Home / ಲೇಖನ / ವಿಜ್ಞಾನ / ಕನಸುಗಳ ಬಗೆಗೆ ವಿಜ್ಞಾನಿಗಳ ಶೋಧನೆ

ಕನಸುಗಳ ಬಗೆಗೆ ವಿಜ್ಞಾನಿಗಳ ಶೋಧನೆ

ಮನುಷ್ಯನಿಗೆ ಕನಸುಗಳದ್ದೇ ಒಂದು ಸಾಮ್ರಾಜ್ಯ. ಪ್ರತಿಯೊಬ್ಬ ವ್ಯಕ್ತಿಗೂ ಹುಚ್ಚರಿಗೂ ಕೂಡ ಕನಸುಗಳು ಬಿದ್ದು ರೋಚಕ ಅನುಭವ ನೀಡಿದ ಸತ್ಯವನ್ನು ಅನೇಕ ವಿಜ್ಞಾನಿಗಳು ಕಂಡು ಹಿಡದು ವಿಧ ವಿಧವಾಗಿ ವಿಶ್ಲೇಶಿಸಿದ್ದಾರೆ.

“ಸ್ವಪ್ನಗಳು ದೇಹಕ್ಕೆ ಒಳ್ಳೆಯ ಆರಾಮ ದೊರಕಿಸಿಕೊಟ್ಟು ಮನಶ್ಯಾಸ್ತ್ರವನ್ನು ಕಾಪಾಡುತ್ತವೆ ಎಂಬ ಅಂಶವನ್ನು ಸಂಶೋಧನೆ ಮಾಡಿದ ಚಿಕಾಗೋ ವಿ.ವಿ.ಯ ಡಾ|| ಕ್ಲೈಟನ್ ಹಾಗೂ ಅವರ ಶಿಷ್ಯರಾದ ಡಾ || ಡಿಮೆಂಟ್ ಅವರು ತೀರ್‍ಮಾನಕ್ಕೆ ಬಂದಿದ್ದಾರೆ. ಜಗದ್ವಿಖ್ಯಾತ ವಿಜ್ಞಾನಿ ಪ್ರಾಯ್ಡ್ ಅವರು ಕನಸುಗಳು ನಮ್ಮ ಅತೃಪ್ತಕಾಮನೆಗಳನ್ನು ಪೂರೈಸಿಕೊಳ್ಳುವ ಏಕೈಕ ಸಾಧನೆ” ವೆಂದು ಹೇಳಿದ್ದಾರೆ. ಮನುಷ್ಯನಿಗೆ ಹುಟ್ಟಿಂದಿನಿಂದಲೇ ಸ್ವಪ್ನಗಳು ಬೀಳಲಾರಂಭಿಸುತ್ತವೆ. ನಾವು ಸ್ವಪ್ನಾವಸ್ಥೆಯಲ್ಲಿದ್ದಾಗ ನಮ್ಮಮಿದುಳಿನಿಂದಲೂ ನಿದ್ರಾವಸ್ಥೆಯಲ್ಲಿ ಈ ಬಗೆಯ ತರಂಗಗಳು ಏಳುವುದನ್ನು ಗಮನಿಸಿ ಅವುಗಳೂ ಕನಸು ಕಾಣುತ್ತವೆ, ಎಂಬ ಅಂಶವನ್ನು ಬೆಳಕಿಗೆ ತಂದರು.

ಡಾ || ಕ್ಲೈಟನ್ ಅವರು ನೂರುಮಂದಿ ನಿದ್ರಿತರನ್ನು ಸಾವಿರ ರಾತ್ರಿಗಳ ವರೆಗೆ ಪರೀಕ್ಷಿಸಿ ಕೆಲ ಉಪಯುಕ್ತ ಅಂಶಗಳನ್ನು ಹೂರಗೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ನಾವು ಕಾಣುವ ಕನಸುಗಳು ದೃಷ್ಟಿರೂಪಕದಲ್ಲಿರುವದರಿಂದ ಸ್ವಪ್ನಾವ್ಯವಸ್ಥೆಯಲ್ಲಿ ನಮ್ಮಕಣ್ಣಾಲಿಗಳು ಚಲಿಸುತ್ತವೆ. ವ್ಯಕ್ತಿಯೊಬ್ಬ ಒಂದು ರಾತ್ರಿಯಲ್ಲಿ ಸರಾಸರಿ ೪ ಕನಸುಗಳನ್ನು ಕಾಣುತ್ತಾನೆ, ಎಂಬುದಕ್ಕೆ ಡಾ|| ಕ್ಲೈಟನ್‌ರ ಅಭಿಪ್ರಾಯವಾಗಿದೆ. ಕನಸು ಕಾಣುವಾಗ ನಮ್ಮ ಬಳಿ ನಡೆಯುವ ಘಟನೆಗಳು ಒಂದು ಭಾಗವಾಗಿ ಮಾರ್‍ಪಾಡಾಗುವ ಸಂಭವವಿದೆ ಎಂದು ಅವರು ಹೇಳುತ್ತಾರೆ. ಯಂತ್ರಜ್ಞನೊಬ್ಬ ಗಹನವಾದ ತಾಂತ್ರಿಕ ಸಮಸ್ಯೆಯೊಂದನ್ನು ಕುರಿತು ಪರಿಹಾರಕ್ಕಾಗಿ ಹಾತೊರೆಯುತ್ತ ನಿದ್ರೆಹೋದಾಗ ನಡುರಾತ್ರಿಯಲ್ಲಿ ಆತ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾನೆ. ಆ ಕ್ಷಣದಲ್ಲಿಯೇ ಅದಾವುದೋ ಅವ್ಯಕ್ತ ಚೇತನವೊಂದು ಅವನ ಸಮಸ್ಯೆಗೆ ಉತ್ತರ ದೊರಕಿಸಿಕೊಟ್ಟಿರುತ್ತದೆ. ಧಡಬಡಿಸುತ್ತಾನೆ. ಅವ್ಯಕ್ತವಾಗಿ ಸಮಸ್ಯೆಗೆ ಉತ್ತರ ಸಿಕ್ಕಂತಾಗಿರುತ್ತದೆ.

