Home / ಲೇಖನ / ವಿಜ್ಞಾನ / ಕನಸುಗಳ ಬಗೆಗೆ ವಿಜ್ಞಾನಿಗಳ ಶೋಧನೆ

ಕನಸುಗಳ ಬಗೆಗೆ ವಿಜ್ಞಾನಿಗಳ ಶೋಧನೆ

ಮನುಷ್ಯನಿಗೆ ಕನಸುಗಳದ್ದೇ ಒಂದು ಸಾಮ್ರಾಜ್ಯ. ಪ್ರತಿಯೊಬ್ಬ ವ್ಯಕ್ತಿಗೂ ಹುಚ್ಚರಿಗೂ ಕೂಡ ಕನಸುಗಳು ಬಿದ್ದು ರೋಚಕ ಅನುಭವ ನೀಡಿದ ಸತ್ಯವನ್ನು ಅನೇಕ ವಿಜ್ಞಾನಿಗಳು ಕಂಡು ಹಿಡದು ವಿಧ ವಿಧವಾಗಿ ವಿಶ್ಲೇಶಿಸಿದ್ದಾರೆ.

“ಸ್ವಪ್ನಗಳು ದೇಹಕ್ಕೆ ಒಳ್ಳೆಯ ಆರಾಮ ದೊರಕಿಸಿಕೊಟ್ಟು ಮನಶ್ಯಾಸ್ತ್ರವನ್ನು ಕಾಪಾಡುತ್ತವೆ ಎಂಬ ಅಂಶವನ್ನು ಸಂಶೋಧನೆ ಮಾಡಿದ ಚಿಕಾಗೋ ವಿ.ವಿ.ಯ ಡಾ|| ಕ್ಲೈಟನ್ ಹಾಗೂ ಅವರ ಶಿಷ್ಯರಾದ ಡಾ || ಡಿಮೆಂಟ್ ಅವರು ತೀರ್‍ಮಾನಕ್ಕೆ ಬಂದಿದ್ದಾರೆ. ಜಗದ್ವಿಖ್ಯಾತ ವಿಜ್ಞಾನಿ ಪ್ರಾಯ್ಡ್ ಅವರು ಕನಸುಗಳು ನಮ್ಮ ಅತೃಪ್ತಕಾಮನೆಗಳನ್ನು ಪೂರೈಸಿಕೊಳ್ಳುವ ಏಕೈಕ ಸಾಧನೆ” ವೆಂದು ಹೇಳಿದ್ದಾರೆ. ಮನುಷ್ಯನಿಗೆ ಹುಟ್ಟಿಂದಿನಿಂದಲೇ ಸ್ವಪ್ನಗಳು ಬೀಳಲಾರಂಭಿಸುತ್ತವೆ. ನಾವು ಸ್ವಪ್ನಾವಸ್ಥೆಯಲ್ಲಿದ್ದಾಗ ನಮ್ಮಮಿದುಳಿನಿಂದಲೂ ನಿದ್ರಾವಸ್ಥೆಯಲ್ಲಿ ಈ ಬಗೆಯ ತರಂಗಗಳು ಏಳುವುದನ್ನು ಗಮನಿಸಿ ಅವುಗಳೂ ಕನಸು ಕಾಣುತ್ತವೆ, ಎಂಬ ಅಂಶವನ್ನು ಬೆಳಕಿಗೆ ತಂದರು.

ಡಾ || ಕ್ಲೈಟನ್ ಅವರು ನೂರುಮಂದಿ ನಿದ್ರಿತರನ್ನು ಸಾವಿರ ರಾತ್ರಿಗಳ ವರೆಗೆ ಪರೀಕ್ಷಿಸಿ ಕೆಲ ಉಪಯುಕ್ತ ಅಂಶಗಳನ್ನು ಹೂರಗೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ನಾವು ಕಾಣುವ ಕನಸುಗಳು ದೃಷ್ಟಿರೂಪಕದಲ್ಲಿರುವದರಿಂದ ಸ್ವಪ್ನಾವ್ಯವಸ್ಥೆಯಲ್ಲಿ ನಮ್ಮಕಣ್ಣಾಲಿಗಳು ಚಲಿಸುತ್ತವೆ. ವ್ಯಕ್ತಿಯೊಬ್ಬ ಒಂದು ರಾತ್ರಿಯಲ್ಲಿ ಸರಾಸರಿ ೪ ಕನಸುಗಳನ್ನು ಕಾಣುತ್ತಾನೆ, ಎಂಬುದಕ್ಕೆ ಡಾ|| ಕ್ಲೈಟನ್‌ರ ಅಭಿಪ್ರಾಯವಾಗಿದೆ. ಕನಸು ಕಾಣುವಾಗ ನಮ್ಮ ಬಳಿ ನಡೆಯುವ ಘಟನೆಗಳು ಒಂದು ಭಾಗವಾಗಿ ಮಾರ್‍ಪಾಡಾಗುವ ಸಂಭವವಿದೆ ಎಂದು ಅವರು ಹೇಳುತ್ತಾರೆ. ಯಂತ್ರಜ್ಞನೊಬ್ಬ ಗಹನವಾದ ತಾಂತ್ರಿಕ ಸಮಸ್ಯೆಯೊಂದನ್ನು ಕುರಿತು ಪರಿಹಾರಕ್ಕಾಗಿ ಹಾತೊರೆಯುತ್ತ ನಿದ್ರೆಹೋದಾಗ ನಡುರಾತ್ರಿಯಲ್ಲಿ ಆತ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾನೆ. ಆ ಕ್ಷಣದಲ್ಲಿಯೇ ಅದಾವುದೋ ಅವ್ಯಕ್ತ ಚೇತನವೊಂದು ಅವನ ಸಮಸ್ಯೆಗೆ ಉತ್ತರ ದೊರಕಿಸಿಕೊಟ್ಟಿರುತ್ತದೆ. ಧಡಬಡಿಸುತ್ತಾನೆ. ಅವ್ಯಕ್ತವಾಗಿ ಸಮಸ್ಯೆಗೆ ಉತ್ತರ ಸಿಕ್ಕಂತಾಗಿರುತ್ತದೆ.

