ಶಾಂತಿ ಮಳೆ

ಬರೀ ಮಾತುಗಳು ಇವು
ಕೇವಲ ಅರ್ಥಕಳಕೊಂಡ ಶಬ್ದಗಳು
ಬೀಜ ನೆಲದಲ್ಲಿ ಹೂತು ಪಸೆಯೊಡೆದು
ಮೊಳಕೆ ಕಟ್ಟಿ ಬೇರು ಬಿಡುವತನಕ
ಇವು ಅರ್ಥವಿಲ್ಲದ ಕೇವಲ ಮಾತುಗಳು.

ಬರೀ ಮಾತುಗಳು ಇವು
ಉಗುಳಿನ ವಿಷಕ್ಕೆ ನಂಜೇರಿದ
ಮಹಾತ್ಮನ ಶಾಂತಿ ಮಂತ್ರದ ಬೀಜ
ಮೊಳಕೆಯೊಡೆಯಲಿಲ್ಲ ಇಲ್ಲಿ
ಬೇರು ಬಿಟ್ಟು ಬೆಳೆದು ಮರವಾಗಲಿಲ್ಲ.

ಬರೀ ಮಾತುಗಳು ಇವು
ಆರಿತು ನಾಲಿಗೆಯ ಪಸೆ
ಬಂಜೆಯಾಯಿತು ನೆಲದ ಒಡಲು
ಉರಿದಾಯ್ತು ಬೋಳು ಹಾಳುಹಾಳು
ಪಸೆಯಿಲ್ಲ, ತಂಪಿಲ್ಲ, ಬರೀ ಧೂಳು.

ಬರೀ ಮಾತುಗಳು ಇವು
ಅರ್ಥಕಳಕೊಂಡ ಶಾಂತಿಮಂತ್ರ
ಅವಿರತ ಹತ್ಯೆ, ಕೋಮುಲಗಲಭೆಗಳು
ಗಲ್ಲಿ ಗಲ್ಲಿಗಳಲ್ಲಿ ಕೊಲೆಗಳು
ಬೀದಿ ಬೀದಿಗಳಲ್ಲಿ ಅತ್ಯಾಚಾರಗಳು
ಅಮಾಯಕರ ಮೃತ್ಯುಕೂಪಗಳು.

ಶಾಂತಿ…. ಶಾಂತಿ…. ಶಾಂತಿ
ಕಳಿಂಗದಿಂದ – ಕಲ್ಯಾಣದತನಕ
ಏಸುವಿನಿಂದ – ಪೈಗಂಬರತನಕ
ಬುದ್ಧನಿಂದ – ಬಸವನತನಕ
ಧೋ ಎಂದು ಸುರಿಯಲಿ ಶಾಂತಿ ಮಳೆ
ಬೆಳೆಯಲಿ ಸಮೃದ್ಧ ಶಾಂತಿ ಮಳೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯಂಕರ ರೋಗ ಸಾರ್‍ಸ್‌ಗೆ ಮದ್ದು
Next post ಮೂಡುತಿಹನದೊ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…