Home / ಕವನ / ಕೋಲಾಟ / ಪರಮೇಶ್ವರಗೆ ವಲವಾದೋ (ಕೋಲಾಟ)

ಪರಮೇಶ್ವರಗೆ ವಲವಾದೋ (ಕೋಲಾಟ)

ಶಿವನೇ ನೆನೆಯೋ ಶಿವನೇ ನೆನೆಯೋ
ಈ ಊರಾ ರಾಮದೇವರ ನೆನೆಯೋ
ಈ ಊರ ಹಿತ ಕಾಯೋರ ನೆನೆಯೋ
ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ
ತೇರೋ ತೇರೋ ಹೂವಿನ ತೇರೋ || ೧ ||

ಬಾಗಿಲಲೆ ಬಲಿಯಾರಿ ದಂಡು
ಮೇನೆ ಗುರಗುಂಜೀ ಶೆಂಡೂ
ನಾರೀ ಬಂದಾನೇ ನಲ್ಲಾ ಬಾಗಿಲ ಮುಂದೇ
ತಾನ ನಾನಾ ತಂದಾನೋ ತಾನೀನೋ ತಾನಾ || ೨ ||

ಕಾಲಿಗೆ ಕಿರುಗೆಜ್ಜೆ ಕಟ್ಟೀ ಹೂವಿನಂತಾ ತೇರಕಟ್ಟಿ
ಜನಾಮ್ನೆ ಶ್ವಾಮಿ ಭೂಮಿಗ್ವೊಂದ ನೆನೆಯೋ
ಶಿವನೇ ನಿನಗ್ಯಾತರ ಗಂದನೋ || ೩ ||

ಊರ ಶುತ್ತೇಲಿ ಮುತ್ತೇಯೋ
ಪರುವತ ದೊಡ್ಡಾ ಗುಡ್ಡೆ ಹೋ
ಗುಡ್ಡೆ ವಂದು ತಲಿಯಾ ಮ್ಯಾಲಿನ್ನೇ
ನಾಕ ಮೂಲೆ ಕಾಕಾದಾ ಕೆರೆಯೋಲೇ || ೪ ||

ಕೆರವಲಗೆ ನೀರಿನಾ ಮಘನಾನೋ
ಆವಾ ನೀರಿನೋ ಳಗೆ ಯಾತರ ಮುಗುಲಂದೋ
ನೆಲ್ಲೀದೊಂದು ತಾಂಬಾರ ಹುಟ್ಟೀಲೇ || ೫ ||

ಅವಾ ಹೂಗಿಗೊಂದ್ ಯಾತರ ಕದುರಾದೋ
ತಾಂಬಕೊಲ್ಲಿದು ನೆಲ್ಲಿಯು ಹುಟ್ಟೇಗೆ
ಯಾವದೊಂದು ತಾಂಬಾರ ಹುಟ್ಟೀಲೇ
ಅವಾ ಹುಟ್ಟಿಗೆ ಯಂತಾ ಯೆಶುಲಾದೋ || ೬ ||

ಯಂಟೂ ದಿಕ್ಕೇ ಯಂಟೇಲೆಯೇ
ನೆಡುಗೊಂದು ಶಿನ್ನಾದಾ ಕದುರಾಗೋ
ಅವಾ ಕದ್ರು ಯರೀಸಿ ವಲುಪ್ಯಾದೋ
ಪರಮತ ಪರಮೇಸ್ರಗೆ ವಲುವಾದೋ || ೭ ||
*****
ಹೇಳಿದವರು : ಕುಪ್ಪು ಮಾರು ಗೌಡ, ಕೂಜಳ್ಳಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...