Home / ಕವನ / ಕೋಲಾಟ / ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ
ಹೊತ್ತರೇಳು ಮೊದಲೇ ಲೆಳುವಾನೋ
ಹೊತ್ತೇಳೂ ಮುನ್ನೇ ಲೆದ್ದೇನೋ
ಕಯ್ಯು ಕಾಲು ಮೋರೆ ತೊಳೆದೇಲೋ
ಬಣ್ಣದೊಂದು ಚದರದ ಮೇನೇಲೋ
ಹೊನ್ನಿನ ಒಂದು ರಾಚೀ ಹೊಯ್ದಾನೋ
ಹೊನ್ನಿಗೊಂದು ರಾಶೀ ಹೊಯ್ದೊಲೇ
ಚಿನ್ನದ ಕೊಳಗ ತರವಾನೋ
ಬೆಳ್ಳಿಯ ಶಿದ್ದೇ ತರವಾನೋ
ಬೆಳ್ಳಿಯ ಶೀದ್ದೇ ತಂದೇಲೇ
ಹೊನ್ನಿನ ರಾಶೀಲಳೆದೇಲೇ
ಹೊನ್ನಳದೇ ದಣಿವೇಲಾಗಿತೋ
ಹೊನ್ನಳದೇ ದಣಿವೇ ಆದವ್ಯಾನೇ
ಯೇಳೂಪ್ಪರಗಿ ಶದರದ ಮೇಲೇಲೋ
ಬಣ್ಣದೊಂದು ವಲ್ಲಿ ಬಿಡಿಶ್ಯಾಲೋ
ಬಣ್ಣಗೊಂದು ವಲ್ಲಿ ಹಾಶೀಲೇ
ಮುಚ್ಚೋರಗೇ ಮಲಗೂತೈದಾನೋ
ಮುಚ್ಚೋರಗೇ ಮಲಗೂ ಶಮ್ಯದಲ್ಲಿ
ಚಿನ್ನದೊಂದು ಕೊಳಗ ತಲೆದಿಂಬು
ಬೆಳ್ಳಿಯ ಶಿದ್ದೆ ಬಗಲಲ್ಲೋ
ಬೆಳ್ಳಿತೊಂದು ಶಿದ್ದೆ ಬಗಲಲ್ಲೋ
ಮುಚ್ಚಿ ಹೊಡೆದೆ ಮಲಗೂತೈದಾನಲೋ
ಮುಚ್ಚಿ ಹೊಡದೆ ಸಮವಾದಲ್ಲೋ
ತೆಂಕಲ ದಿಕ್ಕಿನ ಗಾಳೆ ಕರೆದೇಲೋ
ಶುಕದಲ್ಲೇ ನಿದರೇ ಮಾಡುವಾಗೋ
ಏಳು ಜನ ನಂದನ ಗೋಪ್ಯವರು
ಗೋವಿಂದನ ಪಾದಾ ತಿಕ್ಕವಾರೋ
ಗೋವಿಂದನ ಪಾದಾ ತಿಕವಾಗೇ
ಸೂರ್‍ಯ ಮೂಡಿ ಉದಯಗ ಬಂದಾವೋ
ಸೂರ್‍ಯ ಮೂಡಿ ಉದಯಗ ಬರುವಾಗೋ
ಸೂರ್‍ಯ ಮೂಡಿ ಯಾಳೇ ಬಿಸಿಲೇಲೋ
ಗೋವಿಂದನ ಕಣ್ಣಿಗೈದಾವೋ
ಗೋವಿಂದನ ಕಣ್ಣೀಗೆಸೆವಾಗೋ
ಗೋವಿಂದಗೆ ಎಚ್ಚರಾದವೋ
ಗೋವಿಂದಗೆ ಎಚ್ಚರಾಗವಾಗೇ
ಬಡ ಜನರಿಗೆ ದಾನ ಮಾಡಲಿಲವೋ
ಬಡ ಜನರಿಗೆ ದಾನ ಕೊಡಲಿಲವೋ
ಬಡ ಜನರಿಗೆ ಪಡಿಯ ಅಳೆಲಿಲವೋ
ಆರು ತಾಸು ಮಜ್ಜಾನ ಬಿಶಲಲ್ಲೋ
ಗೋವಿಂದಗೆ ಪೂಜೆ ಮಾಡುವಾರೋ
ಗೋವಿಂದಗೆ ಪೂಜೆ ಮಾಡುವಾಗೇ
ಆರು ತಾಸು ಮಜ್ಜಾನಾ ಬಿಶಲಲ್ಲೋ
ಬಂದವಲೂ ಮಂಗನ ಗೊಲೇಯೋ
ಹಿಡಿದವರು ಶಾರೂಗಂಟೇಯೋ
ನುಡಿದವಲು ಶಾರಾ ಗಂಟೇಯೋ
ಗೋವಿಂದಗೆ ಪೂಜೆ ಮಾಡುನಾರೋ
ಗೋವಿಂದಗೆ ಪೂಜೇ ಮಾಡುವಾಗೇ
ಗಳಗೊಂದೇ ರೂಪಾ ತೋರ್ ಯಾನೋ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...