ಇಂಥಹ ಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ನಮ್ಮ ದೈನಂದಿನ ಕಾರ್‍ಯದಲ್ಲಿ ಬಗೆಹರಿಯದ ಎಷ್ಟೋ ಸಮಸ್ಯೆಗಳು ಸ್ವಪ್ನದಲ್ಲಿ ಸರಳರೂಪ ತಾಳಿ ಪರಿಹಾರದೊರಕುತ್ತವೆ. ಅದರಲ್ಲೂ ವಿಜ್ಞಾನಿಗಳು, ತಾಂತ್ರಿಕ ತಜ್ಞರು, ವೈದ್ಯರು, ಸಾಹಿತಿಗಳು ಈಚೋದ್ಯದ ಪ್ರಚೋದನೆ ಪಡೆದು ತಮ್ಮ ಪ್ರತಿಭೆಯನ್ನು ವೃದ್ಧಿಸಿಕೊಂಡಿದ್ದಾರೆ. ಟಾರ್‍ಟಿಸಿ ಎಂಬಾತನಿಗೆ “Devils Thrill” ಎಂಬ ಸ್ವರಪ್ರಸಾರ ಸ್ವಪ್ನಾವಸ್ಥೆಯಲ್ಲಿಯೇ ಹೊಳೆಯಿತು. ಕೊಲ್‌ರಿಚ್ ಎಂಬ ಕವಿ ಕನಸಿನಲ್ಲಿಯೇ ಬರೆದ ಕವನವೊಂದು ಜನಪ್ರಿಯವಾಗಿ ಎಲ್ಲರ ಮನಸ್ಸನ್ನು ಆಕರ್‍ಷಿಸಿತು. ಭಾರತದ ಪ್ರಸಿದ್ಧ ಗಣೀತತಜ್ಞರಾದ ಶ್ರೀನಿವಾಸ ರಾಮಾನುಜಮ್ ಕೆಲವು ಕಠಿಣ ಸಮಸ್ಯೆಗಳಿಗೆ ಉತ್ತರದೊರಕದಿದ್ದಾಗ ಅವುಗಳನ್ನೇ ಕುರಿತು ಯೋಚಿಸುತ್ತ ನಿದ್ರೆ ಹೋಗುತ್ತಿದ್ದರು. ಸ್ವಪ್ನದಲ್ಲಿ ಅವರಿಗೆ ಪರಿಹಾರ ದೊರೆತಾಗ ತಕ್ಷಣವೇ ಹುಚ್ಚನಂತೆ ಎದ್ದು ಅದನ್ನು ಒಂದು ಕಾಗದದಲ್ಲಿ ಬರೆದಿಡುತ್ತಿದ್ದರು. ವಿಶ್ವಮಾನ್ಯ ತತ್ವಜ್ಞಾನಿ ಹಾಗೂ ದಾರ್‍ಶನಿಕ ಬರ್‌ಟ್ರಾಂಡ್‌ರಸಲ್ಲರು ತಮ್ಮ ಆತ್ಮ ಚರಿತ್ರೆಯಲ್ಲಿ ಇಂಥಹ ಕನಸಿನ ಲೋಕದ ಬಗೆಗೆ ವಿವರಿಸಿದ್ದಾರೆ.

ಜೀವೋತ್ಪತ್ತಿಯ ಬಗೆಗೆ ವಿಕಾಸವಾದವನ್ನು (Theory of Evolution) ನಿರೂಪಿಸಿದ ವಿಶ್ವವಿಖ್ಯಾತ ವಿಜ್ಞಾನಿ ಜಾರ್‍ಲ್ಸ್‌ ಡಾರ್‍ವಿನ್ ಕೂಡ ಮನಸ್ಸಿನ ಈ ನಿಘೂಡ ಚೇತನದ ಪ್ರಯೋಜನ ಹೊಂದಿದ್ದರು. ಕೆಲವು ವಿಜ್ಞಾನಿಗಳು ಅರೆ ನಿದ್ರೆಯಲ್ಲಿದ್ದಾಗ ಸುತ್ತಮುತ್ತಲಿನ ವಾತಾವರಣವು ಪ್ರಶಾಂತವಾಗಿದ್ದಲ್ಲಿ ಮೆದುಳಿಗೆ ಆರಾಮದೊರೆತು ಅದು ಹೆಚ್ಚು ತ್ವರಿತವಾಗಿ ಕಾರ್‍ಯೋನ್ಮುಖವಾಗುತ್ತದಷ್ಟೇ ಎಂದು ಹೇಳಿದ್ದಾರೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...