Home / ಕವನ / ಕೋಲಾಟ / ತಾನಾನಾ ತಂದ್ರನಾನಾ

ತಾನಾನಾ ತಂದ್ರನಾನಾ

(ಕೆರ್‌ಯಾ ಯೇರಿಯ ಮೇನೇ)

ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ
ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ ||

ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ
ಕಡುಜೀಲ ಬನುಕೇ ನಡದೀದ || ೨ ||

ಕಡುಜೀಲ ಬನುದಲ್ಲಿ ಕಡುಜಾಣರ ಕಾವೀಲ
ಅಂಬೂ ಬಿಲ್ಲಿಟ್ಟೂ ಹೊಡದಾರೇ ತಾನಽ || ೩ ||

ಅಂಬೂ ಬಿಲ್ಲಿಟ್ಟೂ ಹೊಡಿದವ್ರೆ ಬಸುವಪ್ಪ
ಸಬಾ ಬಿದ್ದಿ ಭೂಮಿ ಮೇನೇ || ೪ ||

ಕಾಯಾ ಹೋಗಿತ ಸ್ವಾಮಿ ಬಳಿಗೇ | ಬಳೀಗೆ ಹೋಗುತನ
ಸ್ವಾಮ್ಯವ್ರು ದೇವಾರ ಪೂಜೆಗೆ ನಿಂತೀರೋ ತಾನಾನ || ೫ ||

‘ಯೇನು ಬಂದೆ ಬಸುವಪ್ಪ? ಯೆಂತು ಬಂದೆ ಬಸುವಪ್ಪ
ಬಂದಾ ಕಾರಣ ನನುಗೇಳು’ ತಾನಾನಾ || ೬ ||

‘ಯೇನು ಅಲ್ಲ ಯೇಲು ಸ್ವಾಮಿ, ಯೆಂತು ಅಲ್ಲ ಯೇಲು ಸ್ವಾಮೀ
ನರುಲೋಕ ನಾನೂ ನಲುಗ್ಲಾರೇ’ ತಾನಾನಾ || ೭ ||

‘ಜಡ್ಯಾಕೊಂಬಿನ ಬಸವ ಕೆರ್‌ಯಾಯೇರಿಯ ಮೇನೇ
ಹಾರಾಡಿ ಮೆಂದೇ ಹೂಡಿಹುಲ್ಲಾ ತಾನಾನಾ | ಹೂಡಿಹುಲ್ಲ ಯೇಲು ಸ್ವಾಮಿ’
ಕಡುಜೀಲ ಬನುಕೇ ನಡುದೀನೇ || ೮ ||

ಕಡುಜೀಲ ಬನುದಲ್ಲಿ ಕಡುಜಾಣರು ಕಾವೀಲ
ಅಂಬೂ ಬಿಲ್ಲಟ್ಟೀ ಹೊಡುದಾರೂ || ೯ ||

ಅಂಬೂ ಬಿಲ್ಲಿಟ್ಟಿ ಹೋಡುದಾರೂ
‘ಅಂಬೂ ಬಿಲ್ಲಿಟ್ಟೇ ಹೋಡುದಾರು ಯೆಲುಸ್ವಾಮೀ
ನನ ಸಬಾ ಬಿದ್ದಿತು ಭೂಮಿ ಮೇನೇ || ೧೦ ||

ಕಾಯಾ ಬಂದಿದೆ ಸ್ವಾಮಿ ಬಳಿಗೆ ಯೆಲು ಸ್ವಾಮೀ’
‘ನಿನ್ನ ಮಾತೀಗ್ ನಾ ಮರುಳಾದನಲ್ಲ ಗರೂಡಾ
ವಳ್ಳೇ ದೇವರ ಕೋಲೂ ಉಳಿವನ ಕೋಲು ಕೋಲೂ’ || ೧೧ ||

‘ಬಚವನಾ ಬಚವನ್ನಿರೇ ಬಚವನಾ ಪಾದಕೆ ಚರಣನ್ನಿರೇ
ಮೇಲೆ ಮುತ್ತಿನ ಚತ್ತುಗೇ ಅದು ನಮ್ಮ ಕಲ್ಲಾ ಪಾಂಡವರಾ ಬಚುವಾ || ೧೨ ||

