Home / ಕಥೆ / ಕಾದಂಬರಿ / ಮಲ್ಲಿ – ೪

ಮಲ್ಲಿ – ೪

ನಾಯಕನು ಶಿವಪೂಜೆ ಮುಗಿಸಿಕೊಂಡು ನಾಷ್ಠಾ ಮಾಡಿ ಕೊಂಡು, ಬಂದು ಗಿರಿಜಾಮೀಸೆಯನ್ನು ತೀಡುತ್ತಾ ದಿವಾನ್ಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೆಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ನಿಂತಿದ್ದನು. ಅವನ ಕಂಕುಳಲ್ಲಿ ಒಂದು ಕಟ್ಟು ಕಾಗದ. ಜೊತೆಗೆ ಆಳು ಕಾಳು ಎಲ್ಲರೂ ಅಂಗಳದಲ್ಲಿ ಕಾದಿದ್ದರು.

“ಹಂಗಾದರೆ, ಸುಬೇದಾರ ತನ್ನ ಮಾತು ಉಳಸಿಕೊಂಡ?”

“ಹೌದು ಬದ್ಲಿ.”

“ನಾವು ಹೊರಟರೆ ಯಾವೊತ್ತು ಹೊರಡಬೇಕು?”

ಬ್ರೇಸ್ಪತಿವಾರ ಹೊರಡಬೇಕು! ”

“ಶುಕ್ರ ವಾರದ ಲಕ್ಷ್ಮೀಪೂಜೆ? ”

“ಜನಾನಾದಲ್ಲೇ ನಡೀಬೋದು, ಅಪ್ಪಣೆಯಾದರೆ ?”

“ಅಂಯ್ ! ಉಂಟಾ ನಂಜಪ್ಪಾ ! ಆ ತಾಯಿಯಲ್ಲವಾ ನಮ್ಮ ನ್ನೆಲ್ಲಾ ಕಾಪಾಡೋಳು? ಅವಳ ಪೂಜೆ ತಪ್ಪೋದು ಡಕ ಸಂಜೆ ಅಷ್ಟು ಹೊತ್ತದೆ ಅನ್ನುವಾಗ ಬರೋದು; ಮಡಿಗಿಡಿ ಮಾಡಿ ಪೂಜೆ ತೀರಿಸಿ ಬೆಳಗಿನ ಝಾವಕ್ಕೆ ಎದ್ದು ಶಿವಪೂಜೆ ನಾಷ್ಠಾ ಮುಗಿಸಿಕೊಂಡು ಊಟದ ಹೊತ್ತಿಗೆ ಅಲ್ಲಿಗೆ ಹೋಗಿ ಸೇರಿ ಬುಡೋದು ?”

“ಸರಿ. ಅವರೂ ಅಲ್ಲಿಗೆ ಶನಿವಾರವೇ ಬರೋದು! ಡೆಪ್ಯುಟೀ ಕಮೀಷನರು ಮಾತ್ರ ಶುಕ್ರವಾರ ಬರುತ್ತಾರೆ.”

“ಸರಿ, ಯಾರು ಯಾರು ಹೊರಡೋರು? ?

“ಬಿಡದಿಯೋರನಕ ಹೊರಟೇ ತೀರಬೇಕು. ಅವರು ಬುಧುವಾರ ರಾತ್ರೀನೇ ಹೊರಡುತ್ತಾರೆ. ಇನ್ನು ನಾಲ್ಕು ಆಳು ಅದಕೆ ಸಾಕು ಅಂತ ಕಾಣ್ತದೆ.”

“ಆಮೇಲೆ? ”

“ದಣಿ ಚಿತ್ತ.”

“ನಮ್ಮವು ನಾಲ್ಕು ಕುದುರೆಗೆ ಎರಡೆರಡಾಳು. ಜೋಡುನಲ್ಲಿ ಬಂದೂಕು ನಾಲ್ಕು, ಎರಡು ಬಾಕು ಹಲಗೆ ಕತ್ತಿ, ಎರಡು ಭಲ್ಯ, ಗುರಾಣಿ, ಮಿಣಿ, ಒಂದು ರಿವಾಲ್ವರ್, ಇಷ್ಟು ಹೋಗಬೇಕು ಅದರದರ ಸಿಬ್ಬಂದಿ ಸಮೇತ. ಇವೆಲ್ಲ ಯಾಕೆ ತಿಳೀತೋ? ಸರಿ. ಅದಕ್ಕೆ ಬೇಕಾದ ಸಿಬ್ಬಂದಿಯೆಲ್ಲ ಜೊತೇಲೇ ಇರಲಿ.”

