Home / ಕವನ / ಕವಿತೆ / ಮನಸೂರಿ

ಮನಸೂರಿ

ಡೆಹರಾಡೂನಿನ ತಪ್ಪಲ ಸೀಮೆಯ
ನೇರುತ ಮುಂದಕೆ ತಳೆಯುತಿರೆ
ದರಿಕಂದರಗಳ ಬನಸಿರಿ ಸುರಿಮಳೆ
ಬೆಳೆಸಿನ ಹೊಲಗಳ ಕಾಣುತಿರೆ
ಕನಸಿಗೆ ಕಾಣಿಸಿ ಕವನವ ಕಲಿಸುವ
ಮನಸಿನ ಮೈಸಿರಿ ಮುಂಚುತಿರೆ
ತನುವನು ಚಣಚಣ ತೊರೆಯುತ ಮನವೇ
ಹಿಮಗಿರಿ ಸೀಮೆ ಮುಸುಕುತಿದೆ
ಕಾಣುವೆನೊಂದೆಡೆ ಕೆಂಪಿನ ಗಿರಿಗಳ
ತರುಗಳ ವಿರಹಿತ ಮುಂದಲೆಯ
ಕಾಣುವೆ ಕಂದರದಿಂಬಿನ ಗಿರಿಗಳ
ತರುಗಳ ಪೂರಿತ ವನಸಿರಿಯ
ಪಾವನ ಗಂಗೆಯ ಜನ್ಮಸ್ಥಳದಿಂ
ಕೇದಾರೇಶ್ವರ ಸೀಮೆಯಲಿ
ಬೆಳ್ಳಿಯ ಬೆಟ್ಟದ ಬೆಳ್ಗೊಡೆ ಕಾಣುತ
ಕನಕರಿಸುತ ನಾ ಮೈ ಮರೆದೆ
ಕಣ್ಣಾಲಿಗಳಂ ಸೋರುವ ಸೀರ್ಪನಿ
ಸೀಮೆಯ ಮೀರಿತು ತಾಪದಲಿ
ಕಣ್ಮನಮೆಲ್ಲವು ನುಣ್ಮರೆಯಾದವು
ಹೃದಯದ ದೇವನ ಸೀಮೆಯಲಿ
ಏಣಿನ ಮೇಲೆಯು ಓರೆಗಳಲ್ಲಿಯು
ಪವಡಿಸಿ ಆಡುವ ಮನೆಗಳವು
ಆಟವಿಕನು ತಾ ಮಾಟದೆ ಗೆಯ್ದಿಹ
ಕೋಟೆಯ ಕೊತ್ತಳ ಕೂಟಗಳೊ !!
ಅರಸರ ಸಿರಿಗರ ಸಿರಿಸೆರೆಮನೆಗಳು
ದರಿಕಂದರದಲಿ ತೇಲುತಿವೆ
ಪುರುಷ ವಿವರ್ಜಿತ ಸದನಗಳೆಲ್ಲವು
ಕುಳಿರಿನ ಕಾಲವ ಕೂಗುತಿವೆ
ಕೆಳಗಿನ ಸೀಮೆಯ ಸೇರಲು ಧನಿಕರ
ತಂಡವು ಮಿಂಡೆದ್ದೋಡುತಿದೆ
ಸಾರುತ ಬರುತಿಹ ಕುಳಿರಿನ ಕಾಟದೆ
ಜಾರುತಲೊಯ್ಯನೆಯೋಡುತಿದೆ
ಪಾತಾಳದ ಬಿಳಿ ಮಿಶನರಿ ಜನಗಳು
ಭೂತಳ ಶಿಖರದೆ ಚರ್ಚುಗಳ
ಯಾತಕೆ ಕಟ್ಟಿಹರೆಂಬುದ ಕಾಣುವೆ
ಋಷಿಮುನಿ ಜನಗಳ ನಾಡಿನಲಿ
೧೦
ಭಾರತ ವರ್ಷದ ಋಷಿಮುನಿ ಜನಗಳ
ವೈದಿಕ ಧರ್ಮವ ತವೆ ತವಿಸೆ
ಪಾತಾಳದ ವಿಷಭೋಗಿಗಳೆಲ್ಲವು
ನಂಜಿಟ್ಟಾಡುವ ನೆಲವನೆಯೊ
೧೧
ಬೀದಿಯೊಳಲೆಯುತ ಮೋದವ ಬೀರುವ
ಪಾಶ್ಚಾತ್ಯರುಗಳ ಪಸುಳೆಯರ
ನಲಿನಲಿದಾಡುವ ನಗೆಮಗನೋಡಲು
ಪ್ರಾಣವು ವೀಣೆಯೊಳಾಡುತಿದೆ
೧೨
ಆಂಗ್ಲರ ನಾಡಿನ ವಿದುಷಿಯರೆನಿಬರೊ