ನರಲೋ ಕ ನಾನೂ ಸಲ್ಗನಾರೇ ತಾನಾನಾ’ | ಎಂದೇಳಿ
ಬಸಪ್ಪ ಬಿದ್ದಿ ಬಿದ್ದಿ ಹೊರುಳ್ತಾನೋ || ೧೩ ||

ಯೆಟ್ಟೊಂದು ಮಾತಾ ಹೇಳೀರು ಸ್ವಾಮ್ಯವ್ರು
ಬಸಪ್ಪ ಯೆಬ್ಸಿ ಕುಳ್‌ಸೀರು ತಾನಾ || ೧೪ ||

‘ಕೇಳು ಕೇಳೂ ಬಸುವಪ್ಪ, ನೀ ಕೇಳೋ ಬಸುವಪ್ಪ
ನರಲೋಕ ನೀನೂ ಸಲ್ಗಬೇಕೂ ತಾನಾನಾ || ೧೫ ||

ಕಾಮಕ್ಕೆ ಜನಾ ಕೊಡುತೇ, ಮೇವುಕೆ ಹೊಲನಾ ಕೊಡುತೇ
ಇಂದೇ ತೋ ಡಿದ ಬಾವೀ, ಇಂದೇ ನೀರು ಬಂದೀ || ೧೬ ||

ರಂಬ್ಯಾರು ಮಿಂದೂ ಮಡಿಯುಟ್ಟೂ ಉಟ್ಟಿ | ಮಡಿಯಾ ಕಟ್ಟೀ
ಗೋವೀನಡುಗೀಗೇ ಅನುಕೂಲ’ || ೧೭ ||

‘ಗಂದಾಲಕ್ಷತ ತನ್ನಿ ಗಿಂಡೀಲುದಕವ ತನ್ನೀ
ಬಾಳೇಯ ಹಣ್ಣಾ ಸೋಲು ತನ್ನಿ | ಸೋಲು ತನ್ನೀ ನಮ್ಮನೀಯಾ || ೧೮ ||

ಬಸವೀನ ಪೂಜ್ಯಾ ಕನುಕೂಲ’
‘ಕೊಟುಗೀಲಿ ಕೆಸುರಂದೀ ಬೆಟ್ಟದಲ್ಲಿರುಬೇಡ || ೧೯ ||

ಲಲ್ಲೈದದೆ ನಿನ್ನಾ ದುಸುಮಾನಾ
ಅಲ್ಲೇದರೆ ನಿನ್ನಾ ದುಸುಮಾನ ಸಿರಿಕೌಲೀ || ೨೦ ||

ಹೊತ್ತುಳ್ಳರೆ ಬಾರೇ ಕೊಟುಗೀಗೇ’
‘ಕಾಳೀಗ್ ಗಂದಾ ಸೀಡೀ ಬೋಳೀಗಕ್ಸತ ನೀಡೀ || ೨೧ ||

ಹಾಳೀಯಾ ಕರುವೇನ ಬಲುವಿಂದ್ರಾ ಲಪ್ಪಯ್ಯಾ
ಚಿನ್ನದ ಬಟ್ಟಾ ಇಡೂಬಾರೋ ’ || ೨೨ ||

‘ಹಿತ್ತಲ ಕಡುಗೀನಾ ಮೊಟ್ಟುತೀ ಹುಲ್ಲನೆ
ಮೆಟ್ಟದೇ ಬಾರೇ ಸೀರಿಕೌಲಿ ನಿನ್ನೊಡತೀ || ೨೩ ||

ಕಟ್ಟದೇ ಹಾಲಾ ಕರವದೂ
ಕೆಂದಲಾಕಳೆ ನಿನ್ನಾ ಭಾರಾ ಕೆಚ್ಚಲ ಕಂಡೂ || ೨೪ ||

ಕಂಡವರಾ ದೃಷ್ಟಿ ತರವಲ್ಲ | ತರುವಲ್ಲ ವಸುತಾಯೇ
ಹಿಂಡಿನ ಮರು ಸೇರೀ ಬರೂಬೇಕೇ || ೨೫ ||

ಹುಲ್ಲು ಸಾಲವಂದಿ ಕೊಟುಗೀಗೇ ಬರುದಿರಬೇಡಾ
ಹೊತ್ತುಳ್ಳೆ ಕೊಟ್ಟುಗೀಗೇ ಬರೂಬೇಕೇ || ೨೬ ||

ಬರುಬೇಕು ನಿನ್ವೊಡಿಯಾ ಹೊನ್ನಿಗೆ ವಂದ್ ಹೋ ರಿಯಾ ತರುಸೂವಾ
ಇಂದೇ ನಮ್ಮನಿಲೀ ಗೋ ವಿನಬ್ಬ ಅಂದೇ || ೨೭ ||

