Home / ಕವನ / ಕೋಲಾಟ / ರಣ್ಣದಾ ಕೋಲು ಮೇಲೆಣಿರೋ

ರಣ್ಣದಾ ಕೋಲು ಮೇಲೆಣಿರೋ

ಕೋಲು ಕೋಲಣಿ ಕೋಲೇ ರಣ್ಣದಾ ಕೋಲು ಮೇ ಲಣಿರೋ || ಪಲ್ಲವಿ ||
ಗದ್ಯ || ನಿನಗೆ ಯೆಲ್ಲಾಯ್ತೊ ಬಾವಾ, ನಮ್ಗ್ ಕಂಟ್ರ ಕೋಣಾಯ್ತೊ ಬಾವಾ
ಯೆಂತಾ ಬಂದ್ರೋ ಗುಮಟಿಸಬ್ದಾಗಿ ಬಂದ್ರು

ಗುಮಟೆನಾದ್ರೂ ಹೊಡಿರೋ
ಹಕ್ಕೀಗೆ ಹಣ್ಣಿನಾಸೆ ನುಕ್ಕಿಗದ್ದೆಗೆ ನೀರಾಸೆ
ಕೋಲು……………. || ೧ ||

ಹಕ್ಕೀಗೆ ಹೆಗೆಯಾಕೋ ಕೋಡಗೆ ನೆಗೆಯಾಕೋ?
ಕೋಡನ ಕಯ್ಯೀಗೆ ಬಳೆಯಾಕೊ ರಣ್ಣದಾ
ಕೋಲು ……………. || ೨ ||

ಹಕ್ಕೀಗೆ ಹಲ್ಲಿಲ್ಲ ಕೆಪ್ಪೇಗೆ ಕೆಮಿಯಿಲ್ಲ
ಹತ್ತೂ, ಕಾಲೆಸಡೀಗೆ ತಲೆವಿಲ್ಲ ರಣ್ಣದಾ
ಕೋಲು …………….. || ೩ ||

ಬಾಳೆಯ ಸುಳಿ ಚೆಂದ ಸೂಳೇರ ತಲೆಚೆಂದ
ಕಂಚೂಗಾರ ಹುಡುಗೀ ಮೊಲೆ ಚೆಂದ ರಣ್ಣದಾ
ಕೋಲು …………….. || ೪ ||

ಬಸಳೇಗೆ ಮುಳ್ಳಿಲ್ಲ ಬಾಳೇಗೆ ಕೆಂಚಿಲ್ಲ
ಬಾಳೆಗೆ ಮುಂಚಿನ್ನಾಗೆ ಹೆಡೆವಿಲ್ಲ ರಣ್ಣದಾ || ೫ ||

ಕೋಲು ಕೋಲಣಿ ಕೋಲೇ ರಣ್ಣದಾ
ಕೋಲು ಮೇಲಣಿರೋ || ೬ ||
*****
ಹೇಳಿದವರು: ಕೋಡಿಗದ್ದೆ ಕುವರಿ ಮರಾಟಿಗಳು, ಕೋಡಿಗದ್ದೆ ಶ್ರೀ ರಾಮಭಟ್ಟರ ಸಂಗಡ ಅವರ ಕೇರಿಗೆ ಹೋಗಿ ಬರೆದು ಕೊಂಡಿದ್ದು.

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...