Home / ಕವನ / ಕವಿತೆ / ಒಂದು ಸಾವಿನ ಸುತ್ತ

ಒಂದು ಸಾವಿನ ಸುತ್ತ

ಪತ್ರಿಕೆಗಳು ಸುದ್ದಿ ಮಾಡಿದವು
ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು
ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ
ರಾತ್ರಿ ಕತ್ತಲೆಯಲಿ ನಡದೇ ಹೋಯ್ತು
ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ
ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ
ಮೆಟ್ರೋ ಮಹಿಳೆಯರ ಮೈಯಲ್ಲಿ ನಡುಕ.

ಜಾಗತಿಕ ಗ್ರಾಹಕರ ನೇರ ಸಮರ್‍ಪಕ
ಕಾಲ್‌ ಸೆಂಟರ್‌ಗಳ ಲೋಕ ಭಾವನಾತ್ಮಕ
ಹೈಟೆಕ್ ಸಂಸ್ಕೃತಿಗಳ ಹಿಂದೆ ಅಡಗಿರುವ
ನೂರಾರು ಗೈರತ್ತು-ಶಿಸ್ತಿನ ಕೊಕ್ಕುಗಳು
ದಾಟಲಾಗದು ಡೆಡ್‌ಲೈನ್‌ಗಳು
ಜೀವ ಹೋದರೂ ಸರಿಯೇ
ಹೊತ್ತಲ್ಲದ ಹೊತ್ತಿನಲ್ಲಿ ನಿರಂತರ ದುಡಿತ
ಮಾನಸಿಕ ಒತ್ತಡ, ರಕ್ಷಣೆ ಕೇಳಿದರೆ
ಕೆಲಸ ಹೋಗುವ ಭಯ
ದುಡಿಯಲೇಬೇಕಿದೆ ಹೊಟ್ಟೆಪಾಡಿದೆಯಲ್ಲ?
ಸಮಾನತೆಯ ಸೂತ್ರದಲ್ಲಿ ಬಂಧಿಸಿಯಾಗಿಸಿ
ಅವಳನು ಆಪತ್ತಿನ ಬಾಯಿಗೆ ದೂಡುವುದೇಕೆ?
ಜೀವನದಿಯಾಗಿ ತುಂಬಿ ಹರಿದವಳು
ಕರ್‍ಮ ಕಾಂಡಗಳ ಸಹಿಸಿ ಬತ್ತಬೇಕೇಕೆ?
ಸೂರ್‍ಯಶಿಕಾರಿಗೆ ಹೊರಟವಳ
ದಾರಿಗೆ, ಅಡ್ಡಗೋಡೆಗಳ ಒಡ್ಡುವುದೇಕೆ?
ಎಲ್ಲ ಸಾದಿಸಲು ಹೊರಟವಳಿಗೆ
ಇಲ್ಲವಾಗಿಸುವ ಹುನ್ನಾರವೇಕೆ?
ಅವಳ ಶ್ರಮ ಕಂಪನಿಗಳ ಲಾಭಕ್ಕಲ್ಲವೇ?
ಇರಲಿ ನಮ್ಮವನೇ ಚಾಲಕ ನಮ್ಮದೇ ಕಂಪನಿ
ವಿದೇಶಿಯರ ಲಾಭಕ್ಕೆ ಇನ್ನೆಷ್ಟು ಬಲಿಗಳು?
ಕತ್ತಲೆಯ ಗೋರಿಯಿಂದ ಎದ್ದು ಬಾರಮ್ಮ
ಅವರ ಪಾತಕದ ಒಂದೊಂದು ಬಿಲ್ಲೆಯ
ಲೆಕ್ಕವನೂ ಬಿಡದೇ ಕೇಳು ಬಾರಮ್ಮ
ಇಲ್ಲವಾದರೆ ಹೆಣ್ಣಗಳು ಹೇಗೆ ದುಡಿದಾರು?
ಭೂಮಿ ಮೇಲೆ ತಮ್ಮ ತುತ್ತನ್ನು
ತಾವು ಹೇಗೆ ಗಳಿಸಿಯಾರು?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...