Home / ಕವನ / ಕೋಲಾಟ / ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ
ಹೊತ್ತರೇಳು ಮೊದಲೇ ಲೆಳುವಾನೋ
ಹೊತ್ತೇಳೂ ಮುನ್ನೇ ಲೆದ್ದೇನೋ
ಕಯ್ಯು ಕಾಲು ಮೋರೆ ತೊಳೆದೇಲೋ
ಬಣ್ಣದೊಂದು ಚದರದ ಮೇನೇಲೋ
ಹೊನ್ನಿನ ಒಂದು ರಾಚೀ ಹೊಯ್ದಾನೋ
ಹೊನ್ನಿಗೊಂದು ರಾಶೀ ಹೊಯ್ದೊಲೇ
ಚಿನ್ನದ ಕೊಳಗ ತರವಾನೋ
ಬೆಳ್ಳಿಯ ಶಿದ್ದೇ ತರವಾನೋ
ಬೆಳ್ಳಿಯ ಶೀದ್ದೇ ತಂದೇಲೇ
ಹೊನ್ನಿನ ರಾಶೀಲಳೆದೇಲೇ
ಹೊನ್ನಳದೇ ದಣಿವೇಲಾಗಿತೋ
ಹೊನ್ನಳದೇ ದಣಿವೇ ಆದವ್ಯಾನೇ
ಯೇಳೂಪ್ಪರಗಿ ಶದರದ ಮೇಲೇಲೋ
ಬಣ್ಣದೊಂದು ವಲ್ಲಿ ಬಿಡಿಶ್ಯಾಲೋ
ಬಣ್ಣಗೊಂದು ವಲ್ಲಿ ಹಾಶೀಲೇ
ಮುಚ್ಚೋರಗೇ ಮಲಗೂತೈದಾನೋ
ಮುಚ್ಚೋರಗೇ ಮಲಗೂ ಶಮ್ಯದಲ್ಲಿ
ಚಿನ್ನದೊಂದು ಕೊಳಗ ತಲೆದಿಂಬು
ಬೆಳ್ಳಿಯ ಶಿದ್ದೆ ಬಗಲಲ್ಲೋ
ಬೆಳ್ಳಿತೊಂದು ಶಿದ್ದೆ ಬಗಲಲ್ಲೋ
ಮುಚ್ಚಿ ಹೊಡೆದೆ ಮಲಗೂತೈದಾನಲೋ
ಮುಚ್ಚಿ ಹೊಡದೆ ಸಮವಾದಲ್ಲೋ
ತೆಂಕಲ ದಿಕ್ಕಿನ ಗಾಳೆ ಕರೆದೇಲೋ
ಶುಕದಲ್ಲೇ ನಿದರೇ ಮಾಡುವಾಗೋ
ಏಳು ಜನ ನಂದನ ಗೋಪ್ಯವರು
ಗೋವಿಂದನ ಪಾದಾ ತಿಕ್ಕವಾರೋ
ಗೋವಿಂದನ ಪಾದಾ ತಿಕವಾಗೇ
ಸೂರ್‍ಯ ಮೂಡಿ ಉದಯಗ ಬಂದಾವೋ
ಸೂರ್‍ಯ ಮೂಡಿ ಉದಯಗ ಬರುವಾಗೋ
ಸೂರ್‍ಯ ಮೂಡಿ ಯಾಳೇ ಬಿಸಿಲೇಲೋ
ಗೋವಿಂದನ ಕಣ್ಣಿಗೈದಾವೋ
ಗೋವಿಂದನ ಕಣ್ಣೀಗೆಸೆವಾಗೋ
ಗೋವಿಂದಗೆ ಎಚ್ಚರಾದವೋ
ಗೋವಿಂದಗೆ ಎಚ್ಚರಾಗವಾಗೇ
ಬಡ ಜನರಿಗೆ ದಾನ ಮಾಡಲಿಲವೋ
ಬಡ ಜನರಿಗೆ ದಾನ ಕೊಡಲಿಲವೋ
ಬಡ ಜನರಿಗೆ ಪಡಿಯ ಅಳೆಲಿಲವೋ
ಆರು ತಾಸು ಮಜ್ಜಾನ ಬಿಶಲಲ್ಲೋ
ಗೋವಿಂದಗೆ ಪೂಜೆ ಮಾಡುವಾರೋ
ಗೋವಿಂದಗೆ ಪೂಜೆ ಮಾಡುವಾಗೇ
ಆರು ತಾಸು ಮಜ್ಜಾನಾ ಬಿಶಲಲ್ಲೋ
ಬಂದವಲೂ ಮಂಗನ ಗೊಲೇಯೋ
ಹಿಡಿದವರು ಶಾರೂಗಂಟೇಯೋ
ನುಡಿದವಲು ಶಾರಾ ಗಂಟೇಯೋ
ಗೋವಿಂದಗೆ ಪೂಜೆ ಮಾಡುನಾರೋ
ಗೋವಿಂದಗೆ ಪೂಜೇ ಮಾಡುವಾಗೇ
ಗಳಗೊಂದೇ ರೂಪಾ ತೋರ್ ಯಾನೋ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...