Home / ಲೇಖನ / ಇತರೆ / ಮಾಟಗಾತಿಯರ ಕತೆ

ಮಾಟಗಾತಿಯರ ಕತೆ

ಮುದ್ದು ಪುಟಾಣಿಗಳೆ.. ನೀವೆಲ್ಲ ಮಾಟಗಾತಿಯರ ಬಗ್ಗೆ ಈಗಾಗಲೇ ಓದಿರಬಹುದು. ಕಂಡಿರಲೂಬಹುದು, ಕೇಳಿರಲೂ ಬಹುದು.

ನೀವೆಲ್ಲ.. ಜಾರ್‍ಖಂಡ ರಾಜ್ಯದ ಹೆಸರನ್ನು ಕೇಳಿರಬಹುದು. ಅಲ್ಲಿ ರಾಂಚಿ ಎಂಬ ಪಟ್ಟಣವಿದೆ. ಅಲ್ಲೇ ಸಮೀಪದಲ್ಲೇ ಮಂದರ್ ಎಂಬ ಪುಟ್ಟ ಗ್ರಾಮವಿದೆ. ಇದು ರಾಂಚಿಯಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಅಂದರೆ ಅದೊಂದು ಕುಗ್ರಾಮ ತೀರಾ ಹಿಂದುಳಿದ ಸಣ್ಣದೊಂದು ಹಳ್ಳಿ.

ಅಲ್ಲಿ ಒಬ್ಬರಲ್ಲ! ಐದು ಜನ ಮಾಟಗಾತಿಯರು…! ಅಬ್ಬಾ! ಒಬ್ಬರಿದ್ದರೆ ತಡೆಯಲಾಗುವುದಿಲ್ಲ. ಇನ್ನು ಐದು ಜನರೆಂದರೆ ಜನ ಹೌಹಾರಿ ಬಿಟ್ಟರು.

ಮಂದರ್ ಗ್ರಾಮದ ತುಂಬೆಲ್ಲ ಇವರದೇ ಉಪಟಳ, ಮನೆಯಲ್ಲಿನ ಹಾಲು ಇಂಗಿ ಹೋಗುವುದು. ಮಕ್ಕಳಿಗೆ ಸುಸ್ತಾಗಿ ಸಾಯುವುದು, ದೊಡ್ಡವರಿಗೆ ಕೈಕಾಲು ಬಿದ್ದೋಗುವುದು. ಮನೆಯಲ್ಲಿನ ಜೀವ ದನಗಳು ಸಾಯುವುದು. ಒಂದೇ ಎರಡೇ ನಿತ್ಯ ಹತ್ತಾರು ಜನರಿಗೆ ಈ ಮಾಟಗಾತಿಯರು ಮಾಟ ಮಾಡಿಸಿದ್ದೇ ಮಾಡಿಸಿದ್ದು!

ಇನ್ನು ಹೆಣ್ಣು ಮಕ್ಕಳಿಗೆ ಮದುವೆಯಾಗದಂತೆ, ಗಂಡು ಅವರ ಮನೆಗೆ ಬರದಂತೆ ಮಾಡುವುದು, ಋತುಮತಿಯಾಗದಂತೆ ಮಾಡುವುದು, ಹುಚ್ಚಿಯಾಗಿಸುವುದು, ಮನೆಬಿಟ್ಟು ಓಡಿ ಹೋಗುವಂತೆ, ಮನೆಯಲ್ಲಿ ಯಂತ್ರ, ಮಂತ್ರ, ನಿಂಬೆಹಣ್ಣು ಗೊಂಬೆ ಮಾಡಿ ಇಡುವುದು! ನಿತ್ಯ ಜಗಳ, ಹೊಡೆದಾಟ ಬಡಿದಾಟ ನ್ಯಾಯಾ ಪಂಚಾಯ್ತಿ ಬೆಳೆ ಹಾನಿ ನೀರಿಲ್ಲದಂತೆ ಮಾಟ ಮಾಡಿಸುವುದು ಸಾಗಿಯೇ ಇತ್ತು.

ಜನರು ರೋಸಿ ಹೋಗಿದ್ದರು. ಗ್ರಾಮದಲ್ಲಿ ಉಸಿರು ಗಟ್ಟಿಸುವ ವಾತಾವರಣವಿತ್ತು.

ದಿನಾಂಕ ೦೭-೦೮-೨೦೧೫ರಂದು ಶುಕ್ರವಾರ ತಡರಾತ್ರಿ ಮಾಟ ಮಾಡುತ್ತಿದ್ದ ಐವರ ಮನೆಗೆ ನುಗ್ಗಿದ ಗ್ರಾಮಸ್ಥರು ಅವರನ್ನು ಧರಧರನೆ ಹೊರಗೆ ಎಳೆದು ದೊಣ್ಣೆ, ಕಲ್ಲು, ಕಬ್ಬಿಣದ ರಾಡ್, ಬಡಿಗೆ ಕಟ್ಟಿಗೆಗಳಿಂದ ನಾಯಿಗೆ ಬಡಿದಂತೆ ಚೆಂದ ಮಾಡಿ ಬಡಿದು ಬಡಿದು ಕೊಂದಿದ್ದಾರೆ.

ದಿನಾಂಕ ೦೮-೦೮-೨೦೧೫ರಂದು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಆ ಐವರ ಶವಗಳನ್ನು ವಶಕ್ಕೆ ಪಡೆದುಕೊಂಡು ಶವ ಪರೀಕ್ಷೆಗೆ ಕಳಿಸಿದರು.

– ಹೀಗೆ ಜಾರ್‍ಖಂಡ್‌ನಲ್ಲಿ ಒಟ್ಟು ಈಗಾಗಲೇ ೭೫೦ ಜನ ಮಹಿಳೆಯರನ್ನು ಮಾಟಗಾತಿಯರೆಂಬ ಆರೋಪ, ಶಂಕೆ, ಅನುಮಾನಾಸ್ಪದದ ಮೇಲೆ, ಹೀಗೆ ಕೊಂದಿರುವರು.

ನಮ್ಮಲ್ಲಿ ಹಳ್ಳಿಗಳಲ್ಲಿ – ಪಟ್ಟಣಗಳಲ್ಲಿ – ಹೀಗೆ ಮಾಟಗಾರರು ಮಾಟಗಾತಿಯರಿದ್ದಾರೆ! ಅವರ ಬಗ್ಗೆ ಪೊಲೀಸ್ಸರಿಗೆ ದೂರು ನೀಡಬಹುದಾಗಿದೆ. ಸುಮ್ಮನೆ ನೋಡಿ, ಕೇಳಿ, ಓದಿ ಸುಮ್ಮನಿರಬೇಡಿ…
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...