Home / ಲೇಖನ / ಇತರೆ / ಗಿಳಿಯ ಪುಣ್ಯ

ಗಿಳಿಯ ಪುಣ್ಯ

ಸುಮಾರು ಇನ್ನೂರು ವರ್‍ಷಗಳ ಹಿಂದಿನ ಕಥೆಯಿದು. ಬಲು ಸುಂದರ ನಾಡು ಕೇರಳದ ಕೊಚ್ಚಿನ್‌ನಲ್ಲಿ ಒಬ್ಬ ನಂಬೂದಿರಿ ಪಾಡ್ ವಾಸವಾಗಿದ್ದ.

ಈತ ಸರಳ ಸಜ್ಜನ ಉದಾರಿ ದಯಾಪರ ಸೌಮ್ಯ ವ್ಯಕ್ತಿಯಾಗಿದ್ದ. ಈತ ಒಂದು ಸುಂದರವಾದ ಗಿಳಿಯೊಂದನ್ನು ಸಾಕಿದ್ದ. ಈ ಗಿಳಿಯೊಂದಿಗೆ ಮೂರು ಹೊತ್ತು ಮಾತನಾಡುವುದು, ಕಾಲ ಕಳೆಯುವುದು, ಆಟ ಆಡುತ್ತಾ ಕಾಲ ಕಳೆಯುತ್ತಿದ್ದ.

ಗಿಳಿಯು ಮಾತನಾಡುವುದನ್ನು ಕೇಳಿ, ಹಾಡುವುದನ್ನು ಕೇಳಿ ನಲಿನಲಿದಾಡುವುದನ್ನು ಕಂಡು, ಮನೆಯ ಯಜಮಾನನೇನು ನೆರೆಹೊರೆಯವರೂ ಗಿಳಿಯ ವರ್‍ತನೆಗೆ ಮಾರು ಹೋಗಿದ್ದರು.

ಗಿಳಿಯನ್ನು ಬಿಟ್ಟು ಮನೆಯವರು, ಮನೆಯವರನ್ನು ಬಿಟ್ಟು ಗಿಳಿಯು ಅರೆಘಳಿಗೆ ಇರುತ್ತಿರಲಿಲ್ಲ. ಗಿಳಿಗೆ ನಿತ್ಯ ಬಾಳೆಹಣ್ಣು, ದ್ರಾಕ್ಷಿ, ಸೇಬು, ಸೀಬೆ, ಸಪೋಟ, ಮೂಸಂಬಿ, ಕಿತ್ತಲೆ, ಮಾವು, ಹಲಸು…. ಹೀಗೆ ನಾನಾ ತರತರದ ಹಣ್ಣುಹಂಪಲು ನೀರು ಇತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಎಲ್ಲರೂ ನೋಡಿಕೊಳ್ಳುತ್ತಿದ್ದರು.

ಹೀಗಿರಲಾಗಿ… ಒಂದು ದಿನ ಕಳ್ಳಬೆಕ್ಕೊಂದು ಉಪಾಯ ಮಾಡಿ ಮುದ್ದಿನ ಸುಂದರವಾದ ಗಿಳಿಯನ್ನು ರಾತ್ರೋರಾತ್ರಿ ಕೊಂದು ತಿಂದುಬಿಟ್ಟಿತು. ಮನೆಯ ಯಜಮಾನ ನಂಬೂದಿರಿ ಪಾಡ್ ಮೊದಲುಗೊಂಡು ಮನೆಯ ಜನರೂ ನೆರೆಹೊರೆಯವರೂ ಅತ್ತರು. ಕಳ್ಳ ಬೆಕ್ಕನ್ನು ಜಗ್ಗ ಶಪಿಸಿದರು. “ಚೆಂದದಿ ಅಂದದಿ ಸಾಕಿದ್ದ ಗಿಳಿಯನ್ನು ಕಳ್ಳ ಬೆಕ್ಕಿಗೆ ಕೊಟ್ಟು ಬಿಟ್ಟೆವಲ್ಲಾ….?” ಎಂದು ಎರಡು ಮೂರು ದಿನ ರೋಧಿಸಿದರು.

ಆ ಗಿಳಿಯ ಹೆಸರಿನಲ್ಲಿ ಸಂತಾಪಸಭೆ ಜರುಗಿಸಿದರು. ಮೂರು ದಿನದ ತಿಥಿ, ಹಾಗೂ ಶ್ರಾದ್ಧವನ್ನು ಹಮ್ಮಿಕೊಂಡರು. ಶಾಸ್ತ್ರೋಕ್ತವಾಗಿ ಗಿಳಿಗೆ ವಿಧಿವಿಧಾನದಂತೆ ೧೬ ಜನ ಬ್ರಾಹ್ಮಣರಿಗೆ ಊಟ ಬಡಿಸಿದರು.

ಇದು ಪ್ರತಿ ವರ್‍ಷ ಗಿಳಿಯ ಹೆಸರಿನಲ್ಲಿ ಶ್ರಾದ್ಧ ಏರ್‍ಪಡಿಸಿ ಊಟ ಬಡಿಸುವ ಪರಂಪರೆ, ಸಂಪ್ರದಾಯ, ವಿಧಿವಿಧಾನ ಇಂದಿಗೂ ಮುಂದುವರೆದು ಕೊಂಡು ಬಂದಿದೆ.

ಗಿಳಿ ಶ್ರಾದ್ಧವನ್ನು ಇಂದಿಗೂ ಕೈಬಿಟ್ಟಿಲ್ಲ. ಈಗ ಎರಡು ಜನ ಬ್ರಾಹ್ಮಣರಿಗೆ ಮಾತ್ರ ಊಟ ಬಡಿಸುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವರು.

ಪ್ರಾಣಿ-ಪಕ್ಷಿ-ಮನುಷ್ಯರೆಲ್ಲ ಒಂದೇ! ಮಾನವೀಯ ಸಂಬಂಧ ಮುಖ್ಯ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...