Home / ಕವನ / ಕವಿತೆ / ಜೀನನ ಹಾಡು

ಜೀನನ ಹಾಡು

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ||
ಅದ್ದಽನ ಬೀಸಽ ಗಿದ್ದಽನ ಕುಟ್ಟ|
ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ||
ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ|
ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ||

ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ||
ಅಂಟಽದ ತೆಳೆಗ ಇಟ್ಟಾನೊ ಜೀನಾ|
ಅಂಟಽಕ ತೆಲಿಕೊಟ್ಟು ಮಲಗ್ಯಾನೊ ಜೀನಾ||

ಮುಕ್ಕ ಮಗಿ ನೀರಾ ಕಾಗಿ ಕುಡಿತಲ್ಲ|
ಕುಳ್ಳ್ಯಾಗಿನ ನುಚ್ಚ ಹದ್ದ ಒಯಿತಲ್ಲ|
ಇನ್ನ್ಯಾನ ಉಳ್ಳೇ ಇನ್ನ್ಯಾನ ತಿಲ್ಲೇ||
* * *

ಉದ ಉದ ಅಂತ ಹೋಗಿ ನಿಂತಾ`ಳೆಲ್ಲ’|
ಉದ ಉದ ಅಂದರ ನೀಡಾಽಣಿಲ್ಲ||

ಓಡ್ಯಾಡಿ ಪುಂಡಿ ಕಟಿಗಿ ಕಿತ್ತ್ಯಾನೊ ಜೀನಾ|
ಎಲ್ಲವನ ಬೆನ್ನ ಬೆನ್ನ ಶಳದಾನೊ ಜೀನಾ||

ಹೊಡಿಬ್ಯಾಡೊ ಜೀನಾ ಹೊಡಿಬ್ಯಾಡೊ ಜೀನಾ|
ಬಂದ ಹಾದೀ ಕೂಡಿ ಹೋಗತೇನೊ ಜೀನಾ||

ಜ್ವಾಳಽದ ಹೊಲಕ ಹೋಗ್ಯಾಳ ಎಲ್ಲ|
ಕಣ್ಣಾನ ಕಾಡೀಗಿ ಉದರ್‍ಸ್ಯಾಳೆಲ್ಲ||

ಹತ್ತಿಯ ಹೊಲಕ ಹೋದಾಳೆಲ್ಲಾ|
ಕೈಮ್ಯಾಲಿನ ಗಂಧಾ ಉದರ್‍ಸ್ಯಾಳೆಲ್ಲಾ||

ಗೋದೀಯ ಹೊಲಕ ಹೋದಾಳೆಲ್ಲಾ|
ಉಡಿಯಾನ ಭಂಡಾರ ಉದರ್‍ಸ್ಯಾಳೆಲ್ಲಾ||

ಕಡ್ಲೀಯ ಹೊಲಕ ಹೋದಾಳೆಲ್ಲಾ|
ಹಣಿಮ್ಯಾಲಿನ ಕೂಕಮ್ಮ ಉದರ್‍ಸ್ಯಾಳೆಲ್ಲಾ||
* * *

ಜ್ವಾಳಽದ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಜ್ವಾಳೆಲ್ಲಾ ಬತ್ತಗಾಡೀಗಿ||

ಹತ್ತೀಯ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲಾ||

ಗೋದೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್‌ತ ಖಂಡ್ಗ ಗೋದೆಲ್ಲಾ ಜೊಳ್ಳಹಾಯಿತಲ್ಲ||

ಕಡ್ಲೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್ತ್‌ ಖಂಡೆಗ್ಕಡ್ಲೆಲ್ಲಾ ಕೊಳ್ಳಿಹಾಯಿತಲ್ಲ||
* * *

ಕಂಬ್ಳೀಯ ಮುಸಕಾ ಹೊಡೆದಾನೊ ಜೀನಾ|
ಜಗಲೀಗಿ ತಲಿಕೊಟ್ಟು ಮಲಗ್ಯಾನೊ ಜೀನಾ||

ಉಣ್ಣೇಳೊ ಜೀನಾ ತಿನ್ನೇಳೊ ಜೀನಾ|
ಇನ್ನೇನ ಉಳ್ಳೇ ಇನ್ನೇನ ತಿಲ್ಲೆ||

ಹೆತ್ತ್ ಖಂಡಗ ಜ್ವಾಳೆಲ್ಲಾ ಬತ್ತ್‌ ಗಾಡೀಗೆ|
ಹೆತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲ||

