Home / ಕವನ / ಕವಿತೆ / ನಂಬಿಕೆ

ನಂಬಿಕೆ

ತೆನೆ – ೧

ಗಂಟೆಯ ಮುಳ್ಳು ನಿಂತಿದೆ
ನಿಮಿಷದ ಮುಳ್ಳಿಗೋ ಗರಬಡಿದಿದೆ
ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ
ಮೂಗುಬ್ಬಸದಿಂದ ತೆವಳುತಿದೆ
ಸೋರುತ್ತಿದೆ ಗಳಿಗೆ ಬಟ್ಟಲು
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಪಿಸುಗುಟ್ಟುವ ಚಂದಿರ
ಏರಿಸುತ್ತಾನೆ ಅಮಲು !

ಹೊತ್ತಲ್ಲದ ಹೊತ್ತಲ್ಲಿ
ಎದ್ದು ಬಂದಿದ್ದಾನೆ
ನಿದ್ದೆಗಣ್ಣಿನಲ್ಲೇ ಚಂದಿರ
ಹಾಡು ಮುಗಿಯುತ್ತದೆ
ಜಾವ ಹೊರಳುತ್ತದೆ
ಗಡಿಯಾರ ನಿಂತರೇನು
ಕಾಲ ಸರಿಯುತ್ತದೆ
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಗೊಣಗುತ್ತಲೇ ಮೂಡಿಸುತ್ತಾನೆ ದಿಗಿಲು!

ತೆನೆ-೨
ಒಳಗಿದ್ದದೂ ಹೊರಗುಳಿಯುವ
ಹಠಕ್ಕೆ ಬಿದ್ದು
ಎಲ್ಲಾ ಒದ್ದು
ಬೆಳಕಿಗೇ ಬೆನ್ನು ತಿರುಗಿಸಿ
ಆಕಾಶಕ್ಕೆ ಏಣಿ ಒರಗಿಸಿ
ಎತ್ತರಕ್ಕೇರಿ ಕುಳಿತ ಚಂದಿರನಿಗೆ
ಆಳಗಳು ಆರ್ಥವಾಗುವುದೆಲ್ಲಿ ?

ಹೊಸತಿಗೆ ತೆರೆದುಕೊಳ್ಳುವುದೇನೂ
ಕಷ್ಟವಲ್ಲ
ಬಾಗಿಲು ತೆರೆದುಬಿಡಬಹುದು
ಬೇಕೆನಿಸಿದ ಹೊಸತನ್ನೆಲ್ಲಾ
ಒಳಗೆ ಕರೆದುಬಿಡಬಹುದು
ಎದೆ ನೋವು ನದಿಯಾಗಿ ಹರಿದು
ಎಲ್ಲಾ ಕೊಚ್ಚಿ ಹೋಗುವ ಮೊದಲು
ಕಾಲನ ತಡೆದುಬಿಡಬಹುದು
ಆದರೆ…
ತೆರೆದ ಬಾಗಿಲಿನೊಂದಿಗೇ
ಧೂಳು ಕಸಕಡ್ಡಿಗಳೂ ಬಂದೆರಗಿದರೆ
ಹೇಗೆ ತಡೆಯುವುದು?
ಎಂದೆಲ್ಲಾ ಗೊಂದಲ!

ಆ ಮನವ
ಬೊಗಸೆಯಲಿ ಹಿಡಿದ ಚಂದಿರ
ಕಣ್ಣುಗಳ ಕೂಡಿಸಿ
ನೂರು ಮುತ್ತುಗಳ
ಪ್ರಮಾಣದ ಭರವಸೆಯನ್ನೊತ್ತಿ
ಹೊಸತೆಲ್ಲವೂ ಒಳಿತೆಂದು ಒಪ್ಪಿಸಿದ್ದಾನೆ
ಬಾಗಿಲು ತೆರೆಸಿದ್ದಾನೆ
ಹೊಸ ಬೆಳಕಿಗೆ ಕಣ್ಣು ಮೂಡಿಸಿದ್ದಾನೆ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...