“ಒಂದು ಡಬ್ಬಲ್ ಪೋಲ್ ಟೆಂಟ್, ಒಂದು ಸಿಂಗಲ್ ಪೋಲ್ ಕೊಡುತೀನಿ ಅಂತ ಬರೆದಿದ್ದಾರೆ.”

“ನಾವು ಅವರ ಟೆಂಟ್ ಕಾದು ಕುಳಿತರೆ ಆಗುತದಾ. ನೀವು ಇವೊತ್ತೆ ಹೋಗಿ, ಪಕ್ಕದ ಊರಲ್ಲಿ ನಮ್ಮ ಕುದುರೆ ಎತ್ತು, ಇವಕ್ಕೆ ಭದ್ರವಾದ ಒಂದು ತಡಿಕೆ ಗೋಡೆ ಮನೆ ಮಾಡಿಸಿ ಬುಡಿ. ಬರುವಾಗ ಯಾರಾದರೂ ಬಡವರಿಗೆ ಕೊಟ್ಟು ಬರೋವ. ನಮಗೆ ಇಲ್ಲಿಂದ ಎರಡು ಟೆಂಟ್ ತೆಗೆಸಿಕೊಂಡು ಹಾಕಿಸಿಬುಡಿ. ನಾವು ಬೇರೆ ಇಲ್ಲದಿದ್ದರೆ ನಮಗೆ ಮಾನ ಬಂದೀತಾ? ನಾಳೆ ಡೆಪ್ಯುಟೀಕಮೀಷನರೂ ಇಲ್ಲೇ ಇರುತೀನ್ರಿ ಅನ್ನೋ ಹಂಗೆ ಇರಲಿ.”

“ಅಪ್ಪಣೆ ಬುದ್ಧಿ ! ”

“ಹಣ ಎಷ್ಟು ತಕೊಂಡು ಹೋಗೋದು ??

“ಮೂರು ಸಾವಿರ ಸಾಕು ಅಂತ ಕಾಣ್ತದೆ.”

“ಅಂಯ್ ! ಉಂಟಾ! ಹೋಗೋದು ಭಾರೀ ಜಾಗ ಐದಾ ದರೂ ಇರಲಿ.”

“ಮಾದೇಗೌಡರೂ ಅಪ್ಪಣೆಯಾದರೆ….”

“ಬರಲಿ, ಆದರೆ ನಮ್ಮ ಕ್ಯಾಂಪ್ನಲ್ಲಿ ಇರೋದಾ. ಅವರಿಗೆ ಬೇರೆ ಒಂದು ಟೆಂಟ್ ಹಾಕಿಸಿಬುಡಿ. ಜನಾನಾದೋರು ಅನೆ ಕಟ್ಟೋ ದಿನ ಬರುತ್ತಾರೆ. ಆದಿನ ಮಂಟಪ ಗರೀಲಾದರೂ ಕಟ್ಟಿಸಿರಬೇಕು. ಅವನೋ ? ಅವನನ್ನೇನು ಮಾಡುತ್ತೀರಿ? ”

“ಯಾರು ಮಲ್ಲಣ್ಣನ್ನೇ?”

“ಹೂ! ಅವನೂ ಅವನ ಮಗಳೂ ಬರಬೇಕಲ್ಲ ? “.

“ಅಪ್ಪಣೆ ಆದರೆ ಲಾಯದ ಮಗ್ಗುಲಲ್ಲಿ ಒಂದು ಅಂಕಣ ಹಾಕಿ ಸೋದೆ.”

” ಬೊಡ್ಡೀಮಗ ಪೂರಾಮಗ. ಬೋ ರಸಿಕ. ಆ ಹೆಂಡತಿ ಬಿಟ್ಟಿರಲಾರ.. ಅವನು ಹೆಂಡ್ತೀನೂ ಕರಕೊಂಡು ಬರೋದಾದರೆ ಲಾಯದ ಮಗ್ಗುಲಲ್ಲೇ ಅವನಿಗೆ ಜಾಗಾಕೊಡಿ. ಇಲ್ಲದಿದ್ದರೆ ನಮ್ಮ ಜೊತೇಲೆ ಇದ್ದು ಬುಡಲಿ.?

