ಮೊಟ್ಟೆ ಅಪಾಯಕಾರಿ ಎಂದು ಹೇಳುತ್ತಾರೆ

ಮೊಟ್ಟೆ ಅಪಾಯಕಾರಿ ಎಂದು ಹೇಳುತ್ತಾರೆ

ಅಶಕ್ತರಾದಾಗ ವೈದ್ಯರು ಮೊಟ್ಟೆಗಳನ್ನು ತಿನ್ನಲು ಹೇಳುತ್ತಾರೆ. ಮೊಟ್ಟೆಯಲ್ಲಿ ಜೀವಸತ್ವ ಇರುವುದರಿಂದ ಶಕ್ತಿವರ್‍ಧಕವೆಂದು ತಿಳಿಸುವ ವೈದ್ಯರ ಈ ಸಿಫಾರಸ್ ಈಗ ತಿರುಮರುವಾಗಿದೆ. ಜತೆಗೆ ಮೊಟ್ಟೆ ಮಾಂಸಾಹಾರಿ ಅಲ್ಲವೆಂಬ ಸತ್ಯವನ್ನು ಸಹ ತಲೆಕೆಳಗೆ ಮಾಡಿ ಇದೊಂದು ಮಾಂಸಾಹಾರಿಯೇ ಎಂದು ತಿರ್‍ಮಾನಿಸಲಾಗಿದೆ. ಮೊಟ್ಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ಪ್ರತಿಶತ ೨೫೦ ಮಿ ಗ್ರಾಂನಿಂದ ೩೦೦ ಮಿ ಗ್ರಾಂ ನಷ್ಟು ಕೊಲಸ್ಟರಾಲ್ ಸಂಗ್ರಹವಿದೆ. ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ನಾರಿನಂಶ ಮೊಟ್ಟೆಯಲ್ಲಿ ಇಲ್ಲವೇ ಇಲ್ಲ. ಹಾಗೆಯೇ ಶಕ್ತಿಯ ಉತ್ಪಾದನೆಗೆ ಅಗತ್ಯವಾಗಿ ಬೇಕಾದ ಕಾರ್‍ಬೋಹೈಡ್ರೆಟ್ ಮೊಟ್ಟೆಯಲ್ಲಿ ಇಲ್ಲ. ನಿಸರ್‍ಗದಲ್ಲಿ ಮೊಟ್ಟೆ ತಿನ್ನುವ ಪ್ರಾಣಿ ಮಾನವನ್ನೊಬ್ಬನೇ ಎಂದು ವಿಜ್ಞಾನಿಗಳು ಹೇಳುತ್ತಾರೆ ಡಾ| ಇನ್ನಾ ಎಂಬ ಆಹಾರ ವಿಜ್ಞಾನಿಗಳ ಪ್ರಕಾರ ಮೊಟ್ಟೆ ವಿಷ ಆಹಾರವೆಂದು ಹೇಳಲಾಗುತ್ತದೆ. ಆದ್ದರಿಂದ ಸಸ್ಯಮೂಲದ ಪ್ರೋಟೀನ್, ವಿಟಮಿನ್, ಕಾರ್‍ಬೊಹೈಡ್ರೆಟ್, ನಾರಿನಂಶ, ಕೊಬ್ಬು ಪ್ರಕೃತಿಯಲ್ಲಿ ಸಾಕಷ್ಟು ಇರುವಾಗ ಆರೋಗ್ಯವನ್ನು ಹಾಳು ಮಾಡುವ ಮೊಟ್ಟೆಗಳನ್ನು ಸೇವಿಸುವುದು ಅಪಾಯವೆಂದು ಈ ವಿಜ್ಞಾನಿಗಳು ತಿಳಿಸುತ್ತಾರೆ. ಮೊಟ್ಟೆಯ ಹೊರಕವಚದಲ್ಲಿ ಸು. ೧೫ ರಿಂದ ೨೦ ಸಾವಿರ ಸೂಕ್ಷ್ಮರಂಧ್ರಗಳಿರುತ್ತವೆ. ಮೊಟ್ಟೆ ಮರಿಯಾಗಲು ಈ ಸೂಕ್ಷ್ಮ ರಂಧ್ರದ ಮೂಲಕ ಆಮ್ಲಜನಕ ಪೂರೈಕೆಯಾಗುತ್ತದೆ. ೨೪ ಗಂಟೆಗಳಿಗೂ ಅಧಿಕ ಕಾಲ ಮೊಟ್ಟೆಗಳನ್ನು ಶೇಖರಿಸಿಟ್ಟರೆ ಬ್ಯಾಕ್ಟೀರಿಯಾಗಳು ಮೊಟ್ಟೆಯ ಒಳಮೈ ಪ್ರವೇಶಿಸಿ ತಿನ್ನುವವರಿಗೆ ಕೂಡಲೇ ಅಪಾಯ ತರಬಹುದೆಂದು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಗಸು
Next post ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…