Home / ಕವನ / ಕವಿತೆ / ಯೌವನ

ಯೌವನ

ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ
ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು
ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧||

ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ
ಪುರುಷನ ಹೃದಯವು ಅದನ್ನು ಕಾಣುತ
ನವಿಲೊಲು ಕುಣಿಯುತಿದೆ ||೨||

ಕಣ್ಣಂಚಿನ ಆ ಮಿಂಚೇನೋ ಅದು
ಹಣ್ಣಿಗೆ ಬಂದಿಹ ಹೊಂಚೇನೊ
ಒಲುಮೆಯ ರಸವನು ಸುರಿಸುತ ಹರಿಸುತ
ಇನಿಯನ ಕೂಡಲು ಬರುತಲಿದೆ ||೩||

ಗಿರಿಗಳ ಮೇಲ್ಗಡೆ ನಾಚಿಕೆ ಮುಸುಕನು
ಎಳೆಯುವ ಸೆಳೆತವು ಬಲು ಮೋಡಿ
ಮಲೆಗಳ ಮೇಲಿನ ಬಲೆಯೇನೋ
ಎದೆ ಕಾಣದೆ ಮುಚ್ಚುವ ಕಲೆ ಏನೊ ||೪||

ಮೊದಲಿನಂತೆ ಬರಿ ಹುಡುಗಿ ಎಂದರೆ
ಆದೀತೇ ಚೆಲುವನು ನೋಡಿ
ಅಲ್ಲಿಂ ಬಯಲಿಗೆ ನಿರಿಯನು ಚಿಮ್ಮುತ
ಬರುತಿಹ ಒಯ್ಯಾರವ ನೋಡಿ ||೫||

ಹಳ್ಳಕೊಳ್ಳಗಳ ಕೆರೆಕಾಲುವೆಗಳ
ತಂಪಿನ ತಡಿಯಲಿ ಚೆನ್ನಾಟ
ನೀರಲಿ ಮಿಂದು ಕೂಡಲು ಚೆಲ್ಲಿ
ಕಣ್ಣು ಮಿಟುಕಿದೊಲು ಬಿಸಿಲಾಟ ||೬||

ಹಚ್ಚಹಸುರಿನ ಸೀರೆಯನುಟ್ಟು
ಚಂದಿರ ಚಿಕ್ಕೆಯ ಕುಂಕುಮ ಬೊಟ್ಟು
ಬಣ್ಣ ಬಣ್ಣಗಳ ಹೂವಿನ ಒಡವೆಯ
ಮಾಲೆ ಮಾಲೆಗಳ ಒಡನಾಟ ||೭||

ಕೈಮೈ ಡೊಂಕಿನ ಬೆಳಕಿನ ಬೆಡಗಿನ
ಛಂದವು ಬಂಧವು ಒಡಲಲ್ಲಿ
ಈಗಲೊ ಹರ್ಷದ ಪುಳಕವು ಚಿಮ್ಮಿದೆ
ಮೈಮೇಲೆಲ್ಲಾ ರಸವಲ್ಲಿ ||೮||

ಸಗ್ಗದ ಚೆಲುವಿನ ಭಂಡಾರ ಮೈ
ಗೊಂಡಿದೆ ಇನಿಯಳ ಸಿಂಗಾರ
ನವನವಯೌವನಶಾಲಿನಿ ಬಂದಳು
ಪುರುಷನ ವರಿಸುವ ಬಂಗಾರ ||೯||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...