ಹೆತ್ತ್‌ ಖಂಡಗ ಗೋದೆಲ್ಲಾ ಸೊಳ್ಳೆ ಹಾಯಿತಲ್ಲ|
ಹತ್ತ್‌ ಖಂಡಗ ಕಡ್ಲೆಲ್ಲಾ ಕೊಳ್ಳಿಹಾಯ್ತಲ್ಲ||
****
ಜೀನನ ಹಾಡು

ಇದೊಂದು ಯಕ್ಷಿಣಿಯ ಕಥೆ. ಜೀನನೊಬ್ಬನು ನೈವೇದ್ಯದ ಸಲುವಾಗಿ ತೀರ ತುಸು ಅಡಿಗೆಯನ್ನು ಮಾಡಿಸಿಕೊಂಡು ಎಳ್ಳಾಮಾಸೀ ದಿನ ಹೊಲಕ್ಕೆ ಹೋದನು. ಆ ಇದ್ದಷ್ಟು ಅಡಿಗೆಯನ್ನು ಗುಬ್ಬಿಕಾಗೆಗಳು ತಿಂದುಬಿಡುವವು. ಮೋರೆ ಒಣಗಿಸಿಕೊಂಡು ಕುಳಿತಿರುವ ಜೀನನ ಮುಂದೆ ಒಬ್ಬ ಯಕ್ಷಿಣಿಯು ಬಂದು `ನನ್ನ ನೈವೇದ್ಯವನ್ನು ನನಗೆ ಕೊಡು’ ಎಂದು ಕೇಳುವಳು. ಹೆಸಿದು ಹೊಟ್ಟೆ ಉರಿಯುತ್ತಿರುವ ಜೀನನು ಹಸಿದಂಟುಗಳಿಂದ ಅವಳನ್ನು
ಚೆನ್ನಾಗಿ ಥಳಿಸಿದನು. ಅವಳು ತನ್ನ ಮಂಗಲದ್ರವ್ಯ (ಅರಿಸಿಣ, ಕುಂಕುಮ್ಮ, ಕಾಡಿಗೆ, ಗಂಧ)ಗಳನ್ನು ಮಂತ್ರಿಸಿ ಅವನ ಬೆಳೆಗಳ ಮೇಲೆ ತೂರುವಳು. ಅದರಿಂದ ಆ ಬೆಳೆಗಳಿಗೆಲ್ಲ ಬಗೆಬಗೆಯ ರೋಗಗಳುಂಟಾಗಿ ಅವೆಲ್ಲವೂ ಕೆಟ್ಟುಹೋಗುತ್ತವೆ.

ಛಂದಸ್ಸು:- ಮಂದಾನಿಲ ರಗಳೆಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಅದ್ನಗಿದ್ನ=ಅರ್ಧ ಸೇರು, ಗಿರ್ಧ ಸೇರು. ಕುಳ್ಯಾಗ=ಚಿಕ್ಕ ಮಡಿಕೆಯಲ್ಲಿ. ಛರಗ=ಅಡವಿಯ ನೈವೇದ್ಯ. ಅಂಟ-ಮಂಚಿಕೆ. ಎಲ್ಲ=ಎಲ್ಲಮ್ಮ(ದೇವತೆ). ಬತ್ತಗಾಡಿಗೆ=ಜೋಳದ ತೆನೆಗಳಿಗೆ ಬೀಳುವ ಕಾಡಿಗೆರೋಗ. ಬಂಜಿ=ಹತ್ತಿಯ ಕಾಯಿಗಳಿಗೆ ಬೀಳುವ ರೋಗ. ಸೊಳ್ಳು ಹಾಯಿ=ಗೋದಿಯ ಬೆಳೆಯ ಮೇಲೆ ಇಟ್ಟಂಗಿಯಂತಹ ರೋಗ ಬೀಳುವುದರಿಂದ ಬೆಳೆಯೆಲ್ಲ ಸೊಳ್ಳಾಗುತ್ತದೆ. ಕೊಳ್ಳಿ=ಕಡಲೆಯಗಿಡೆಗಳನ್ನು ಒಣಗಿಸುವ ಕೆಂಪು ರೋಗ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...