“ಅವನೇ ಬಂದಿದ್ದಾನೆ.”

“ಬರಹೇಳಿ.”

ಮಲ್ಲಣ್ಣ ಬಂದು ಕಾಲೂರಿ ಕೈಚಾಚಿ ಶರಣುಮಾಡಿ ನಿಂತು ಕೊಂಡನು. ನಾಯಕನು ನಗುತ್ತಾ “ಇನ್ನು ಮೇಲೆ ನಿನ್ನ ಏನನ್ನ ಬೇಕು ಮಲ್ಲಣ್ಣ ? ಈಗ ಏನು ನೀನು ಬಾನು ಮುಟ್ಟುತಿದ್ದೀ” ಎಂದನು. ಮಲ್ಲಣ್ಣನು ಗಂಭೀರವಾಗಿ ನಗುತ್ತಾ ಕೈ ಮುಗಿದುಕೊಂಡು “ಬುದ್ಧಿಯವರು ಬಾನುಮುಟ ಬೆಳೆದವರೆ ಅಂತ ತಾನೇ ನಾವೂ ಹತ್ತುಕೊಂಡು ಹೋಗೋದು!” ಎಂದನು.

ಪಟೇಲನು ಆ ಸ್ತುತಿಯನ್ನು ಒಪ್ಪಿಕೊಳ್ಳುತ್ತಾ ಕೇಳಿದನು: “ಅಯಿತು. ಏನು? ಹೊರಡೋಡು ಯಾವೊತ್ತು ? ಯಾರ್ಯಾರು ಹೊರಡುತೀರಿ? ಹೆಂಗೆ?”

ಮಲ್ಲಣ್ಣನೂ ವಿನಯದಿಂದ ಹೇಳಿದನು: “ಬುದ್ದಿಯೋರು ಅಪ್ಪಣೆ ಕೊಡಿಸತಾ ಇದ್ದದ್ದೆಲ್ಲ ಕೇಳಿದೆ. ಸೊರ್ಗದಲ್ಲಿ ಎರಡು ದಿನ ಇರಬೇಕು ಅಂದರೆ ಬೇಡ ಅನ್ನೋರು ಯಾರು ? ಮೊಗಾ ಕರಕೊಂಡು ನಾನೊ ಬ್ಬನೇ ಬರುತೀನಿ.”

“ಆಮೇಲೆ ನಮ್ಮನ್ನೇ ಅಡಕೆಲೇ ತತ್ತಾ ಅಂದರೆ?”

ಎಲ್ಲರಿಗೂ ನಗುಬಂತುಃ ಕೆಲವರು ತಡೆಯಲಾರದೆ ನಕ್ಕು ಬಿಟ್ಟರು. ಮಲ್ಲಣ್ಣಮಾತ್ರ ಗಾಬರಿಯಾಗಿ, “ಶಿವ ಶಿವಾ! ಬುದ್ದಿ ಯೋರು ಅಡಕೆಲೆ ಉಗಿದಕಡೆ ನಿಲ್ಲೋರು ನಾವು?” ಎಂದು ಅಡ್ಡ ಬಿದ್ದನು.

“ಹಂಗಾದರಿ, ನೀನೊಬ್ಬನೇ ಬರೋನು? ಆಗಲೇಳು. ಬಿಡದೀಲಿರೋ ಯಾರಾದರೂ ಆ ಹೆಣ್ಣು ನೋಡಿಕೊಳ್ತಾರೆ. ಹೆಂಗೇ ಮಾಡು. ಎನ್ರೀ! ಈ ಮಲ್ಲಣ್ಣನಿಗೆ ಒಂದು ಮೆತ್ತೆ, ಒಂದು ಉಜ್ಜು ಗಂಬಳಿ ಒಂದು ಜೊತೆ ದುಪ್ಪಟಿ ಇವೊತ್ತೇ ಕೊಡಿಸಿ. ಬಟ್ಟೆಬರೇಗೆಲ್ಲ ಒಂದು ಐನತ್ತುರೂಪಾಯಿ ಸಾಕೋ ?”

