Home / ಲೇಖನ / ಇತರೆ / ಯಾವುದು ಸತ್ಯ?

ಯಾವುದು ಸತ್ಯ?

ಬಹಳ ಹಿಂದೆ- ಭವ್ಯ ಭಾರತ ಕಂಡ ಅಪ್ರತಿಮ ಅಧ್ಯಾತ್ಮಿಕ ತತ್ವ ಸಿದ್ಧಾಂತಿ ಮಹಾ ಸಿದ್ಧಿ ಸಾಧಕರೊಬ್ಬರಿದ್ದರು. ಅವರ ಹೆಸರು- ರಮಣ ಮಹರ್ಷಿಗಳೆಂದು. ಅವರಿಗೆ ಬಹಳ ಜನ ಶಿಷ್ಯರಿದ್ದರು. ಅವರಲ್ಲಿ ಮರುಳ ಸಿದ್ದಯ್ಯ, ಬಸಪ್ಪಯ್ಯ ವಲಿಯ, ಸೀನ, ಮೃತ್ಯುಂಜಯ, ರಾಜ, ಕೊಟ್ರಯ್ಯ… ಎಂದೂ ಇದ್ದರು.

ಒಮ್ಮೆ- ಉಪದೇಶದ ಮಧ್ಯೆ ರಮಣ ಮಹರ್ಷಿಗಳು “ಅಯ್ಯಾ ಸತ್ಯ ಯಾವುದು? ನಿಮ್ಮಲ್ಲಿ ಯಾರು ಹೇಳ ಬಲ್ಲಿರಿ?” ಎಂದು ಅಲ್ಲಿದ್ದ ತಮ್ಮ ಶಿಷ್ಯರೆಲ್ಲರನೂ… ಒಂದು ಕಡೆಯಿಂದ ಕೇಳುತ್ತಾ ಹೋದರು. ಆಗ ಶಿಷ್ಯರೆಲ್ಲರು ತಲೆ ಕೆರೆಯುತ್ತಾ ಕುಳಿತರು.

“ಸ್ವಾಮಿಗಳೆ… ನಾವು ಕಾಣುವುದೆಲ್ಲ ಸತ್ಯ! ಉಳಿದ್ದಿದ್ದೆಲ್ಲ ಮಿಥ್ಯ” ಎಂದು ಮರುಳ ಸಿದ್ಧಯ್ಯ ಸ್ವಾಮಿಗಳು ಅಂದರು.

ಮೃತ್ಯುಂಜಯ ಎದ್ದು ನಿಂತು- “ಸ್ವಾಮಿಗಳೆ ಯಾವುದು ಸತ್ಯವಲ್ಲ! ಸತ್ಯವಿದ್ದರೆಲ್ಲವೇ ಸತ್ಯವೆನ್ನುವುದು! ಮಿಥ್ಯವನ್ನು ನಾವು ಸತ್ಯವೆಂದು ನಂಬಿದ್ದೇವೆ. ಕಾಣುವುದೆಲ್ಲ ಮಿಥ್ಯ ಸತ್ಯ ಇಲ್ಲದೇ ಇಲ್ಲ…” ಎಂದು ವಾದ ಮಾಡುತ್ತಾ ನಿಂತ.

ರಮಣ ಮಹರ್ಷಿಗಳು- “ಶಿಷ್ಯ ಮೃತ್ಯುಂಜಯ ಕೇಳಿದಕ್ಕೆ ಮಾತ್ರ ಉತ್ತರಿಸು ನೀ ಕುಳಿತುಕೋ.” ಎಂದು ಮೃತ್ಯುಂಜಯನ ಮೇಲೆ ಸಿಟ್ಟಾದರು.

ಸೀನ ಎದ್ದು ನಿಂತು “ಸ್ವಾಮಿಗಳೆ ಸತ್ಯ ಮಿಥ್ಯ ಎರಡು ಕಣ್ಣಿಗೆ ಹತ್ತಿರ. ಯಾವುದು ಸತ್ಯ ಯಾವುದು ಮಿಥ್ಯ ಕಣ್ಣಿಗೆ ತಿಳಿಯದ ಸಂಗತಿಗಳು” ಎಂದ.

“ಸ್ವಾಮಿಗಳೆ… ನಾನು ಮೃತ್ಯುಂಜಯ ಹಾಗೂ ಸೀನ ಹೇಳಿದ್ದನ್ನೇ ಅನುಮೋದಿಸುತ್ತೇನೆ. ನನಗೇನು ಹೆಚ್ಚಿಗೆ ತಿಳಿಯದು” ಎಂದು ವಲಿಯ ಹೇಳಿ ಕುಳಿತ.

ಬಸಪ್ಪಯ್ಯ ಎದ್ದು ನಿಂತು- “ಸ್ವಾಮಿಗಳೆ ನನಗೇನು ಹೊಳೆಯದು. ನನಗೆ ಎರಡು ದಿನ ಕಾಲಾವಕಾಶ ನೀಡಿದಲ್ಲಿ ಅಧ್ಯಯನ ಮಾಡಿ ಬಂದು ಅರುಹುವೆ” ಎಂದ.

ಅಲ್ಲಿದ್ದ ರಾಜ, ಕೊಟ್ರಯ್ಯ ತಲೆ ತಗ್ಗಿಸಿ- “ಮೌನಂ ಸರ್ವತ್ರ ಸಾಧನಂ…” ಎಂದು ಕುಳಿತ್ತಿದ್ದರು.

“ಅಯ್ಯಾ ಶಿಷ್ಯರೆ.. ನಾ ಎನ್ನುವ ಪ್ರಜ್ಞೆಯಷ್ಟೇ ಸತ್ಯಾಸ್ಯ ಸತ್ಯ! ಉಳಿದಿದ್ದೆಲ್ಲ ಮಿಥ್ಯಸ್ಯಾ ಮಿಥ್ಯ… ನೋಡಿ ಎಷ್ಟು ಸರಳ ಸುಂದರವಾಗಿದೆ” ಎಂದು ರಮಣ ಮಹರ್ಷಿಗಳು ಅಂದರು.

ಅಲ್ಲಿಗೆ ಅಂದಿನ ಕಾರ್ಯಕ್ರಮವು ಮುಗಿಯಿತು. ಶಿಷ್ಯರೆಲ್ಲ ಎದ್ದು ಹೊರಟರು. ಸ್ವಾಮಿಗಳು ಧ್ಯಾನಸ್ಥರಾದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...