Home / ಕಥೆ / ಕಿರು ಕಥೆ / ನಾವೆಲ್ಲಾ ಒಂದೇ

ನಾವೆಲ್ಲಾ ಒಂದೇ

ಕೆಲವು ಪರಿವಾಳಗಳು ಮಡಿಗೆ ಶ್ರೇಷ್ಠ ಜಾಗವೆಂದು ಗುಡಿ ಗೋಪುರದಲ್ಲಿ ವಾಸವಾಗಿದ್ದವು. ಮತ್ತೆ ಕೆಲವು ಪಾರಿವಾಳಗಳು ಅಲ್ಲೇ ಅನತಿ ದೂರದಲ್ಲಿದ್ದ ಪಾಳು ಕೋಟೆಯಲ್ಲಿ ನೆಲೆಗೊಂಡಿದ್ದವು. ಎರಡು ಗುಂಪೂ ತಪ್ಪದೇ ದಿನವೂ ಗದ್ದೆ, ಹೊಲ, ಬಯಲು, ಹಸಿರಿನಲ್ಲಿ, ತೋಟಗಳಲ್ಲಿ ಆಹಾರ ಆರಿಸುವಾಗ ಒಂದಾಗುತ್ತಿದ್ದವು. ಗುಡಿಯಲ್ಲಿ ಬೀಡು ಬಿಟ್ಟ ಪಾರಿವಾಳಗಳು ಹೆಚ್ಚಳಿಕೆಯಿಂದ ತಮ್ಮ ಮಡಿವಂತಿಕೆಯನ್ನು ತೋರಿಸಿಕೊಂಡು ಪಾಳು ಕೋಟೆಯ ಪಾರಿವಾಳಗಳನ್ನು ದೂರ ಮಾಡುತಿದ್ದವು. ಒಮ್ಮೊಮ್ಮೆ ದಬ್ಬಾಳಿಕೆಯನ್ನೂ ಮಾಡುತ್ತಿದ್ದವು. ಒಂದು ಸಾರಿ ಎರಡು ಗುಂಪುಗಳ ನಡುವೆ ಘರ್‍ಷಣೆಯಾಯಿತು. ಅದರಲ್ಲಿ ಕೆಲವು ರೆಕ್ಕೆ ಪುಕ್ಕ ಕಡಿದು ಬಿದ್ದು ಜೀವವನ್ನೂ ತೆರಬೇಕಾಯಿತು. ಅಷ್ಟರಲ್ಲಿ ಒಂದು ಮುದಿ ಪಾರಿವಾಳ ಘರ್‍ಷಣೆ ನೋಡಿ ದಿಗ್ಭ್ರಾಂತವಾಗಿ ಮುಂದೆ ಬಂದು ಹೇಳಿತು.

“ಗುಡಿ ಗೋಪುರ, ಕೋಟೆ, ಅರಮನೆ, ಎಲ್ಲಿ ವಾಸವಾದರೇನು, ನಾವೆಲ್ಲ ಹಾರುವುದು ಒಂದೇ ಆಕಾಶದಲ್ಲಿ, ನೀವೆಲ್ಲಾ ಇರುವುದು ಒಂದೇ ಭೂಮಿಯಲ್ಲಿ” ಎಂದಾಗ, ಎಲ್ಲಾ ಪಾರಿವಾಳಗಳು ತಲೆ ತೂಗಿದವು.

“ಭೂಮಿ ಬಾನಿನ ಸ್ನೇಹಕ್ಕೆ ಅಂಟಿಕೊಂಡಿವೆ ನಮ್ಮ ಜಂಟಿ ರೆಕ್ಕೆಗಳು” ಎಂದು ಸ್ನೇಹ ಸೂತ್ರದಲ್ಲಿ ಒಂದಾದವು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...