Home / ಕವನ / ತತ್ವಪದ / ರುದ್ರನೋಟ

ರುದ್ರನೋಟ

ಮುಗ್ಧ ಮಾನವನು ಭಕ್ತಿ ಗೈಯುವಾಗ
ಮಾರಣ ಹೋಮ ಮಾಡುವುದು ಶೋಭೆಯೆ!
ಇಂಚು ಇಂಚು ಭಾವಗಳಿಂದ ಜೀವಿಸುವಾಗ
ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!!

ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ
ಕುಣಿಯುವ ನೀವು ಬಾಳು ಮೋಜೆಂದಿರಾ!
ದುರಾಶೆ, ದುಸ್ಸಹಾಸಗಳಲಿ ಮರೆಯುವ ನೀವು
ಕ್ರೂರ, ದುಷ್ಟತೆಗಳೇ ಪೂಜೆಯೆಂದಿರಾ!!

ದುರಾಲೋಚನೆಯೊಂದೆ ಕಷ್ಟಕಿಡುವುದು
ಮೊಸವೊಂದೆ ನಮಗೆ ಪತನ ಕೆಳೆವುದು
ಆದರೆ ಗುಂಡಿಟ್ಟು ನೀವು ಹತ್ಯೆ ಮಾಡಿದವರು
ತಪ್ಪಿದಲ್ಲ ಕರ್‍ಮ ನಿಮಗೆ ನರಕಕ್ಕಳೆವುದು

ಮನಕ್ಕೆ ನೋವುಂಟು ಮಾಡುವುದೆ ಪಾಪ
ಆದರೇನು! ನಿಮ್ಮ ಚಿತ್ರ ಹಿಂಸೆಗೆ ಲೆಕ್ಕವೆ
ಜನ್ಮ ಜನ್ಮಗಳಿಗೂ ಹತ್ಯೆಗೊಳಗಾಗುವಿರಿ
ನಿಮ್ಮ ಪಾಲಿಗೆ ನಿತ್ಯವು ದುಕ್ಕದುಕ್ಕವೆ

ದೇವನು ಸೃಷ್ಟಿಸಿದ ಈ ಧರಿತ್ರಿಯು
ಎಲ್ಲರ ಪಾಲಿನ ಇದು ಹೂದೋಟ
ಈ ಹೂದೋಟಕ್ಕೆ ಹಾಳಾಗಿಸುವ ನಿಮಗೆ
ಮಾಣಿಕ್ಯ ವಿಠಲನ ರುದ್ರನೋಟ
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...