ಗೋವೀಗ್ ಹೋದ್ ವಡಿಯಾ ತಿರೂಗ್ಬಂದಾ
ಗೋವೀಗ್ ಹೋದ್ ವಡಿಯಾ ತಿರ್ಗೆಸುತ ಲಹ್ನ ಸೊಂಟಾನಾ || ೨೮ ||

ವ್ಯಾವಾಳದ ಗುರುತಾ ಅವಗಿಲ್ಲಾ
ಅತ್ತೀಯೆಲ್ಲಾಮೇನೇ ಹತಕೊಳ್ಗಕ್ಕಿಯನ್ನ || ೨೯ ||

ಹತ್ತೂ ನೂರಡಿಕೇ ಕೊಡೀಯೇಲೇ
ಹತ್ತೂ ನೂರಡಿಕೇ ಕೊಡೀಯೆಲೇ ಕೊರಳಿಗೆ ದಾಬ || ೩೦ ||

ಯೇಳೇ ಸಿರಿ ಕೌಲೀ ಉಳಿಲಕ್ಕು
ಆಲಾದೆಲೆಮೇಲೇ ಆರ್ ಕೊಳಗಕ್ಕಿ ರೊಟ್ಟೀ || ೩೧ ||

ಅರ್ ಹಿಂಗರ ಕೊನೇ ಪಡಿಯೆಲೇ ಕೊರಳಿಗೆ ಚಿನ್ನದ ಡಾಬಾ
‘ಯೇಳೇ ಪಸು ತಾಯೇ ಉಣಲಕ್ಕೂ || ೩೨ ||

ನರಲೋಕ ನೀನೂ ಸಲ್ಗ್‌ಬೇಕೂ’ ತಾನಾನಾ
‘ಕಾವುಕೂ ಜನ್ರೂ ಬೇಡ ಮೇವಾಕೂ ಹೊಲವೂ ಬೇಡ || ೩೩ ||

ನರಲೋಕ ನಾನೂ ಸಲುಗ್ನಾರೇ’ ತಾನಾನಾ
‘ಕಟ್ಟುಕೆ ದಾಬಾ ಕೊಡುತೆ ಉಳವಲ್ಲೀ ಕೊಟ್ಟೆಗೆಯ ಕೊಡುತೇ || ೩೪ ||

ವರಸಕೆ ವಂದು ಹಬ್ಬ ನಿನುಗ್ ಕೊಡುತೇ’ ತಾನಾನಾ
‘ಕಟ್ಟುಕೆ ದಾಬಾ ಬೇಡ, ಉಳುಕೆ ಕೊಟುಗೀ ಬೇಡ || ೩೫ ||

ವರುಸಕೆ ವಂದೆ ಹಬ್ಬ ನನಗು ಬೇಡ’ ತಾನಾನಾ
ಲಟ್ಟೊಂದು ಮಾತಾ ಹೇಳೂವಾ ತಾಕಿನ್ನೇ || ೩೬ ||

ಸ್ವಾಮ್ಯವ್ರಿಗೆ ಸಿಟ್ಟು ಬರುವದೂ ತಾನಾನಾ
ಸ್ವಾಮ್ಯವ್ರಿಗೆ ಸಿಟ್ಟು ಬಂದಿಲ ಯೇನು ಮಾಡಿರು || ೩೭ ||

ಬೆಳ್ಳಿಯ ಬೆತ್ತ ತಡುದವ್ರೇ | ಸ್ವಾಮ್ಯವ್ರು
ಬಸಪ್ಪಗೆ ಯೆಯ್ಡು ಹೊಡುದೀರೂ ತಾನಾನಾ || ೩೮ ||

“ಕೇಳು ಕೇಳೂ ಬಸುವಪ್ಪ, ನೀ ಕೇಳೊ
ಬಸುವಪ್ಪ, ನಾ ಹೇಳೀದ ಮಾತಾ ಕೇಳೂಬೇಕೂ’ ತಾನಾನಾ || ೩೯ ||

‘ಕೇಳು ಕೇಳಿ ನನು ಸ್ವಾಮೀ, ನೀವೇ ಕೇಳಿ ನನು ಸ್ವಾಮಿ
ನರುಲೋಕ ನಾನೂ ಸಲುಗ್ ಬತ್ತೇ’ ತಾನಾನಾ || ೪೦ ||

ಅಟ್ಟೊಂದು ಮಾತ ಹೇಳೀರು ಸ್ವಾಮೀರು
‘ವಾಲಿ ಇಟ್ಟ ಅಕ್ಕ, ಕರಿಬಾರೇ ತಾನಾನಾ | ಬಸುವಪ್ಪ || ೪೧ ||

ಶೀರೀ ಉಟ್ಟ ಅಕ್ಕ ಕಟುನಾರೇ’ ತಾನಾನಾ
ಅಟ್ಟೊಂದ್ ಮಾತಾ ಹೇಳಿಲರು ಸ್ವಾಮ್ಯಾವ್ರು
‘ನರಲೋ ಕ ಸಲುಗೀ ಬರುಬೇಕೂ’ ತಾನನಾ || ೪೨ ||
*****
ಹೇಳಿದವರು: ಸೌ. ನಾಗಮ್ಮ ಮಾಸ್ತಿ ನಾಯ್ಕ, ಹೆಗಡೆಯೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...