ಇಂಥಹ ಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ನಮ್ಮ ದೈನಂದಿನ ಕಾರ್‍ಯದಲ್ಲಿ ಬಗೆಹರಿಯದ ಎಷ್ಟೋ ಸಮಸ್ಯೆಗಳು ಸ್ವಪ್ನದಲ್ಲಿ ಸರಳರೂಪ ತಾಳಿ ಪರಿಹಾರದೊರಕುತ್ತವೆ. ಅದರಲ್ಲೂ ವಿಜ್ಞಾನಿಗಳು, ತಾಂತ್ರಿಕ ತಜ್ಞರು, ವೈದ್ಯರು, ಸಾಹಿತಿಗಳು ಈಚೋದ್ಯದ ಪ್ರಚೋದನೆ ಪಡೆದು ತಮ್ಮ ಪ್ರತಿಭೆಯನ್ನು ವೃದ್ಧಿಸಿಕೊಂಡಿದ್ದಾರೆ. ಟಾರ್‍ಟಿಸಿ ಎಂಬಾತನಿಗೆ “Devils Thrill” ಎಂಬ ಸ್ವರಪ್ರಸಾರ ಸ್ವಪ್ನಾವಸ್ಥೆಯಲ್ಲಿಯೇ ಹೊಳೆಯಿತು. ಕೊಲ್‌ರಿಚ್ ಎಂಬ ಕವಿ ಕನಸಿನಲ್ಲಿಯೇ ಬರೆದ ಕವನವೊಂದು ಜನಪ್ರಿಯವಾಗಿ ಎಲ್ಲರ ಮನಸ್ಸನ್ನು ಆಕರ್‍ಷಿಸಿತು. ಭಾರತದ ಪ್ರಸಿದ್ಧ ಗಣೀತತಜ್ಞರಾದ ಶ್ರೀನಿವಾಸ ರಾಮಾನುಜಮ್ ಕೆಲವು ಕಠಿಣ ಸಮಸ್ಯೆಗಳಿಗೆ ಉತ್ತರದೊರಕದಿದ್ದಾಗ ಅವುಗಳನ್ನೇ ಕುರಿತು ಯೋಚಿಸುತ್ತ ನಿದ್ರೆ ಹೋಗುತ್ತಿದ್ದರು. ಸ್ವಪ್ನದಲ್ಲಿ ಅವರಿಗೆ ಪರಿಹಾರ ದೊರೆತಾಗ ತಕ್ಷಣವೇ ಹುಚ್ಚನಂತೆ ಎದ್ದು ಅದನ್ನು ಒಂದು ಕಾಗದದಲ್ಲಿ ಬರೆದಿಡುತ್ತಿದ್ದರು. ವಿಶ್ವಮಾನ್ಯ ತತ್ವಜ್ಞಾನಿ ಹಾಗೂ ದಾರ್‍ಶನಿಕ ಬರ್‌ಟ್ರಾಂಡ್‌ರಸಲ್ಲರು ತಮ್ಮ ಆತ್ಮ ಚರಿತ್ರೆಯಲ್ಲಿ ಇಂಥಹ ಕನಸಿನ ಲೋಕದ ಬಗೆಗೆ ವಿವರಿಸಿದ್ದಾರೆ.

ಜೀವೋತ್ಪತ್ತಿಯ ಬಗೆಗೆ ವಿಕಾಸವಾದವನ್ನು (Theory of Evolution) ನಿರೂಪಿಸಿದ ವಿಶ್ವವಿಖ್ಯಾತ ವಿಜ್ಞಾನಿ ಜಾರ್‍ಲ್ಸ್‌ ಡಾರ್‍ವಿನ್ ಕೂಡ ಮನಸ್ಸಿನ ಈ ನಿಘೂಡ ಚೇತನದ ಪ್ರಯೋಜನ ಹೊಂದಿದ್ದರು. ಕೆಲವು ವಿಜ್ಞಾನಿಗಳು ಅರೆ ನಿದ್ರೆಯಲ್ಲಿದ್ದಾಗ ಸುತ್ತಮುತ್ತಲಿನ ವಾತಾವರಣವು ಪ್ರಶಾಂತವಾಗಿದ್ದಲ್ಲಿ ಮೆದುಳಿಗೆ ಆರಾಮದೊರೆತು ಅದು ಹೆಚ್ಚು ತ್ವರಿತವಾಗಿ ಕಾರ್‍ಯೋನ್ಮುಖವಾಗುತ್ತದಷ್ಟೇ ಎಂದು ಹೇಳಿದ್ದಾರೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...