಕೋಳಿ ಮೊದಲೋ… ಮೊಟ್ಟೆ ಮೊದಲೋ…

ಒಮ್ಮೆ- ಅಕ್ಷರ ಮಹಾರಾಜ ಸಭೆಯ ಮಧ್ಯದಲ್ಲಿ ವಿನೋದಕ್ಕಾಗಿ “ಕೋಳಿ ಮೊದಲೋ? ಮೊಟ್ಟೆ ಮೊದಲೋ?? ಇದನ್ನು ಜಾಣ್ಮೆಯಲ್ಲಿ ಉತ್ತರಿಸಬೇಕು. ಇಲ್ಲವಾದರೆ ತಲೆ ದಂಡ ಖಂಡಿತ” ಎಂದು ಆಸ್ಥಾನಿಕರೆಲ್ಲರನೂ ಕೇಳುತ್ತಾ ಹೋದ.

ಒಬ್ಬ ಪಂಡಿತ ಎದ್ದು ನಿಂತು – “ಪ್ರಭು ಕೋಳಿ ಮೊದಲು, ಕೋಳಿ ಇದ್ದರಲ್ಲದೇ ಮೊಟ್ಟೆ ಉತ್ಪತ್ತಿಯಾಗುವುದು” ಎಂದ. ಅಲ್ಲಿದ್ದವರೆಲ್ಲಗೊಳ್ಳನೆ ನಕ್ಕರು.

ಅಲ್ಲಿದ್ದ ಕವಿಯೊಬ್ಬ ಎದ್ದು ನಿಂತು “ಪ್ರಭು… ಮೊಟ್ಟೆ ಮೊದಲು. ಮೊಟ್ಟೆಯಿದ್ದರಲ್ಲವೇ ಕೋಳಿ ಜನ್ಮಿಸುವುದು…” ಎಂದು ವಾದ ಮಂಡಿಸಿದ.

ಅಲ್ಲಿದ್ದವರೆಲ್ಲ ಮತ್ತೇ ಬಿದ್ದು ಬಿದ್ದು ನಕ್ಕರು.

ಇನ್ನೊಬ್ಬ ಪಂಡಿತ ಎದ್ದು ನಿಂತು “ಪ್ರಭು… ಕೋಳಿ ಮತ್ತು ಮೊಟ್ಟೆ ಏಕಕಾಲಕ್ಕೆ ಅಸ್ಥಿತ್ವಕ್ಕೆ ಬಂದಿವೆ. ಇಲ್ಲಿ ಯಾವುದು ಮೊದಲು ಯಾವುದು ಆನಂತರ ಎನ್ನುವುದು ಮುಖ್ಯವಲ್ಲ. ಕೋಳಿ ಮತ್ತು ಮೊಟ್ಟೆ ನಮಗೆ ಎರಡೂ ಮುಖ್ಯ” ಎಂದ.

ಆಸ್ಥಾನಿಕರೆಲ್ಲ ತಲೆದೂಗಿ ಕಣ್ಣು ಕಿವಿ ಮೂಗು ಅರಳಿಸಿ ಕುಳಿತರು.

ಅನುಭಾವಿಯೊಬ್ಬ ಎದ್ದು ನಿಂತು “ಮಹಾಪ್ರಭು… ಕೋಳಿ ಎನ್ನುವುದೂ ಸತ್ಯ ಮೊಟ್ಟೆ ಎನ್ನುವುದೂ ಸತ್ಯ. ಯಾವುದು ಮೊದಲು ಯಾವುದು ಅನಂತರ ಎನ್ನುವುದೆಲ್ಲ ಗೊಂದಲ…” ಎಂದು ವಾದ ಮಂಡಿಸುತ್ತಾ ನಿಂತ.

ಅಕ್ಷರ ಮಹಾರಾಜರದ್ದು ತಲೆ ಕೆಟ್ಟು ಹೋಯಿತು.

ಅಷ್ಟರಲ್ಲಿ- ಬೀರಬಲ್ಲ ಎದ್ದು ನಿಂತು ಮಹಾರಾಜರಿಗೆ, ಸಭೆಗೆ, ವಂದಿಸಿ. “ಮಹಾಪ್ರಭು ದೇವರು ಆರಂಭದಲ್ಲಿ ಅನಂತ ಸೃಷ್ಟಿ ಕ್ರಿಯೆಗಳಲ್ಲಿ ಪಕ್ಷಿಗಳನ್ನು ಮೊದಲು ಸೃಷ್ಠಿಸಿದ! ಆ ಪಕ್ಷಿ ಪ್ರಭೇದಗಳಲ್ಲಿ ಕೋಳಿಯೂ ಒಂದು ಎಂದು ಬ್ರಹ್ಮಾಂಡ ಸೃಷ್ಠಿ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ಕೋಳಿಯಿಂದ ಮೊದಲು ಮೊಟ್ಟೆ ! ನಂತರ ಮೊಟ್ಟೆಯಿಂದ ಕೋಳಿ ಹೀಗೆ ಸೃಷ್ಟಿ ಪ್ರತಿ ಸೃಷ್ಠಿಯಾಗುತ್ತಾ ನಿರಂತರವಾಗಿ ಸಾಗಿದೆಯೇ ವಿನಹ… ಕೂದಲು ಸೀಳುವ ಕೆಲಸದಿಂದ ಯಾರಿಗೆ ಲಾಭವಿಲ್ಲ… ಕೋಳಿ ಮೊದಲೋ ಮೊಟ್ಟೆ ಮೊದಲೋ… ಎನ್ನುವ ಪ್ರಶ್ನೆಯೇ ಅಲ್ಲ! ಆದ್ದರಿಂದ – ಗತ್ತಿನಲ್ಲಿ ಕೋಳಿ ಮೊದಲು, ಕೋಳಿಯಿಂದ ಮೊಟ್ಟೆ ಅನಂತರ ಬಂದಿದೆ… ಅದಕ್ಕೆ ಸೃಷ್ಠಿ ಪುರಾಣ ಕಥೆಯೇ ಮೂಲ ಆಧಾರ..” ಎಂದು ತನ್ನ ವಾದ ಮಂಡಿಸುತ್ತಾ ನಿಂತ.

“ಶಹಭಾಶ್… ಬೀರಬಲ್ಲ….! ನಿನ್ನ ವಾದ ಪ್ರೌಢಿಮೆ, ಜಾಣತನ, ನಿನ್ನ ತರ್ಕ ವಿನೋದ ಸದಾ ಚೈತನ್ಯದ ಚಿಲುಮೆ. ಮೆಚ್ಚಿದೆ. ನಿನ್ನ ವಾದವನ್ನು ನಾನೂ ಅನುಮೊದಿಸಿದ್ದೇನೆ” ಎಂದು ಸ್ವತಃ ಪ್ರಭುಗಳೇ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಉಳಿದವರೆಲ್ಲ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದರು. ಅಲ್ಲಿಗೆ ಸಭೆಯು ಮುಕ್ತಾಯವಾಗಿತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...