Home / ಬಾಲ ಚಿಲುಮೆ / ಕವಿತೆ / ವಿದ್ಯೆ ಕಲಿತ ರಕ್ಕಸ

ವಿದ್ಯೆ ಕಲಿತ ರಕ್ಕಸ

ಹಿತ್ತಲಿಂದ ಬರುತಲೊಮ್ಮೆ
ಬೆಚ್ಚಿ ಬಿದ್ದೆನು
ದೂರದಲ್ಲಿ ಕಪ್ಪು ಕಪ್ಪು
ಏನೋ ಕಂಡೆನು

ತಲೆಯ ಮೇಲೆ ಕೋಡು
ಕೋರೆಗಳಿವೆ ಜೋಡು
ವಿಕಾರವಾದ ಮುಖ
ಉದ್ದುದ್ದನೆಯ ನಖ

ಮಾರಿಗೊಂದು ಹೆಜ್ಜೆ
ತಿನುವ ಮಾಂಸ ಮಜ್ಜೆ
ಝಲ್ಲೆಂದಿತು ಎದೆಯು
ಬಿರಿಯ ಬಾರ್ದೆ ಭುವಿಯು

ಆನೆಗಿಂತ ಎತ್ರ
ಅವನ ಆ ಗಾತ್ರ
ನಡುಗುತ್ತಲೆ ನಿಲುವುದ್ಹೇಗೆ
ಅಯ್ಯೋ ಬಂದ ಹತ್ರ

ಇವನೆ ಇವನೆ ರಕ್ಕಸ
ಏರಿಳಿಯಿತು ಪುಪ್ಪಸ
ರಾಮ, ಭೀಮ, ಹನುಮರೆಲ್ಲ
ಕೊಂದ ರಕ್ಕಸ

ಓಡಲೆಂದು ನೋಡಿದೆ
ಕಾಲು ಮರವೆ ಆಗಿದೆ
ಕೂಗಲೆಂದು ಬಾಯಿತೆರೆದೆ
ಅದೂ ಹೊಲೆದು ಕೊಂಡಿದೆ

ಗಣಪನನ್ನು ನೆನೆದೆ
ಮೇಷ್ಟ್ರರನ್ನು ಕರೆದೆ
ಬರಲಿಲ್ಲ ಯಾರು ಪಾಲಿಗೆ
ಮಗನಿಲ್ಲ ನನ್ನತಾಯಿಗೆ

ದಡಬಡನೆ ಬಂದೆಬಿಟ್ಟ
ಮುಷ್ಟಿಯಲ್ಲಿ ಎತ್ತಿಬಿಟ್ಟ
ಮುದ್ದು ಮರಿಯೆ ಎಂದ
ಕೊಟ್ಟ ಮುತ್ತನೊಂದ

ಹೆದರಬೇಡ ನಡುಗಬೇಡ
ಕೇಳೋ ಇಲ್ಲಿ ಪೋರ
ತಿನ್ನೋದಿಲ್ಲ ನಿನ್ನ ನಾನು
ಗೆಳೆಯ ನೀನು ಬಾರ

ಗೆಳೆಯನಲ್ಲ ನೀನು
ಹೆದರಿಹೆನು ನಾನು
ನೀನು ನರ ಭಕ್ಷಕ
ನಾನು ಶಾಲಾ ಬಾಲಕ

ನಾನು ಶಾಲೆಗೆ ಬರುವೆ
ನಿನ್ನ ಜೊತೆಗೆ ಆಡುವೆ
ಬಿಸಿಊಟವನ್ನೆ ಮಾಡುವೆ
ಆಪ್ ಎಂದು ತೇಗುವೆ

ಬೇಡ, ಬೇಡ ರಕ್ಕಸ
ನನ್ನ ಕಾಡಬೇಡ
ನೀನು ಜೊತೆಗೆ ಬಂದರೆ
ನನಗೆ ಭಾರಿ ತೊಂದರೆ

ತಂಟೆ ಮಾಡೆನು
ಮಾಂಸ ಮಜ್ಜೆ ಕೇಳೆನು
ಗೆಳೆಯನಲ್ವೆ ನೀನು
ಪಪ್ಪಿ ಕೊಡುವೆ ನಾನು