“ಐವತ್ತುರೂಪಾಯಿ ಆದರೆ. ಒಂದು ಮನೆಕಟ್ಟಬಹುದು. ಬೇಕಾದಷ್ಟು ಆಯಿತು.?

“ಆ ಏಕನಾದಕ್ಕೆ ಒಂದಷ್ಟು ಬಣ್ಣಗಿಣ್ಣ ಹಾಕಿಸಿ ಎಲ್ಲಾ ಪಸಂದುಮಾಡು.”

ಹೌದು ಬುದಿ. ರಾಣಿ ಮೊಮ್ಮಗನ ಮುಂದೆ ಹಿಡಿಯೋವಾಗ ಅದೂ ಅಲ್ಲಿಗೆ ತಕ್ಕಂತೇ ಇರಬೇಡವಾ? ”

ಈ ಸರಿ. ನಿಂದಾಯಿತು. ಎಲ್ಲ್ರಿ? ನೀವು ಏಳಿ. ನಾನು ಹೋಗಿ ಕುದುರೆಲಾಯ ನೋಡುತೀನಿ.?

ಮಲ್ಲಣ್ಣ ಅಡ್ಡ ಬಿದ್ದು ಹೊರಟನು. ನಾಯಕರು ಏನೋ ಯೋಚಿಸಿಕೊಂಡು “ನಿನ್ನ ಹೆಂಡ್ರೂನೂನೂ ಕರಕೊಂಡು ಬಾರೋ. ಆಮೇಲೆ ಬಯ್ಕೋ ಬೇಡ” ಅಂದನು.

ಮಲ್ಲಣ್ಣ ಬಹು ಸಂತೋಷಪಟ್ಟು ಕೊಂಡು ಆ ಸಂತೋಷ ತೋರಿಸಿಕೊಳ್ಳುತ್ತಾ ‘ಅಪ್ಪಣೆ! ಪಾದ’ ಎಂದು ಕೈಮುಗಿದು ಹೋದನು, ಮನೆವಾರ್ತೆ ಎಲ್ಲರ ಮೊಕನೋಡಿದನು. ಒಬ್ಬೊಬ್ಬ ರಾಗಿ ಸಡಿಲಿದರು. ಎಲ್ಲರೂ ಹೊರಟುಹೋದಮೇಲೆ, ಅವನು ಕೊಂಚ ಹತ್ತಿರ ಬಂದ್ಕು ಬಾಯಿಗೆ ಕೈ ಅಡ್ಡವಾಗಿ ಹಿಡಿದು “ಹೋಗುವಾಗ ದಾರೀಲಿ ಮೂಗೂರಿಗೆ ಹೋಗಲೋ ? ತಿರುಮಕೂಡ್ಲಿಗೆ ಹೋಗ ಲೋ ಎಂದು ಕೇಳಿದನು

ಪಟೇಲನು ಒಂದು ಗಳಿಗೆ ಸುಮ್ಮನಿದ್ದು “ಅದಕ್ಕೇ ನಾನು ಬೇರೆ ಇರೋವ ಅಂದದ್ದು. ಈ ದೊಡ್ಡ ಸಾಹೇಬರಿಗೆ ನಮಗಿಂತ ಚಪಲ. ಕಾಗೆ ತಂದದ್ದು ಹದ್ದುಹಾರಿಸಿಕೊಂಡು ಹೋದಂಗಾದೀತು. ಆ ಸುತ್ತಮುತ್ತಿನವೇ ಯಾವಾದರೂ ನೋಡಿ.”

“ಬಂಡೀಪುರದ ಮಗ್ಗುಲಲ್ಲಿ ಸೂಳೇರು ಪೊಗದಸ್ತಾಗಿರುತಾರೆ ಅಂತಾರೆ.”

“ಸರಿ ಅಲ್ಲೇ ಒಂದು ಗೊತ್ತುಮಾಡಿ. ಹೋದ ಹೋದ ಕಡೇಲೆಲ್ಲಾ ಒಬ್ಬೊಬ್ಬ ಸೂಳೆ ಬೇಕು ಇವನಿಗೆ ಅಂತ ಸುಮ್ಮ ಸುಮ್ಮನೆ ಗೋ ದ ಮಾತು ನಿಜವಾದರೂ ಆಗಲಿ.”

ವಾರ್ತೆ ಕೈಮುಗಿದು ಹೊರಟನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...