ಬಾಲಕ ವಲಯವನಾವರಿಸಿ
ಮೇಳದೆ ತಾಳದೆ ತಲೆಯತ್ತಲೆಯುವ
ಸೊಬಗಿನ ಸೊಂಪದು ಸೂಸುತಿದೆ
೧೩
ಆಂಗ್ಲ ವಿದುಷಿಯನು ಶಾಲೆಯ ಕೇಳಲು
ಸಿಟ್ಟಿಗೆ ಒಂದಳು ಸಿಡಿದೆದ್ದು
ದೊರೆತನ ಗರುವಿಕೆ ಗುರುತನದಲ್ಲಿಯು
ನೆರೆ ಸೆರೆಗೊಂಬುದು ಧರೆಯಲ್ಲಿ
೧೪
ಆರ್ಯಾವರ್ತದ ಮಹಿಳೆಯರೆನಿಬರೊ
ವೈದಿಕಕಾಲದ ಕುರುಹಿಟ್ಟೊ
ಸರಳತನದ ಸಾಮ್ರಾಜ್ಯವ ಸೂಸುತ
ಬರೆಹವ ಬರೆಸುತ ಒರಿಸುವರು
೧೫
ಚೀನೀ ಜನರೇ ಗಟ್ಟಿಗರೆಂಬೆನು
ಕಾಯದ ಕಷ್ಟವ ತಡೆವುದಕೆ
ಬೆನ್ನೊಳು ಹೊರೆಯನು ಧರಿಸುತ ಶಿಖರವ
ನೇರುವುದು ನೋಡುವೆನು
೧೬
ತಲೆಯಾವರಿಸಿಹ ಗುರ್ಖಜನಂಗಳ
ಬೆಂಕಿಯ ಬಿದಿರಗಿಷ್ಟಿಕೆಯ
ಹೊಲಬನು ತಿಳಿಯಲು ತಲೆಯಲ್ಲಾಡಿಸಿ
ಕೇಳಿದೆ ಪಥಿಕರ ಕೌತುಕದೆ
೧೭
ನಗೆನಗೆಯಾಡುತ ಮೊಗವನು ನೋಡುತ
ತಿಳಿಯದ ಮಾತಿ೦ ಮೂದಲಿಸಿ
ಸಾಗುತ ಕರೆಯುವ ಪಥಿಕರ ನೋಡುತ
ಹೊರಳಿದೆ ಹೋಗುವ ದಿಶೆಗಾಗಿ
೧೮
ಹಿಂದು ಜನಾಂಗದ ಜಾತಿಗಳೆಲ್ಲವು
ಸ೦ದಿದ ನಿಯೋಗ ನಿಯಮವನು
ಇಂದಿಗು ಪಾಲಿಪ ಪರಿಯನು ತಿಳಿಯುತ
ವಿಸ್ಮಿತನಾದೆನು ಮನದಲ್ಲಿ
೧೯
ಓಡುತ ನೋಡಿದೆ ಕುರಡಿ ಬಾಝಾರವ
“ಸೆವಿಯರ ಹೊಟಲಿನ” ಮಾಟವನು
ಸೈನಿಕ ವೈದ್ಯಾಲಯವನ್ನು ನೋಡಿದೆ
ಮಾನವ ಮಮಕಾರಂಗಳನು
೨೦
ಓಡುತ ಡೆಹರಾಡೂನಿನ ಬೀಡಿಗೆ
ಸಾರಿದೆ ಸಂಧ್ಯಾಸಮಯದಲಿ
ಪಡುವಣ ನಿಟ್ಟದು ನೆರೆ ಸೆರೆಗೊಂಡಿತು
ತಪ್ಪಲದೊಪ್ಪಿನ ಸೀಮೆಯಲಿ
೨೧
ಸಂಧ್ಯಾಕಾಲದ ಸಂಜೆಯಗೆಂಪಿನ
ರಮಣೀಯತೆಯಾ ಒನಪನ್ನು
ಕಮಲಜ ಸೃಷ್ಟಿಯ ಕಮನೀಯತೆಯಾ
ಕೋಡಿನ ಕಲ್ಲೆನೆ ಕಾಣುತಿಹೆ
೨೨
ಯಾವುದು ನೋಡಲೊ ಯಾವುದು ಬಿಡಲೋ
ನೋಡುವದೆಲ್ಲವು ನೋಟವದು
ದೇವನ ಮಹಿಮೆಯ ಕಣ್ದೆರೆ ತೋರುವ
ಹಿಮಗಿರಿ ಸೀಮೆಯೆ ಮೋಕ್ಷವದು
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...