ಶಾಲೆಗೆ ಬಂದ್ರೆ ನೀನು
ಪಾಠಕಲಿಯ ಬೇಕು
ಹೋಂವರ್ಕ ಮಾಡಬೇಕು
ಅಲ್ಲಿ ಏಟು ತಿನ್ನಬೇಕು

ಪಾಠ ಗೀಟ ಓದುವೆ
ಮಗ್ಗಿ ಹಾಡು ಹೇಳುವೆ
ಏಟು ಕೊಡಲು ಮೇಷ್ಟ್ರು ಬಂದ್ರೆ
ಅವರನ್ನೆ ಮಾಯ ಮಾಡುವೆ

ನರ-ರಾಕ್ಷಸ ಒಂದಾದರು
ಸಂತಸದೀ ಕುಣಿದರು
ಶಾಲೆ ಕಡೆಗೆ ನಡೆದರು
ಗೇಟು ತೆರೆದು ಬಿಟ್ಟರು

ರಕ್ಕಸನ ಕಂಡರು
ಮಕ್ಕಳು ಬೆರಗಾದರು
ಚಿಳ್ಳೆ ಪಿಳ್ಳೆ ಎಲ್ಲರೂ
ಚೆಡ್ಡಿ ತೋಯಿಸಿಕೊಂಡರು

ಹೆದರಬೇಡಿ ಮಕ್ಕಳೆ
ಮುದ್ದು ಮುದ್ದು ಹೂಗಳೆ
ನಾನು ನಿಮ್ಮ ತಿನ್ನೆನು
ಆಗುವೆ ನಿಮ್ಮ ಗೆಳೆಯನು

ಮಕ್ಕಳೆಲ್ಲ ನಕ್ಕರು
ಹತ್ತಿರಕ್ಕೆ ಬಂದರು
ಕೈಯ ಹಿಡಿದು ಎಳೆದರು
ಭಾರಿ ಖಷಿಯಪಟ್ಟರು

ಮಾಸ್ತರ್ ಮಾತು ಮರೆತರು
ಶಿಕ್ಷಕಿ ಶಿಲೆಯಾದರು
ಕನಸೆ ಇರಬೇಕೆಂದುಕೊಂಡು
ಕೈಯ ಚಿವುಟಿಕೊಂಡರು

ಪುರದ ಜನರು ನೆರೆದರು
ಬಡಿಗೆ ಹಿಡಿದು ಬಂದರು
ರಕ್ಕಸನ ಕಂಡ ಅವರು
ಅವಾಕ್ಕಾಗಿ ನಿಂತರು

ಕೇಳಿ ಪುರದ ಜನಗಳೇ
ಇಲ್ಲ ನನ್ನಿಂದ ತೊಂದರೆ
ಬೇರೆ ಏನು ಬಯಸೆನು
ವಿದ್ಯೆ ಕಲಿಯ ಬಂದೆನು

ಬಡಿಯ ಬೇಡಿ ನನ್ನ
ತಿನ್ನುವುದಿಲ್ಲ ನಿಮ್ಮ
ವಿದ್ಯೆ ಕಲಿಸಿ ನನಗೆ
ನಾನು ಶರಣು ನಿಮಗೆ

ಟೀಚರ್ ಒಪ್ಪಿಬಿಟ್ಟರು
ಶಾಲೆಯೊಳಗೆ ಕರೆದರು
ಸ್ಟೇಟು ಬಳಪ ಕೊಟ್ಟರು
ಅಕ್ಷರ ಕಲಿಸಿ ಬಿಟ್ಟರು

ವಿದ್ಯೆ ಕಲಿತ ರಕ್ಕಸ
ವಿರೂಪ ಕಳಚಿ ಬಿಟ್ಟನು
ಕೋರೆ, ದಾಡೆ, ಕೋಡು ಎಲ್ಲ
ಮಾಯವಾಗಿ ಬಿಟ್ಟವು.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...