Home / ಕವನ / ಕವಿತೆ / ಮಹಾತ್ಮರಿಗೆ

ಮಹಾತ್ಮರಿಗೆ

ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು
ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು
ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು
ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು.

ಎಲ್ಲ ಹೃದಯವ ಹೊಕ್ಕು – ಅಳೆದು ಜನುಮಗಳನ್ನು
ಎಲ್ಲ ಶೂಲೆಯನರಿದು – ಎರೆದು ಓಷಧಿಗಳನು
ಎಲ್ಲ ಹಿಂಸೆಯ ತೊಡೆದು – ಮುರಿದು ದುರ್ಗುಣಗಳನು
ಸೊಲ್ಲು ಸೊಲ್ಲಿಗೆ ಸತ್ಯ – ಕಾಣಿಸುವ ಗುರು ಶರಣು.

ನೀನು ನಡೆದುದೆ ಧರ್ಮ- ನೀನು ನುಡಿದುದೆ ಸತ್ಯ.
ನೀನಹಂಕಾರಗಳ – ಮೋಹ ರೋಷದ ಮಿಥ್ಯ
ಮಾನಾಭಿಮಾನಗಳ – ಹಾಯ್ದು ಕಂಡಿಹೆ ಸತ್ಯ.
ನೀನು ಪ್ರೇಮದ ಮೂರ್ತಿ – ಜಾಗ್ರತನು ನೀ ನಿತ್ಯ.

ಕೃಷ್ಣಟನಾಡಿತಮೆಲ್ಲ – ಹಾಸುಹೊಕ್ಕಾಗಿಹುದು
ಕೃಷ್ಣ ನೀನಾಗಿರಲು – ವಿಜಯರಾವಹುದಹುದು
ಈ ಕುರುಕ್ಷೇತ್ರದಲಿ – ನೀನು ಸಾರಥಿಯಾಗಿ
ಲೋಕ ರಕ್ಷಿಸು ಗಾಂಧಿ – ಸನ್ಮಹಾತ್ಮನೆ ಸಾಗಿ.

ಸತ್ವರಜತಮಗುಣವ – ಹಸುರು ಬಿಳಿ ಕೆಂಪುಗಳ
ನಿತ್ಯಕೇತನವೆತ್ತಿ – ಸ್ನೇಹದಿಂ ಲೋಕಗಳ
ಅತ್ಯಧಿಕ ವಾತ್ಸಲ್ಯ – ಅಭಯ ವಿಶ್ವಾಸಗಳ
ಸ್ತುತ್ಯ ಮೂರುತಿ ಶರಣು – ನೆನೆವೆ ನಿನ್ನಂಘ್ರಿಗಳ.

ಹತ್ತು ದಿಕ್ಕುಗಳಲ್ಲಿ – ಕರುಣವಾಹಿನಿ ಹರಿಸಿ
ಮತ್ತೆ ಬಿಂಬಿಸಿ ನಿನ್ನ – ನೆಲ್ಲ ಹೃದಯದೊಳಿರಿಸಿ
ಓ ಹಸನ್ಮುಖಿ ಬಾರ – ಶಾಂತಿ ಲೋಕದಿ ಸುರಿಸಿ
ಶ್ರೀಹಸಾದವ ನೀಡು- ಓ ಮಹಾತ್ಮನೆ ಹರಸಿ-

ವಾಣಿಯಲ್ಲಿ ಶ್ರೀರಾಮ – ರಾಮಚಂದ್ರನನಾಮ
ಕ್ಷೋಣಿಯಲಿ ರಘುರಾಮ – ನಾಮ ಪಾವನನಾಮ
ಸಕಲಕೆಲ್ಲಕು ಮರ್ದು – ರಾಂ ರಹೀಮರನಾಮ
ನಿಖಿಳದೇವರ ನಿಜವ – ನೊರೆವ ಸಾಧು ಸನಾಮ.

ನಿನ್ನ ಬಾಳೀ ಜಗದ- ರಕ್ಷಣೆಗೆ ಮುಡುಪಾಯ್ತು
ಸನ್ನುತನೆ ಭಾರತಿಯ – ಬಿಡುಗಡೆಗೆ ಎಡೆಯಾಯ್ತು
ಉನ್ನತಾಮಲ ಕೀರ್ತಿ – ಮಾನಿನಿಗೆ ಚಿರಮಾಯ್ತು.
ಮುನ್ನ ಸ್ವಾತಂತ್ರ್ಯಕ್ಕೆ – ಸುಸ್ಥಿರದ ಜಯಮಾಯ್ತು.

ಲೋಕವೇ ನಿನದಾಯ್ತು – ನೀನು ಸರ್ವರೊಳಿರಲು
ಶ್ರೀಕರಾಂಘ್ರಿಯ ರೇಣು – ಎಮ್ಮ ಶಿರದೊಳಗಿರಲು
ಸಾಕು ನಿನ್ನ ಸ್ಮರಣೆ – ಸಕಲರನ್ನೆಬ್ಬಿಸಲು
ಶೋಕದಳಿವುದು ದೇವ – ನಿನ್ನ ಕೃಪೆಯೊಂದಿರಲು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...